ಬ್ರೇಕಿಂಗ್ ನ್ಯೂಸ್
09-03-23 10:46 pm HK News Desk ದೇಶ - ವಿದೇಶ
ತಿರುವನಂತಪುರಂ, ಮಾ.9 : ಆ ದಂಪತಿಗೆ ಹಿಂದೆ ಮದುವೆಯಾಗಿದ್ದು ಮೂವರು ಹೆಣ್ಮಕ್ಕಳನ್ನು ಹೊಂದಿದ್ದಾರೆ. ಆದರೆ ಮುಸ್ಲಿಂ ಹೆಣ್ಮಕ್ಕಳಿಗೆ ಹೆತ್ತವರ ಆಸ್ತಿ ಪಡೆಯುವಲ್ಲಿ ತೊಡಕಿದೆ ಎನ್ನುವುದನ್ನು ಮನಗಂಡ ಆ ದಂಪತಿ ತಮ್ಮ ಹಳೆಯ ಮದುವೆಯನ್ನೇ ರದ್ದುಪಡಿಸಿ ವಿಶೇಷ ವಿವಾಹ ಕಾಯಿದೆಯಲ್ಲಿ ಹೊಸತಾಗಿ ಮದುವೆಯಾಗಿದ್ದಾರೆ.
ಕೇರಳದ ಕಾಞಂಗಾಡ್ ಮೂಲದ ಖ್ಯಾತ ವಕೀಲ ಸಿ. ಶುಕ್ಕೂರ್ ಮತ್ತು ಮಹಾತ್ಮ ಗಾಂಧಿ ವಿವಿಯ ಮಾಜಿ ಉಪ ಕುಲಪತಿ ಡಾ. ಶೀನಾ ಅವರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಮರು ಮದುವೆಯಾಗಿದ್ದಾರೆ. ಇಳಿ ವಯಸ್ಸಿನಲ್ಲಿ ಇವರ ಮರು ಮದುವೆ ಮುಸ್ಲಿಮರ ಅಂಧ ಕಟ್ಟುಪಾಡುಗಳ ಬಗ್ಗೆ ಮರು ಚಿಂತಿಸುವಂತೆ ಮಾಡಿದೆ.
ಅಕ್ಟೋಬರ್ 6, 1994 ರಂದು ಷರಿಯಾ ಕಾನೂನಿನಡಿ ಇವರು ಮದುವೆಯಾಗಿದ್ದರು. ಈಗ ವಿಶೇಷ ವಿವಾಹ ಕಾಯಿದೆಯಡಿ ಮರು ಮದುವೆ ಮಾಡಿಕೊಂಡಿದ್ದು ಆಮೂಲಕ ತಮ್ಮ ಮೂವರು ಹೆಣ್ಮಕ್ಕಳಿಗೆ ಸಂಪೂರ್ಣ ಆಸ್ತಿ ಹಕ್ಕನ್ನು ದಯಪಾಲಿಸಿದ್ದಾರೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಭಾಗವನ್ನು ಮಾತ್ರ ಪಡೆಯುತ್ತಾರೆ, ಉಳಿದವು ಯಾರೂ ಇಲ್ಲದಿದ್ದರೆ ತಂದೆಯ ಸಹೋದರರಿಗೆ ಹೋಗುತ್ತದೆ. ಹೀಗಾಗಿ ದಂಪತಿ ಆಯ್ಕೆ ಮಾಡಿಕೊಂಡಿದ್ದು ಮರು ಮದುವೆಯನ್ನು.
ನಮಗೆ ಪುರುಷ ಸಂತತಿ ಇಲ್ಲದಿರುವುದರಿಂದ ಆಸ್ತಿ ಸೋದರರಿಗೆ ಹೋಗುತ್ತದೆ. ಇದು ಮಹಿಳೆಯರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ತಾರತಮ್ಯವಾಗಿದೆ, ಮುಸ್ಲಿ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆಯ ಹಕ್ಕನ್ನು ನಿರಾಕರಿಸಿರುವುದು ವಿಷಾದನೀಯ ಎಂದು ಶುಕೂರ್ ಹೇಳುತ್ತಾರೆ.
ಸಂವಿಧಾನದ ಸೆಕ್ಷನ್ 14 ರ ಪ್ರಕಾರ, ಧರ್ಮ, ಜಾತಿ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಮುಸ್ಲಿಮರ ಹೆಣ್ಣುಮಕ್ಕಳಿಗೆ ಮಾತ್ರ ಈ ಹಕ್ಕನ್ನು ನಿರಾಕರಿಸಿರುವುದು ಅತ್ಯಂತ ವಿಷಾದನೀಯ. ನಾನು ಎರಡು ಬಾರಿ ಅಪಘಾತಗಳನ್ನು ಎದುರಿಸಿದ್ದೇನೆ, ಅದರಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದೇನೆ. ನಾನು ಜಗತ್ತನ್ನು ತೊರೆದ ನಂತರ ಏನಾಗುತ್ತದೆ ಎಂಬ ಚಿಂತನೆ ನನ್ನನ್ನು ಯೋಚಿಸುವಂತೆ ಮಾಡಿತು. ನನ್ನ ಹೆಣ್ಣು ಮಕ್ಕಳು ನನ್ನ ಆಸ್ತಿಯ ಏಕೈಕ ವಾರಸುದಾರರಾಗಬೇಕೆಂದು ನಾನು ಬಯಸುತ್ತೇನೆ ಎನ್ನುತ್ತಾರೆ.
The remarriage of advocate and actor C Shukkur and his wife Sheena, the former Pro Vice Chancellor of Mahatma Gandhi University under the Special Marriage Act, 29 years after they got married led to a storm on social media. The duo got married on Wednesday and took their vows again. But the purpose is what has been drawing the criticism. Their remarriage is to ensure their daughter's 'financial security', which is not permitted in Muslim law. Their three daughters were also present at the remarriage event.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm