ಧಾರ್ಮಿಕ ವಿಧಾನಗಳಲ್ಲಿ ತೊಡಗಿದ್ದ 5 ಅರ್ಚಕರು ಕೆರೆಯಲ್ಲಿ ಮುಳುಗಿ ಸಾವು ; ಮೂರ್ತಿ ಎತ್ತಿಕೊಂಡು ಹೋಗುವಾಗ ದುರಂತ 

05-04-23 07:12 pm       HK News Desk   ದೇಶ - ವಿದೇಶ

ತಮಿಳುನಾಡಿನ ಮೂವರಸನ್‌ಪೇಟ್‌ನಲ್ಲಿರುವ ಧರ್ಮಲಿಂಗೇಶ್ವರ ದೇವಾಲಯದ ಕೆರೆಯಲ್ಲಿ ಮುಳುಗಿ ಐವರು ಅರ್ಚಕರು  ಮೃತಪಟ್ಟಿದ್ದಾರೆ.

ಚೆನ್ನೈ, ಎ.5: ತಮಿಳುನಾಡಿನ ಮೂವರಸನ್‌ಪೇಟ್‌ನಲ್ಲಿರುವ ಧರ್ಮಲಿಂಗೇಶ್ವರ ದೇವಾಲಯದ ಕೆರೆಯಲ್ಲಿ ಮುಳುಗಿ ಐವರು ಅರ್ಚಕರು  ಮೃತಪಟ್ಟಿದ್ದಾರೆ.

ಸುಮಾರು 25 ಅರ್ಚಕರು ಕೆರೆಯಲ್ಲಿ ನಟರಾಜರ್‌ ತೀರ್ಥಾವರಿ ಧಾರ್ಮಿಕ ವಿಧಿವಿಧಾನ ನೆರವೇರಿಸುವಾಗ ಕಾಲು ಜಾರಿ ಬಿದ್ದು ಐವರು ಅರ್ಚಕರು ಸಾವಿಗೀಡಾಗಿದ್ದಾರೆ.

ತೀರ್ಥಾವರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಮೂರ್ತಿಯನ್ನು ಎತ್ತಿಕೊಂಡು ಅರ್ಚಕರು ಹೋಗುತ್ತಿದ್ದರು. ಇದೇ ವೇಳೆ ಮುಂದೆ ಇದ್ದ ಇಬ್ಬರು ಅರ್ಚಕರು ನೀರಿನಲ್ಲಿ ಮುಳುಗಿದ್ದಾರೆ. ಇವರು ವಾಪಸ್‌ ಬರದ ಕಾರಣ, ಇವರನ್ನು ರಕ್ಷಿಸಲು ಮತ್ತೆ ಮೂವರು ಅರ್ಚಕರು ನೀರಿಗೆ ಮುಳುಗಿದ್ದಾರೆ. ಕೆರೆಯು ಸುಮಾರು 20 ಅಡಿ ಇದ್ದ ಕಾರಣ ನೀರಿನಲ್ಲಿ ಮುಳುಗಿದ ಐವರೂ ಅರ್ಚಕರು ಮೃತಪಟ್ಟಿದ್ದಾರೆ.

ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

Five temple priests allegedly died by drowning in a lake at Moovarasanpet near Madipakkam on Wednesday morning. The five men were part of a group of 25 priests who were taking part in a ceremony at the late. According to sources, the five men were identified as Surya (24) of Nanganallur, Raghavan (22) of Madipakkam, Yoheshwaran (23) of Keelkatalai, Vanesh (20) of Nanganallur, and Raghavan (18) of Nanganallur. All five priests were taking part in a ceremony at Dharmalingeshwar Temple in Moovarasanpet.