ಬ್ರೇಕಿಂಗ್ ನ್ಯೂಸ್
20-10-20 06:36 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 20: ನವರಾತ್ರಿ ಸಡಗರದ ಮಧ್ಯೆ ದೇಶವನ್ನುದ್ದೇಶಿಸಿ ಭಾಷಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಲಾಕ್ಡೌನ್ ಮುಗಿದಿದೆ, ಆದರೆ, ನಾವು ವೈರಸ್ ಮುಕ್ತರಾಗಿಲ್ಲ. ಹಬ್ಬ ಹರಿದಿನಗಳೆಂದು ಮೈಮರೆಯಬೇಡಿ ಎಂದು ಜನರಿಗೆ ಹಿತನುಡಿ ಹೇಳಿದ್ದಾರೆ. ಆದರೆ, ದೇಶದ ಜನರ ನಿರೀಕ್ಷೆಯನ್ನು ಸುಳ್ಳಾಗಿಸಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಏಳನೇ ಬಾರಿಗೆ ದೇಶವನ್ನುದ್ದೇಶಿಸಿ ಲೈವ್ ಬಂದ ಪ್ರಧಾನಿ, ದೇಶದ ಜನರಿಗೆ ಸಿಹಿಸುದ್ದಿ ನೀಡಲಿದ್ದಾರೆಂಬ ಕುತೂಹಲ, ನಿರೀಕ್ಷೆ ಮೂಡಿತ್ತು. ಆದರೆ, ಯಾವುದೇ ಹೊಸ ನಿರ್ಧಾರವನ್ನು ಮೋದಿ ಪ್ರಕಟಿಸಿಲ್ಲ. ಕೊರೊನೋತ್ತರ ಭಾರತದ ಬಗ್ಗೆ ಜನತೆಗೆ ಸ್ಫೂರ್ತಿ ಹುಟ್ಟಿಸುವ ಮಾತನ್ನೂ ಆಡಿಲ್ಲ.
ಕೊರೊನಾ ನಮ್ಮನ್ನು ಬಿಟ್ಟು ತೊಲಗಿಲ್ಲ. ದೇಶದಲ್ಲಿ ರಿಕವರಿ ರೇಟ್ ಗಮನಾರ್ಹ ಇದೆ. ಅಮೆರಿಕಾ, ಬ್ರೆಝಿಲ್ ಗೆ ಹೋಲಿಸಿದರೆ ಕೊರೊನಾ ವೈರಸ್ ಸೋಂಕು ತೀವ್ರ ಆಗಿಲ್ಲ. ಹತ್ತು ಲಕ್ಷ ಸೋಂಕಿತರಲ್ಲಿ ಕೇವಲ 83 ಜನ ಸಾವನ್ನಪ್ಪಿದ್ದಾರೆ. ಹಾಗೆಂದು ಜನ ಮೈಮರೆಯಬಾರದು. ಯಾಮಾರಿದರೆ ಆಪತ್ತು ಎದುರಾಗಬಹುದು. ನವರಾತ್ರಿ, ದೀಪಾವಳಿ, ಈದ್ ಹಬ್ಬಗಳು ಬರುತ್ತಿದ್ದು ಜನರು ಹಬ್ಬದ ಆಚರಣೆ ವೇಳೆ ಎಚ್ಚರಿಕೆ ವಹಿಸಬೇಕು. ಆದಷ್ಟು ಬೇಗ ಕೊರೊನಾ ವಿರುದ್ಧ ಲಸಿಕೆ ರೆಡಿಯಾಗಲಿದೆ. ದೇಶದ ಎಲ್ಲ ಜನರಿಗೂ ಲಸಿಕೆ ನೀಡಲು ಬದ್ಧರಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಕೇವಲ 12 ನಿಮಿಷಕ್ಕೆ ಮಾತು ಮುಗಿಸಿದ್ದು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿದೆ.
Live Video:
Prime Minister Narendra Modi today stated in the festive season, the nation must not forget that while the lockdown is over, the coronavirus is not. He said over the past few days, videos had shown that crowds were out in public, throwing caution to the winds. "You are risking your family, your children and your elders by doing so," said the Prime Minister.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm