ಬ್ರೇಕಿಂಗ್ ನ್ಯೂಸ್
20-12-22 03:29 pm HK News Desk ದೇಶ - ವಿದೇಶ
ಜೈಪುರ, ಡಿ.20: ಬಡತನ ರೇಖೆಗಿಂತ ಕೆಳಗಿರುವ ಮತ್ತು ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಒಳಗೊಂಡಿರುವ ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ರಾಜಸ್ಥಾನ ಸರಕಾರ ಬಿಗ್ ಆಫರ್ ಘೋಷಿಸಿದೆ. ವರ್ಷದಲ್ಲಿ 12 ಸಿಲಿಂಡರ್ ಗಳನ್ನು ತಲಾ 500 ರೂ.ಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.
ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರ, ಚುನಾವಣೆ ದೃಷ್ಟಿಯಲ್ಲಿರಿಸಿ ಬೆಲೆಯೇರಿಕೆಯಿಂದ ತತ್ತರಿಸಿರುವ ಜನರಿಗೆ ಸಿಲಿಂಡರ್ ದರವನ್ನು ಇಳಿಸುವ ಘೋಷಣೆ ಮಾಡಿದೆ. ನಾನು ಮುಂದಿನ ತಿಂಗಳ ಬಜೆಟ್ ಗೆ ಸಿದ್ಧತೆ ನಡೆಸುತ್ತಿದ್ದೇನೆ. ಮೋದಿಯವರು ಉಜ್ವಲ ಯೋಜನೆಯಡಿ ಬಡವರಿಗೆ ಸಿಲಿಂಡರ್ ಗಳನ್ನು ನೀಡಿದ್ದಾರೆ. ಆದರೆ ಅವು ಈಗ ಖಾಲಿಯಾಗಿವೆ. ಯಾಕಂದ್ರೆ, ಸಿಲಿಂಡರ್ ಬೆಲೆ ಈಗ 400 ರೂ.ನಿಂದ 1040 ರೂ.ಗೆ ಏರಿಕೆಯಾಗಿದೆ. ಇದಕ್ಕಾಗಿ ನಾನು ಭರವಸೆ ನೀಡುತ್ತಿರೋದು ಏನಂದ್ರೆ, ಬಡವರಿಗೆ ಕೇವಲ 500 ರೂ.ನಲ್ಲಿಯೇ ಸಿಲಿಂಡರ್ ಗಳನ್ನು ನೀಡಲಿದ್ದೇನೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಉಪಸ್ಥಿತಿಯಲ್ಲೇ ಅಶೋಕ್ ಗೆಹ್ಲೋಟ್ ಈ ಘೋಷಣೆ ಮಾಡಿದ್ದಾರೆ.
ಮುಂದಿನ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಎರಡನೇ ಬಾರಿಗೆ ಕಾಂಗ್ರೆಸ್ ಅಧಿಕಾರಕ್ಕೇರಲು ಗೆಹ್ಲೋಟ್ ಹರಸಾಹಸ ನಡೆಸುತ್ತಿದ್ದಾರೆ. ಸಚಿನ್ ಪೈಲಟ್ ಬಳಗದ ಜೊತೆಗಿನ ಒಳಜಗಳದ ನಡುವಲ್ಲೇ ಮುಂದಿನ ಬಾರಿಯೂ ತಾನೇ ಮುಖ್ಯಮಂತ್ರಿಯಾಗಲು ಗೆಹ್ಲೋಟ್ ಕಸರತ್ತು ನಡೆಸಿದ್ದಾರೆ. ರಾಹುಲ್ ಗಾಂಧಿಯ ಭಾರತ್ ಜೋಡೊ ಯಾತ್ರೆ ರಾಜಸ್ಥಾನ ಪ್ರವೇಶ ಮಾಡಿದ ಈ ತಿಂಗಳ ಆರಂಭದಲ್ಲಿಯೇ ಅಲ್ಲಿನ ಒಳ ಜಗಳ ಹೊರಗೆ ಬಂದಿತ್ತು.
ಆದರೆ ಈ ನಡುವೆ, ರಾಹುಲ್ ಗಾಂಧಿ ಅಲ್ವಾರ್ ಜಿಲ್ಲೆಯಲ್ಲಿ ಯಾತ್ರೆಯ ನಡುವಲ್ಲೇ ರಾಜಸ್ಥಾನ ಸರಕಾರದ ಸಾಧನೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಾಜ್ಯ ಸರಕಾರ ಆರಂಭಿಸಿರುವ 1700 ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
The Congress government in Rajasthan will provide 12 LPG cylinders a year at ₹500 each to poor families enrolled under the Pradhan Mantri Ujjwala Yojana from April 1, Chief Minister Ashok Gehlot said on Monday. Mr. Gehlot made the announcement at a public meeting organised during Congress leader Rahul Gandhi’s Bharat Jodo Yatra at Mala Kheda village in Alwar district.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm