ಮಣಿಪುರದಲ್ಲಿ ಹಿಂಸಾಚಾರ ; ಕಂಡಲ್ಲಿ ಗುಂಡಿಕ್ಕಲು ಆದೇಶ ಬೆನ್ನಲ್ಲೇ ಸೇನೆ ಕಾರ್ಯಾಚರಣೆ, ಕರ್ಫ್ಯೂ ಹೇರಿಕೆ, ಅಮಿತ್ ಷಾ ರಾಜ್ಯದ ಕಾರ್ಯಕ್ರಮ ರದ್ದು 

05-05-23 11:01 pm       HK News Desk   ದೇಶ - ವಿದೇಶ

ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಭಾರತೀಯ ಸೇನಾಪಡೆ ಹಿಂಸೆ ಹತೋಟಿಗೆ ತರಲು ಮುಂದಾಗಿದೆ. ರಾಜ್ಯದಾದ್ಯಂತ ಹಿಂಸಾಚಾರ ನಡೆದಿದ್ದು ಬಹುತೇಕ ಕಡೆ ಸೇನಾ ಪ್ರಯೋಗ ನಡೆದಿದ್ದು ಹಿಂಸೆಯನ್ನು ನಿಯಂತ್ರಣಕ್ಕೆ ತರಲಾಗಿದೆ. 

ನವದೆಹಲಿ, ಮೇ 5: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಭಾರತೀಯ ಸೇನಾಪಡೆ ಹಿಂಸೆ ಹತೋಟಿಗೆ ತರಲು ಮುಂದಾಗಿದೆ. ರಾಜ್ಯದಾದ್ಯಂತ ಹಿಂಸಾಚಾರ ನಡೆದಿದ್ದು ಬಹುತೇಕ ಕಡೆ ಸೇನಾ ಪ್ರಯೋಗ ನಡೆದಿದ್ದು ಹಿಂಸೆಯನ್ನು ನಿಯಂತ್ರಣಕ್ಕೆ ತರಲಾಗಿದೆ. 

ಚುರಾಚಂದ್‌ಪುರ ಜಿಲ್ಲೆಯಿಂದ ರಾಜಧಾನಿ ಇಂಫಾಲ್‌ ವರೆಗೆ ಮಣಿಪುರ ರಾಜ್ಯಾದ್ಯಂತ ಕುಕಿ ಬುಡಕಟ್ಟು ಜನಾಂಗ ಮತ್ತು ಬಹುಸಂಖ್ಯಾತ ಮೈತಿ ಸಮುದಾಯದ ನಡುವೆ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ಕೈಮೀರಿದರೆ, ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಸರ್ಕಾರ ಆದೇಶ ಮಾಡಿದೆ. 1973ರ CRPC ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಆದೇಶಕ್ಕೆ ರಾಜ್ಯಪಾಲರು ಸಹಿ ಮಾಡಿದ್ದಾರೆ. 

ಎಲ್ಲಾ ರೀತಿಯ ಮನವೊಲಿಕೆ ಹಾಗೂ ಎಚ್ಚರಿಕೆ ನಡುವೆಯೂ ಬಗ್ಗದೇ ಹೋದರೆ, ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಗೃಹ ಇಲಾಖೆ ಸೂಚನೆ ನೀಡಿದೆ. ಆದೇಶಗಳನ್ನು ಹೊರಡಿಸಲು ರಾಜ್ಯದ ಮಾಜಿಸ್ಟ್ರೇಟರ್‌ಗಳಿಗೆ ಅಧಿಕಾರ ನೀಡಲಾಗಿದೆ. ಗಲಭೆ ನಿಯಂತ್ರಣಕ್ಕೆ ರ್ಯಾಪಿಡ್ ಆಕ್ಷನ್‌ ಫೋರ್ಸ್‌ ನ 500 ಸಿಬ್ಬಂದಿಯನ್ನು ಇಂಫಾಲ್‌ ಗೆ ಕಳುಹಿಸಲಾಗಿದೆ.

Manipur Violence News LIVE: Amit Shah to closely monitor Manipur situation,  cancels Karnataka poll campaign | Mint

ಹಿಂಸಾಚಾರದಿಂದ 10 ಮಂದಿ ಸಾವನ್ನಪ್ಪಿದ್ದು, ಹಿಂಸೆ ಪೀಡಿತ ಪ್ರದೇಶಗಳಿಂದ ಸುಮಾರು 9,000 ಜನರನ್ನು ಸ್ಥಳಾಂತರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಹಿಂಸಾಚಾರ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರಚಾರ ಕಾರ್ಯವನ್ನು ಅಮಿತ್ ಷಾ ಸ್ಥಗಿತಗೊಳಿಸಿದ್ದಾರೆ. 

Manipur violence | Home Minister Amit Shah reviews Manipur situation, more  forces, anti-riot vehicles sent to state - Telegraph India

ಇಂಫಾಲ್ ಕಣಿವೆಯಲ್ಲಿ ಪ್ರಾಬಲ್ಯ ಹೊಂದಿರುವ ಮೇಟೈಸ್ ಸಮುದಾಯ ಪರಿಶಿಷ್ಟ ಪಂಗಡದ ಬೇಡಿಕೆಗಾಗಿ ಚುರಾಚಂದ್‌ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ ಅಖಿಲ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಮಣಿಪುರ (ಎಟಿಎಸ್‌ಯುಎಂ) ಕರೆ ನೀಡಿದ್ದ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ'ಯಲ್ಲಿ ಮೇ 3ರಂದು ಹಿಂಸಾಚಾರ ನಡೆದಿತ್ತು. ಇದರ ಬೆನ್ನಲ್ಲೇ ಮಣಿಪುರದ ಹಲವಾರು ಜಿಲ್ಲೆಗಳಲ್ಲಿ ಬುಡಕಟ್ಟು ಗುಂಪುಗಳು ಪ್ರಭಟನಾ ಮೆರವಣಿಗೆಗಳನ್ನು ನಡೆಸಿದ್ದು ಕಾನೂನು, ಸುವ್ಯವಸ್ಥೆ ನಿಭಾಯಿಸಲು ರಾಜ್ಯ ಸರ್ಕಾರವು ಐದು ದಿನಗಳ ಕಾಲ ಮೊಬೈಲ್, ಇಂಟರ್ನೆಟ್ ಸ್ಥಗಿತಗೊಳಿಸಿದೆ. ದೊಡ್ಡ ಗುಂಪು ಸೇರುವುದನ್ನು ನಿಷೇಧಿಸುವುದರ ಜೊತೆಗೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

Union Home Minister Amit Shah has cancelled all his programmes for the upcoming assembly elections in Karnataka in the wake of clashes reported in parts of Manipur, sources said. According to the sources, Mr Shah who is closely monitoring the situation in Manipur, is expected to continue to hold meetings with authorities in the state, about the prevailing scene and measures being taken to restore normalcy.