ಬ್ರೇಕಿಂಗ್ ನ್ಯೂಸ್
13-04-23 06:15 pm HK News Desk ದೇಶ - ವಿದೇಶ
ಅಂಕೋಲಾ, ಎ.13 : ಇಲ್ಲೊಬ್ಬರು ಹಣ್ಣು ಮಾರಾಟಗಾರ್ತಿ ತನ್ನ ಅದ್ಭುತ ಕಾರ್ಯದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಇವರ ನಿಸ್ವಾರ್ಥ ಕಾರ್ಯ ಎಲ್ಲರಿಗೂ ಮಾದರಿಯೂ ಹೌದು. ಇದೇ ಕಾರಣದಿಂದ ಅಂಕೋಲಾದ ಈ ಮಹಿಳೆ ಈಗ ತನ್ನ ಕಾರ್ಯದ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಮಾಜದಲ್ಲಿ ಕೆಲವರು ತೋರುವ ನಿಸ್ವಾರ್ಥ ಸೇವೆ ನಿಜಕ್ಕೂ ನಮಗೆ ಸ್ಫೂರ್ತಿ ತುಂಬುತ್ತದೆ. ನಾವು ಮಾಡುವ ಒಂದೊಂದು ಒಳ್ಳೆಯ ಕೆಲಸವೂ ಸಮಾಜದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಅದಕ್ಕೆ ಈ ಮಹಿಳೆ ಸಾಕ್ಷಿ. ಇವರ ಕಾರ್ಯವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ಕೊಂಡಾಡಿದ್ದಾರೆ.
ಟ್ವಿಟ್ಟರ್ ಬಳಕೆದಾರರಾರ ಆದರ್ಶ್ ಹೆಗ್ಡೆ ಎಂಬವರು ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದು ಅಂಕೋಲಾ ಬಸ್ ನಿಲ್ದಾಣದಲ್ಲಿ ಸೆರೆಯಾಗಿದ್ದ ದೃಶ್ಯ. ಮಹಿಳೆಯೊಬ್ಬರು ನಿಲ್ದಾಣದ ಕಸವನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುವ ದೃಶ್ಯವಿದು. ಇಷ್ಟಕ್ಕೂ ಈಕೆ ಹಣ್ಣುಗಳ ಮಾರಾಟಗಾರ್ತಿ. ಎಲೆಗಳಲ್ಲಿ ಕಟ್ಟಿ ಈಕೆ ಹಣ್ಣನ್ನು ಮಾರಾಟ ಮಾಡುತ್ತಾರೆ. ಆದರೆ, ಕೆಲ ಗ್ರಾಹಕರು ಹಣ್ಣನ್ನು ತಿಂದು ಈ ಎಲೆಗಳು ಮತ್ತು ಸಿಪ್ಪೆಯನ್ನು ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಹೀಗೆ ತನ್ನ ಗ್ರಾಹಕರು ಎಸೆದ ಕಸವನ್ನು ಈಕೆ ಹೆಕ್ಕಿ ಕಸದ ಬುಟ್ಟಿಗೆ ಹಾಕುತ್ತಾರೆ.ಈ ಕೆಲಸ ತನ್ನದಲ್ಲ ಎಂದು ಇವರು ಸುಮ್ಮನಾಗಬಹುದಿತ್ತು. ಆದರೆ, ತಾನು ಹಣ್ಣು ಮಾರಾಟ ಮಾಡುವ ನಿಲ್ದಾಣದ ಸ್ವಚ್ಛತೆಯ ಬಗ್ಗೆ ಈ ಮಹಿಳೆ ಕಾಳಜಿ ತೋರಿದ್ದಾರೆ. ಇದೇ ಕಾರಣಕ್ಕೆ ಇವರು ಈಗ ಎಲ್ಲರ ಗಮನ ಸೆಳೆದಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಈಕೆಯ ಕಾರ್ಯವನ್ನು ಮೆಚ್ಚಿಕೊಂಡಿದ್ದಲ್ಲದೆ ಸಹಾಯ ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.
ಮಹಿಳೆಯ ಹೆಸರು ಮೋಹಿನಿ ಕೃಷ್ಣ ಗೌಡ ಎಂದು ಗೊತ್ತಾಗಿದೆ. ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಜತೆಗೆ, ಮೋಹಿನಿ ಅವರ ಕಾರ್ಯವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇವರ ಕಾರ್ಯ ಮಾದರಿಯೂ ಆಗಿದೆ.
These are the real, quiet heroes making Bharat Swachh. I really would like her to know that her efforts have not gone unnoticed & are appreciated. How do you suggest we can do that? @adarshahgd can you find someone who lives in that area & can contact her? https://t.co/2SzlTE9LZy
— anand mahindra (@anandmahindra) April 11, 2023
Anand Mahindra retweeted a video of a woman who was seen cleaning up a bus stand in Karnataka. Adarsh Hegde, who initially shared this video, mentioned that she is a fruit seller who operates in Ankola bus stand. She serves chopped fruits in a plate made of leaves. However, once the customers are done eating, they litter the bus stop by throwing them in and around the premises.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm