ಔರಂಗಾಬಾದ್, ಉಸ್ಮನಾಬಾದ್ ಹೆಸರು ಬದಲಾವಣೆಗೆ ಕೇಂದ್ರ ಅಸ್ತು ; ಮಹಾರಾಷ್ಟ್ರ ಸರ್ಕಾರದ ಪ್ರಸ್ತಾವನೆ ಶೀಘ್ರದಲ್ಲೇ ಜಾರಿ 

25-02-23 04:22 pm       HK News Desk   ದೇಶ - ವಿದೇಶ

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಔರಂಗಾಬಾದ್‌ ಮತ್ತು ಒಸ್ಮಾನಾಬಾದ್‌ ಎಂಬ ಎರಡು ನಗರಗಳ ಹೆಸರನ್ನು ಮರು ನಾಮಕರಣ ಮಾಡಲು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಶಿಫಾರಸನ್ನು ಕೇಂದ್ರ ಗೃಹ ಸಚಿವಾಲಯ ಒಪ್ಪಿಕೊಂಡಿದೆ. 

ಮುಂಬೈ, ಫೆ.25 : ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಔರಂಗಾಬಾದ್‌ ಮತ್ತು ಒಸ್ಮಾನಾಬಾದ್‌ ಎಂಬ ಎರಡು ನಗರಗಳ ಹೆಸರನ್ನು ಮರು ನಾಮಕರಣ ಮಾಡಲು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಶಿಫಾರಸನ್ನು ಕೇಂದ್ರ ಗೃಹ ಸಚಿವಾಲಯ ಒಪ್ಪಿಕೊಂಡಿದೆ. 

ಮಹಾರಾಷ್ಟ್ರ ಸರ್ಕಾರ ಔರಂಗಾಬಾದ್‌ ನಗರವನ್ನು 'ಛತ್ರಪತಿ ಸಂಬಾಜಿ ನಗರ' ಎಂದು ಮತ್ತು ಒಸ್ಮಾನಾಬಾದ್‌ ನಗರವನ್ನು 'ಧಾರಾಶಿವ್‌ ನಗರ' ಎಂದು ಹೊಸ ಹೆಸರಿನಟ್ಟು ಕರೆಯಲು ನಿರ್ಧರಿಸಿದ್ದು ಈ ಕುರಿತ ನಿರ್ಣಯವನ್ನು ಅಂಗೀಕರಿಸಲು ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿತ್ತು.

ಎರಡು ನಗರಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಸಮ್ಮತಿಸಿದ ಬೆನಲ್ಲೇ ಟ್ವೀಟ್‌ ಮಾಡಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ್ದಕ್ಕೆ ನರೇಂದ್ರ ಮೋದಿ, ಅಮಿತ್‌ ಶಾಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ನಮ್ಮ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರದ ನಾಯಕತ್ವ ಈಗ ಜನರಿಗೆ ತಲುಪುತ್ತಿದೆ ಎಂದು ಬರೆದುಕೊಂಡಿದ್ದಾರೆ.

The Union government has approved the renaming of Maharashtra's Aurangabad city as 'Chhatrapati Sambhajinagar' and that of Osmanabad city as 'Dharashiv'. Maharashtra Deputy Chief Minister Devendra Fadnavis shared the news on Twitter. Aurangabad derives its name from Mughal emperor Aurangzeb, while Osmanabad was named for a 20th century ruler of the princely state of Hyderabad.