ಇಂಡಿಯನ್ ಮುಜಾಹಿದೀನ್ ಉಗ್ರನೆಂದು ಬಂಧಿಸಿದ್ದ ಭಟ್ಕಳದ ಸಿದ್ದಿಬಾಪಾ ಆರೋಪ ಸಾಬೀತಿಗೆ ಎನ್ಐಎ ವಿಫಲ ; ಜೈಲಿನಿಂದ ಬಿಡುಗಡೆ 

03-04-23 06:45 pm       HK News Desk   ದೇಶ - ವಿದೇಶ

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯನಾಗಿದ್ದಲ್ಲದೆ, ದೇಶದಲ್ಲಿ ವಿಧ್ವಂಸಕಾರಿ ಕೃತ್ಯಗಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹೀದ್ ಸಿದ್ದಿಬಾಪಾ ಸೇರಿ ಮೂವರನ್ನು ದಿಲ್ಲಿಯ ಪಾಟಿಯಾಲ ಹೌಸ್ ನ್ಯಾಯಾಲಯ ಜೈಲಿನಿಂದ ಬಿಡುಗಡೆಗೊಳಿಸಿದೆ.

ನವದೆಹಲಿ, ಎ.3 : ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯನಾಗಿದ್ದಲ್ಲದೆ, ದೇಶದಲ್ಲಿ ವಿಧ್ವಂಸಕಾರಿ ಕೃತ್ಯಗಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹೀದ್ ಸಿದ್ದಿಬಾಪಾ ಸೇರಿ ಮೂವರನ್ನು ದಿಲ್ಲಿಯ ಪಾಟಿಯಾಲ ಹೌಸ್ ನ್ಯಾಯಾಲಯ ಜೈಲಿನಿಂದ ಬಿಡುಗಡೆಗೊಳಿಸಿದೆ.

ಮನ್ಸರ್ ಇಮಾಮ್ ಮತ್ತು ಆರಿಫ್ ಖಾನ್ ಬಿಡುಗಡೆಗೊಂಡ ಇನ್ನಿಬ್ಬರು ಆರೋಪಿಗಳು. ಸಿದ್ದಿಬಾಪಾ 2016ರಲ್ಲಿ ಎನ್ಐಎ ತಂಡದಿಂದ ಬಂಧಿತನಾಗಿ ಜೈಲಿನಲ್ಲಿದ್ದ. ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಸಂಘಟನೆಯ ಸದಸ್ಯನಾಗಿದ್ದ ಮನ್ಸೂರ್ ಇಮಾಮ್ 2013ರಿಂದ ಜೈಲು ವಾಸ ಅನುಭವಿಸುತ್ತಿದ್ದರೆ, 2008ರ ಬಾಟ್ಲಾ ಹೌಸ್ ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿ 2008ರಿಂದಲೂ ಜೈಲು ವಾಸ ಅನುಭವಿಸುತ್ತಿದ್ದ ಆರಿಝ್ ಖಾನ್ ಸಹ ಬಿಡುಗಡೆಯಾಗಿದ್ದಾನೆ. ಈ ಮೂವರ ಮೇಲೂ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 

ಅಬ್ದುಲ್ ವಾಹಿದ್ ಸಿದ್ದಿಬಾಪಾನನ್ನು ನವದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು. ಇಂಡಿಯನ್ ಮುಜಾಹಿದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ಸಂಬಂಧಿ ಎಂದು ಹೇಳಲಾಗಿತ್ತು. ಆತ ದುಬೈನಲ್ಲಿ ನೆಲೆಸಿದ್ದಾಗ ಅಬ್ದುಲ್ ವಾಹೀದ್ ನಿಷೇಧಿತ ಸಂಘಟನೆಗೆ ಸೇರುವಂತೆ ತನ್ನ ಓರಗೆಯವರ ಮನವೊಲಿಸುತ್ತಿದ್ದ ಎಂದು ಆರೋಪಿಸಲಾಗಿತ್ತು. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ದುಬೈನಲ್ಲಿ ಹಣ ಸಂಗ್ರಹಿಸಿದ್ದ ಆರೋಪವೂ ಅವರ ಮೇಲಿತ್ತು. ಆದರೆ ಪಾಟಿಯಾಲ ಹೌಸ್ ಸೆಷನ್ ಕೋರ್ಟ್ನಲ್ಲಿ ಸಿದ್ದಿಬಾಪಾ ವಿರುದ್ಧ ಹೊರಿಸಲಾದ ಆರೋಪಗಳನ್ನು ಸಾಬೀತುಪಡಿಸಲು ಎನ್ಐಎ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ.

Delhi’s NIA Court has ordered the framing of charges against Indian Mujahideen’s (IM) co-founder Yasin Bhatkal and 10 of its operatives for allegedly entering into a criminal conspiracy to wage war against India and being members of the banned terrorist organization. The same court in the matter also discharged the three accused noting that there is no sufficient direct evidence for proving the charge.