ಬ್ರೇಕಿಂಗ್ ನ್ಯೂಸ್
10-04-23 06:53 pm HK News Desk ದೇಶ - ವಿದೇಶ
ನವದೆಹಲಿ, ಎ.10 : ಬಾಲಕನ ತುಟಿಗೆ ಮುತ್ತು ಕೊಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೌದ್ಧ ಧರ್ಮಗುರು ದಲೈಲಾಮಾ, ಬಾಲಕ ಮತ್ತು ಆತನ ಕುಟುಂಬಕ್ಕೆ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ, ದಲೈಲಾಮಾ ಅವರು ತಮ್ಮನ್ನು ಭೇಟಿಯಾಗುವ ಜನರನ್ನು ಮುಗ್ಧ ಹಾಗೂ ತಮಾಷೆ ರೀತಿಯಲ್ಲಿ ಕೀಟಲೆ ಮಾಡುತ್ತಾರೆ ಎಂದು ದಲೈಲಾಮಾ ಅವರ ತಂಡ ಹೇಳಿಕೆ ನೀಡಿದೆ.
ಕ್ಷಮೆ ಯಾಚನೆಯ ಟಿಪ್ಪಣಿಯನ್ನು ದಲೈಲಾಮಾ ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ಷಮಾಪಣೆ ಟಿಪ್ಪಣಿಯನ್ನು ದಲೈಲಾಮಾ ಪರವಾದ ತಂಡ ಬರೆದುಕೊಂಡಿದ್ದು, ದಲೈಲಾಮಾ ವರ್ತನೆಯಿಂದ ನೋವಾಗಿದ್ದರೆ ಆ ಬಾಲಕ ಹಾಗೂ ಅವರ ಕುಟುಂಬ ಮತ್ತು ವಿಶ್ವಾದ್ಯಂತ ಇರುವ ಸ್ನೇಹಿತರಲ್ಲಿ ಅವರು ಕ್ಷಮೆ ಯಾಚಿಸುತ್ತಾರೆ. ದಲೈಲಾಮಾ ಅವರು ತಮ್ಮನ್ನು ಭೇಟಿಯಾಗುವ ಜನರನ್ನು ಮುಗ್ಧ ಮತ್ತು ತಮಾಷೆಯ ರೀತಿಯಲ್ಲಿ ನೋಡುತ್ತಾರೆ. ಈ ಘಟನೆಯ ಬಗ್ಗೆ ಅವರು ವಿಷಾದ ವ್ಯಕ್ತಪಡಿಸುತ್ತಾರೆ ಎಂದು ಹೇಳಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ದಲೈಲಾಮಾ ಬಾಲಕನ ತುಟಿಗಳಿಗೆ ಮುತ್ತಿಡುತ್ತಾ ಹಣೆ ಸ್ಪರ್ಶಿಸುತ್ತಿರುವ ದೃಶ್ಯ ಇತ್ತು. ಅಲ್ಲದೆ, ತಮ್ಮ ನಾಲಿಗೆಯನ್ನು ಹೊರಹಾಕಿ ನಾಲಿಗೆಯನ್ನು ನೆಕ್ಕುವಂತೆ ಹೇಳಿರುವ ದೃಶ್ಯಗಳು ಅದೇ ವಿಡಿಯೋದಲ್ಲಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ದಲೈಲಾಮಾ ವಿರುದ್ಧ ಕಿಡಿಕಾರಿದ್ದರು.
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿರುವ ದಲೈಲಾಮಾ ಈ ಹಿಂದೆ 2019ರಲ್ಲಿ ಇದೇ ರೀತಿಯ ವಿವಾದ ಸೃಷ್ಟಿಸಿಕೊಂಡಿದ್ದರು. ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ ಅವರು ನೋಡಲು ಆಕರ್ಷಕವಾಗಿರಬೇಕು ಎಂದು ಹೇಳಿದ್ದರು. ಅದು ವಿವಾದವಾದ ಬಳಿಕ ಕ್ಷಮೆ ಯಾಚಿಸಿದ್ದರು. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ದಲೈಲಾಮಾ, ಮಹಿಳಾ ದಲೈಲಾಮಾ ಬರಬೇಕೆಂದರೆ ಅವಳು ಹೆಚ್ಚು ಆಕರ್ಷಕವಾಗಿರಬೇಕು ಎಂದು ಹೇಳಿದ್ದು ವಿವಾದಕ್ಕೆ ಒಳಗಾಗಿತ್ತು.
The Dalai Lama has apologised to a young boy after a video emerged online of the spiritual Tibetan Buddhist leader kissing him on the lips and asking him to suck his tongue. The disturbing video of the most senior spiritual figure in Tibetan Buddhism was recorded during an event in northern India's hillside city of Dharamshala back in February.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm