ಬ್ರೇಕಿಂಗ್ ನ್ಯೂಸ್
04-10-22 11:02 pm HK News Desk ದೇಶ - ವಿದೇಶ
ಕ್ಯಾಲಿಫೋರ್ನಿಯಾ, ಅ.4 : 8 ತಿಂಗಳ ಮಗು ಸೇರಿ ನಾಲ್ವರು ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಅಪಹರಿಸಲಾಗಿದೆ. ನಗರದ ಮರ್ಸೀಡ್ ಕೌಂಟಿ ಪ್ರದೇಶದಲ್ಲಿ ನಾಲ್ವರಿದ್ದ ಭಾರತೀಯ ಕುಟುಂಬವನ್ನು ಅಪಹರಿಸಲಾಗಿದೆ. ಹಣಕ್ಕಾಗಿಯೇ ಅಪಹರಣ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ಧಾರೆ.
36 ವರ್ಷದ ಜಸ್ದೀಪ್ ಸಿಂಗ್, ಅವರ ಪತ್ನಿ 27 ವರ್ಷದ ಜಸ್ಲೀನ್ ಕೌರ್ ಹಾಗೂ ದಂಪತಿಯ 8 ತಿಂಗಳ ಮಗು ಅರೋಹಿ ಮತ್ತು ಮಗುವಿನ ಮಾವ 39 ವರ್ಷದ ಅಮನ್ದೀಪ್ ಸಿಂಗ್ ಅಪಹರಣಕ್ಕೆ ಒಳಗಾದವರು.
ಅಪಹರಣಕಾರರು ಶಸ್ತ್ರಧಾರಿಗಳಾಗಿದ್ದರು ಎಂದು ತಿಳಿದಬಂದಿದ್ದು, ಅವರ ವರ್ತನೆಯಿಂದ ಸಂಘಟಿತ ಅಪರಾಧ ಗುಂಪಿಗೆ ಸೇರಿದವರು ಎಂಬ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕಾರರ ಜಾಡು ಹಿಡಿದು ಶೋಧ ಕಾರ್ಯ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2019ರಲ್ಲಿ ಕ್ಯಾಲಿಫೊರ್ನಿಯಾದಲ್ಲಿ ನೆಲೆಸಿದ್ದ ತುಷಾರ್ ಆತ್ರೆ ಎಂಬ ಭಾರತೀಯ ಮೂಲದ ಅಮೆರಿಕನ್ ಪ್ರಜೆಯನ್ನು ಅಪಹರಿಸಲಾಗಿತ್ತು. ಆದರೆ ಅಪಹರಣಗೊಂಡ ಕೆಲವೇ ಗಂಟೆಗಳಲ್ಲಿ ತುಷಾರ್ ಆತ್ರೆ ಶವ ಅವರ ಗೆಳತಿಯ ಕಾರಿನಲ್ಲಿ ಸಿಕ್ಕಿತ್ತು. ಇದೀಗ ಒಂದೇ ಕುಟುಂಬದ ನಾಲ್ವರು ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳನ್ನು ಅಪಹರಿಸಲಾಗಿದ್ದು, ಆತಂಕ ಮನೆ ಮಾಡಿದೆ.
ಸದ್ಯ ಅಪಹರಣಕ್ಕೀಡಾಗಿರುವವರ ಭಾವಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೂ, ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
Authorities said that an eight-month-old baby and his Indian-origin family were among 4 people kidnapped from Merced County in California on Monday (local time).According to a report by ABC 10, the victims have been identified as 36-year-old Jasdeep Singh, 27-year-old Jasleen Kaur, their eight-month-old child Aroohi Dheri, and their uncle 39-year-old Amandeep Singh.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm