ಬ್ರೇಕಿಂಗ್ ನ್ಯೂಸ್
04-12-22 09:43 pm HK News Desk ದೇಶ - ವಿದೇಶ
ಅಹ್ಮದಾಬಾದ್, ಡಿ.4: ಮುಸ್ಲಿಂ ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದು ಇಸ್ಲಾಂ ವಿರೋಧಿ ನಡೆ ಎಂದು ಅಹ್ಮದಾಬಾದಿನ ಜಾಮಿಯಾ ಮಸೀದಿಯ ಶಾಹಿ ಇಮಾಮ್ ಶಬೀರ್ ಅಹ್ಮದ್ ಸಿದ್ದಿಕಿ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿ ಆಡಳಿತ ಕೇಂದ್ರಕ್ಕೆ ಬಂದರೆ, ಇಸ್ಲಾಮ್ ಧರ್ಮ ದುರ್ಬಲವಾಗುತ್ತದೆ. ಅದರಿಂದ ಇಸ್ಲಾಮಿನ ಕಟ್ಟುಪಾಡುಗಳನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಕರ್ನಾಟಕದ ಹಿಜಾಬ್ ಕುರಿತ ಪ್ರಶ್ನೆಗೆ, ಮುಸ್ಲಿಮ್ ಮಹಿಳೆಯರು ಶಾಸಕರು, ಸಚಿವ ಸ್ಥಾನಕ್ಕೆ ಬಂದರೆ ಏನಾಗುತ್ತದೆ ಅಂದರೆ, ಹಿಜಾಬ್ ಕುರಿತು ಪ್ರಶ್ನೆಯನ್ನು ಎತ್ತುವುದು ಸಾಧ್ಯವಾಗುವುದಿಲ್ಲ. ಅಂಥ ಪ್ರಶ್ನೆ ನಾವು ಮುಂದಿಟ್ಟಾಗ ನಿಮ್ಮ ಮಹಿಳೆಯರೇ ಇಲ್ಲಿ ಶಾಸಕರಾಗಿದ್ದಾರಲ್ಲಾ ಎಂಬ ಪ್ರಶ್ನೆ ಬರುತ್ತದೆ. ಅದಕ್ಕಾಗಿ ಮುಸ್ಲಿಂ ಮಹಿಳೆ ಆಡಳಿತ ಕೇಂದ್ರಕ್ಕೆ ಬರಬಾರದು ಅನ್ನುವುದು. ಯಾಕೆ, ನಮ್ಮಲ್ಲಿ ಪುರುಷರು ಇಲ್ಲವೇ ಎಂದವರು ಪ್ರಶ್ನೆ ಮಾಡಿದ್ದಾರೆ.
ಮುಸ್ಲಿಮ್ ಮಹಿಳೆಯರಿಗೆ ಟಿಕೆಟ್ ಕೊಡುವುದನ್ನು ವಿರೋಧಿಸಿ ಮನೆ- ಮನೆ ಅಭಿಯಾನ ನಡೆಸುತ್ತೇವೆ. ನಾವು ಎಲ್ಲರಲ್ಲಿಯೂ ನಮ್ಮ ಧರ್ಮದ ಬಗ್ಗೆ ಮನವರಿಕೆ ಮಾಡುತ್ತೇವೆ ಎಂದು ಶಬೀರ್ ಅಹ್ಮದ್ ಹೇಳಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಮುಸ್ಲಿಂ ಮಹಿಳೆಯರು ಕಾರ್ಪೊರೇಟರ್ ಆಗಿದ್ದಾರಲ್ಲವೇ ಎಂಬ ಪ್ರಶ್ನೆಗೆ, ಇದರಿಂದ ನನಗೆ ಅರ್ಥ ಆಗೋದು ಏನಂದ್ರೆ, ಈಗ ಮಹಿಳೆಯರ ನಿಯಂತ್ರಣ ಬಂದಿದೆಯೆಂದು ರಾಜಕೀಯ ಪಕ್ಷಗಳವರು ಅನ್ಕೊಂಡಿದ್ದಾರೆ. ಹಾಗಾಗಿ ಮಹಿಳೆಯರನ್ನು ಟ್ರಾಪ್ ಮಾಡಿದರೆ, ಇಡೀ ಕುಟುಂಬವನ್ನು ಟ್ರಾಪ್ ಮಾಡಬಹುದೆಂಬ ಹುನ್ನಾರ ಇರಬಹುದು. ಇದರ ಹಿಂದೆ ಬೇರೆ ಯಾವುದೇ ಅಜೆಂಡಾ ಇದ್ದಂತೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.
ಗುಜರಾತಿನಲ್ಲಿ ಡಿ.5ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಶಾಹಿ ಇಮಾಮ್ ಹೇಳಿಕೆ ಅಲ್ಲಿನ ಮುಸ್ಲಿಮ್ ಮಹಿಳೆಯರ ಮೇಲೆ ಪ್ರಭಾವ ಬೀರುತ್ತಾ ಅನ್ನುವ ಕುತೂಹಲ ಇದೆ.
#WATCH | Those who give election tickets to Muslim women are against Islam, weakening the religion. Are there no men left?: Shabbir Ahmed Siddiqui, Shahi Imam of Jama Masjid in Ahmedabad#Gujarat pic.twitter.com/5RpYLG7gqW
— ANI (@ANI) December 4, 2022
Shabbir Ahmed Siddiqui, the Shahi Imam of the Jama Masjid in Gujarat's Ahmedabad said those who give election tickets to Muslim women are against Islam and are weakening the religion. Talking to news agency ANI, he further asked, "Are there no men that you're bringing women?" Speaking on the idea of weakening Islam, he mentioned the hijab protests in Karnataka and said, "If you make women MLAs, ministers and councillors, then what will happen? We can no longer safeguard hijabs, and we won't be able to raise this issue."
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 11:27 am
Mangalore Correspondent
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm