ಬ್ರೇಕಿಂಗ್ ನ್ಯೂಸ್
31-10-22 05:38 pm HK News Desk ದೇಶ - ವಿದೇಶ
ಕೋಜಿಕ್ಕೋಡ್, ಅ.31 : ಕೇರಳದ ಕೋಝಿಕೋಡ್ ಜಿಲ್ಲೆಯ ನೈನಂವಳಪ್ಪು ಎಂಬಲ್ಲಿ ಸಮುದ್ರ ತೀರದಲ್ಲಿ ಹಠಾತ್ತಾಗಿ 50 ಮೀಟರ್ ಉದ್ದಕ್ಕೆ ಸಮುದ್ರ ಹಿಂದೆ ಸರಿದು ನಿಂತಿದ್ದಲ್ಲದೆ, ಸರೋವರದ ರೀತಿ ಅಲೆಗಳಿಲ್ಲದೆ ನಿಶ್ಚಲವಾಗಿ ನಿಂತ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಶನಿವಾರ ಸಂಜೆ ಈ ರೀತಿಯ ವಿದ್ಯಮಾನ ನಡೆದಿದ್ದು ವಿಷಯ ತಿಳಿಯುತ್ತಲೇ ಜನರು ವಿಸ್ಮಯ ನೋಡಲು ಬಂದಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡ, ಇದೊಂದು ಪ್ರಕೃತಿ ಸಹಜ ಪ್ರಕ್ರಿಯೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದು ಯಾವುದೇ ರೀತಿಯ ಸುನಾಮಿ ಸಾಧ್ಯತೆಗಳನ್ನು ಅಲ್ಲಗಳೆದಿದೆ.
ಭಾರತೀಯ ಭೂಗರ್ಭಶಾಸ್ತ್ರ ಇಲಾಖೆಯಾಗಲಿ ಇತರೇ ಯಾವುದೇ ತಜ್ಞರು ಭೂಕಂಪ ಅಥವಾ ಸುನಾಮಿ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿಲ್ಲ. ಹೀಗಾಗಿ ಸಮುದ್ರ ತೀರದ ಪ್ರದೇಶದಲ್ಲಿರುವ ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ 4 ಗಂಟೆ ಸುಮಾರಿಗೆ 200 ಮೀಟರ್ ಉದ್ದಕ್ಕೆ ಸಮುದ್ರ ತೀರದಲ್ಲಿ ಸುಮಾರು 50 ಮೀಟರ್ ನಷ್ಟು ಸಮುದ್ರ ಹಿಂದಕ್ಕೆ ಸರಿದಿದ್ದು ಹಲವು ಗಂಟೆಗಳ ವರೆಗೂ ಅದೇ ಸ್ಥಿತಿ ಉಳಿದಿತ್ತು. ಇದರಿಂದ ಸ್ಥಳೀಯರಲ್ಲಿ ಗಾಬರಿ ಉಂಟಾಗಿತ್ತು. ಸುನಾಮಿ ಸಂದರ್ಭದಲ್ಲಿ ಸಮುದ್ರ ಹಿಂದಕ್ಕೆ ಹೋಗುವ ಪರಿಪಾಠ ಇದ್ದುದರಿಂದ ಜನರು ಭಯಕ್ಕೊಳಗಾಗಿದ್ದರು. 2004 ಮತ್ತು 2017ರಲ್ಲಿ ಭೂಕಂಪದಿಂದ ಸುನಾಮಿ ಉಂಟಾದ ಸಂದರ್ಭದಲ್ಲಿ ಒಮ್ಮೆಲೇ ಸಮುದ್ರ ಹಿಂದಕ್ಕೆ ಹೋದ ಘಟನೆ ನಡೆದಿತ್ತು. ಶನಿವಾರ ರಾತ್ರಿ ಕಳೆದು ಭಾನುವಾರ, ಸೋಮವಾರದ ವೇಳೆಗೆ ಸಮುದ್ರ ಎಂದಿನಂತೆ ಭೋರ್ಗರೆಯುತ್ತಾ ತೀರಕ್ಕೆ ಬಂದಿದ್ದು ಸಹಜವಾಗಿತ್ತು.
കോഴിക്കോട് നൈനാംവളപ്പ് ഭാഗത്ത് കടൽ ഉൾവലിഞ്ഞ ദൃശ്യം#Kozhikode #Kerala pic.twitter.com/JQDGq4uUHA
— News18 Kerala (@News18Kerala) October 29, 2022
For several hours on Saturday evening the sea receded up to 50 metres at the Kothi Beach near Nainamvalappu in Kozhikode. The Kerala State Disaster Management Authority ruled out the possibility of a Tsunami as the withdrawal of sea is normally treated as a natural warning.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm