ಬ್ರೇಕಿಂಗ್ ನ್ಯೂಸ್
02-02-23 04:52 pm HK News Desk ದೇಶ - ವಿದೇಶ
ಕೇರಳ, ಫೆ.2: ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಗರ್ಭಿಣಿ ಸೇರಿ ಇಬ್ಬರು ಸಜೀವ ದಹನವಾಗಿರುವ ಘಟನೆ ಕಣ್ಣೂರಿನಲ್ಲಿ ಗುರುವಾರ ನಡೆದಿದೆ.
ಕಾರಿನಲ್ಲಿದ್ದ 6 ಜನರ ಪೈಕಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡೋರ್ ಜಾಮ್ ಆಗಿ ಮುಂದೆ ಇದ್ದವರು ಹೊರಬರಲಾರದೇ ಸಾವನ್ನಪ್ಪಿದ್ದಾರೆ.
ಕಣ್ಣೂರು ಕುಟ್ಯಾಟೂರ್ ಕಾರರಂಬ್ ನಿವಾಸಿಗಳಾದ ಪ್ರಜಿತ್ ಮತ್ತು ಅವರ ಪತ್ನಿ ರಿಷಾ ಮೃತಪಟ್ಟವರು. ಗರ್ಭಿಣಿಯಾದ ಪತ್ನಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ನಡುವೆ ಈ ಘಟನೆಯು ಕಣ್ಣೂರು ನಗರದ ಜಿಲ್ಲಾ ಆಸ್ಪತ್ರೆ ಬಳಿ ನಡೆದಿದೆ. ಕಾರಿನಲ್ಲಿ ಆರು ಮಂದಿ ಇದ್ದರು. ಕಾರು ಚಲಾಯಿಸುತ್ತಿದ್ದ ಗರ್ಭಿಣಿ ಹಾಗೂ ಆಕೆಯ ಪತಿ ಮುಂದಿನ ಸೀಟಿನಲ್ಲಿ ಹಾಗೂ ನಾಲ್ವರು ಹಿಂದಿನ ಸೀಟಿನಲ್ಲಿದ್ದರು.

ಬೆಂಕಿ ಕಾಣಿಸಿಕೊಂಡಾಗ ಹಿಂದಿನ ಬಾಗಿಲು ತೆಗೆದ ಬಳಿಕ ಮುಂದಿನ ಬಾಗಿಲಿನಿಂದ ಇಳಿಯುವ ಮೊದಲೇ ಬೆಂಕಿ ಆವರಿಸಿಕೊಂಡು ಸಿಲುಕಿದ್ದರು, ಇದರಿಂದ ಇಬ್ಬರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಾಹನ ಚಲಾಯಿಸುತ್ತಿದ್ದ ಪತಿಯೊಂದಿಗೆ ಪತ್ನಿ ಮುಂಭಾಗದಲ್ಲಿದ್ದರು. ಹಿಂದೆ ಒಂದು ಮಗು ಸೇರಿ ನಾಲ್ವರು ಇದ್ದರು. ಮತ್ತೊಂದು ವಾಹನದಲ್ಲಿ ಬಂದವರಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಡೋರ್ ಜಾಮ್ ಆಗಿದ್ದರಿಂದ ವಾಹನದಲ್ಲಿದ್ದವರು ಹೊರಬರಲು ಸಾಧ್ಯವಾಗಲಿಲ್ಲ.

ಬೆಂಕಿ ಹರಡುತ್ತಿದ್ದಂತೆ ಚಾಲಕ ಪ್ರಜಿತ್ ಹಿಂಬಾಗಿಲನ್ನು ತೆರೆದಿದ್ದಾನೆ. ಹಿಂಬದಿ ಸೀಟಿನಲ್ಲಿದ್ದ ಮಗು ಸೇರಿ ನಾಲ್ವರು ಪಾರಾಗಿದ್ದಾರೆ. ಆದರೆ ಮುಂಬಾಗಿಲು ತೆರೆಯಲಾಗಲಿಲ್ಲ. ಅಷ್ಟರೊಳಗೆ ಬೆಂಕಿ ಮತ್ತಷ್ಟು ವ್ಯಾಪಿಸಿದೆ. ಬದುಕುಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಅಗ್ನಿಶಾಮಕ ಠಾಣೆ ಇದ್ದರೂ ಇಬ್ಬರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಷ್ಟು ವೇಗದಲ್ಲಿ ಕಾರಿಗೆ ಬೆಂಕಿ ಆವರಿಸಿಕೊಂಡಿತ್ತು.
In a tragic incident two people, including a pregnant woman, were burned to death when the car in which they were travelling suddenly caught fire in Kannur on Thursday morning. The deceased have been identified as Prajith (32) and his wife Reesha (26), both natives of Karam in Kuttiattoor.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
21-04-26 02:36 pm
HK News Staffer
ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ...
20-04-26 09:40 pm
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
21-04-26 12:44 pm
HK News Staffer
ಬೀದರ್ ; ಬಿರು ಬಿಸಿಲಿನ ಝಳಕ್ಕೆ 20 ವರ್ಷದ ಯುವಕ ಕ...
20-04-26 09:35 pm
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm
ಮಣಿಪಾಲದ ಸಾಫ್ಟ್ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷ...
20-04-26 11:13 am
ಬೈಕಿನಲ್ಲಿ 46 ಲಕ್ಷ ಮೌಲ್ಯದ ಡ್ರಗ್ಸ್ ಇಟ್ಟುಕೊಂಡು ವ...
19-04-26 10:23 pm