ಬ್ರೇಕಿಂಗ್ ನ್ಯೂಸ್
15-10-22 04:58 pm HK News Desk ದೇಶ - ವಿದೇಶ
ಇಸ್ಲಮಾಬಾದ್, ಅ.15: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದ ಸರಕಾರಿ ಆಸ್ಪತ್ರೆಯ ಕೋಣೆಗಳಲ್ಲಿ 300ಕ್ಕೂ ಹೆಚ್ಚು ಅನಾಥ ಶವಗಳು ಪತ್ತೆಯಾಗಿದ್ದು, ಕೊಳೆತು ನಾರುತ್ತಿರುವ ವಿಡಿಯೋ ವೈರಲ್ ಆಗಿದೆ. ನಿಶ್ತಾರ್ ಮೆಡಿಕಲ್ ಯುನಿವರ್ಸಿಟಿ ಮತ್ತು ಹಾಸ್ಪಿಟಲ್ ಸೆಂಟರಿನ ಶವಾಗಾರದ ಕೊಠಡಿಗಳು, ಟೆರೇಸ್ ಗಳಲ್ಲಿ ನೂರಾರು ಶವಗಳು ಕೊಳೆಯುತ್ತಿದ್ದು, ವಿಶ್ವ ರಾಷ್ಟ್ರಗಳಲ್ಲಿ ಪಾಕಿಸ್ಥಾನದಲ್ಲಿ ಮನುಷ್ಯತ್ವ, ಮಾನವೀಯತೆ ಕುಸಿಯುತ್ತಿರುವುದಕ್ಕೆ ಸಾಕ್ಷಿಯೆಂದು ಟೀಕೆ ವ್ಯಕ್ತವಾಗಿದೆ.
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಕಾರಣವಾದ ಸಿಬಂದಿಯನ್ನು ಶಿಕ್ಷಿಸುವಂತೆ ಸೂಚಿಸಿದ್ದಾರೆ. ಟ್ವಿಟರ್ ಸೇರಿದಂತೆ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಆಸ್ಪತ್ರೆ ಸ್ಥಿತಿಯನ್ನು ತೆರೆದಿಟ್ಟಿದೆ. ಕೆಲವರ ಪ್ರಕಾರ, 500ಕ್ಕೂ ಹೆಚ್ಚು ಶವಗಳು ಇವೆಯಂತೆ. ಹೆಚ್ಚಿನವು ಅರೆಬರೆ ಇದ್ದು, ಪ್ಯಾಂಟ್, ಶರ್ಟ್ ಹಾಕ್ಕೊಂಡ ರೀತಿಯಲ್ಲೇ ಇವೆ. ಕೆಲವು ಅಸ್ಥಿಪಂಜರ ಮಾತ್ರ ಇದೆ. ದೇಹದ ಅವಯವಗಳನ್ನು ಕತ್ತರಿಸಿ ಹಾಗೇ ಬಿಟ್ಟಿರುವಂತೆ ಕಂಡುಬಂದಿದೆ. ಹಾರ್ಟ್, ಕಿಡ್ನಿ, ಶ್ವಾಸಕೋಶ ಸೇರಿದಂತೆ ಪ್ರಮುಖ ಅವಯವಗಳನ್ನು ತೆಗೆದು ಆಸ್ಪತ್ರೆ ಕಟ್ಟಡದ ಟೆರೇಸಿನಲ್ಲಿ ಎಸೆಯಲಾಗಿದೆ.
ಮೆಡಿಕಲ್ ಯುನಿವರ್ಸಿಟಿಯ ವಿದ್ಯಾರ್ಥಿಯೊಬ್ಬ ಹೇಳುವ ಪ್ರಕಾರ, ಶವಗಳನ್ನು ವಿದ್ಯಾರ್ಥಿಗಳು ಪ್ರಯೋಗಕ್ಕಾಗಿ ಬಳಸುತ್ತಿದ್ದರು ಎನ್ನಲಾಗಿದೆ. ಘಟನೆ ಬಗ್ಗೆ ತನಿಖೆಗೆ ಆರು ಮಂದಿ ತಜ್ಞರನ್ನು ಒಳಗೊಂಡ ತಂಡ ರಚಿಸಲಾಗಿದ್ದು, ಮೂರು ದಿನದಲ್ಲಿ ಪ್ರಾಥಮಿಕ ವರದಿ ನೀಡುವಂತೆ ಪಾಕ್ ಸರಕಾರ ಸೂಚಿಸಿದೆ. ಇದೇ ವೇಳೆ, ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಅದು ತಮ್ಮಲ್ಲಿಂದ ನಾಪತ್ತೆಯಾಗಿರುವ ವ್ಯಕ್ತಿಗಳ ಶವಗಳಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ನಿಶ್ತಾರ್ ಮೆಡಿಕಲ್ ಯುನಿವರ್ಸಿಟಿ ಸರಕಾರಿ ಆಸ್ಪತ್ರೆಯಾಗಿದ್ದು, ಅಲ್ಲಿ ಮೆಡಿಕಲ್ ವಿದ್ಯಾರ್ಥಿಗಳು ಹೆಣಗಳನ್ನು ತಮ್ಮ ಪ್ರಯೋಗಕ್ಕಾಗಿ ಬಳಸಿ ಹಾಗೇ ಎಸೆಯುತ್ತಿದ್ದರು ಎನ್ನಲಾಗುತ್ತಿದೆ. ಆದರೆ, ಟೆರೇಸ್ ಸೇರಿದಂತೆ ವಿವಿಧ ಕೊಠಡಿಗಳಲ್ಲಿ ಬೇಕಾಬಿಟ್ಟಿಯಾಗಿ ಶವಗಳನ್ನು ಅದರ ಅವಯವಗಳನ್ನು ಕತ್ತರಿಸಿ ಬಿಸುಟಿರುವುದು ಸಂಶಯಕ್ಕೆ ಕಾರಣವಾಗಿದೆ. ಅತ್ಯಂತ ಕೆಟ್ಟದಾಗಿ ಶವಗಳನ್ನು ಎಸೆದು ಮಾನವೀಯತೆ ಇಲ್ಲದಂತೆ ವರ್ತಿಸಿರುವ ಬಗ್ಗೆ ಭಾರೀ ಟೀಕೆಯೂ ವ್ಯಕ್ತವಾಗಿದೆ. ಪಾಕಿಸ್ಥಾನದ ಪತ್ರಿಕೆಗಳೇ ಅಲ್ಲಿನ ಆಸ್ಪತ್ರೆ ಆಡಳಿತದ ವರ್ತನೆಯನ್ನು ಟೀಕಿಸಿವೆ.
Several putrefied bodies have been found dumped on the rooftop of a public sector hospital in Pakistan’s Punjab province that sparked outcry on social media over their desecration.Punjab Chief Minister Parvez Elahi on Friday took a strict notice of this and formed a high-powered committee to investigate the matter. The six-member committee headed by specialised healthcare secretary Muzamil Bashir has been given three days to complete the probe and fix the responsibility.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm