ಬ್ರೇಕಿಂಗ್ ನ್ಯೂಸ್
03-10-22 03:42 pm HK News Desk ದೇಶ - ವಿದೇಶ
ಕೊಲ್ಕತ್ತಾ, ಅ.3: ದುರ್ಗಾ ಮೂರ್ತಿಯ ಕಾಲ ಕೆಳಗೆ ಮಹಿಷಾಸುರನ ಬದಲು ಮಹಾತ್ಮ ಗಾಂಧೀಜಿ ಇರುವಂತೆ ಬಿಂಬಿಸಿ ಪ್ರತಿಮೆ ರಚಿಸಿದ್ದು ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕೊಲ್ಕತ್ತಾದಲ್ಲಿ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮೂರ್ತಿಯ ಪೆಂಡಾಲ್ ನಲ್ಲಿ ಈ ರೀತಿ ಚಿತ್ರಿಸಲಾಗಿದ್ದು, ಗೃಹ ಸಚಿವಾಲಯದ ಸೂಚನೆಯಂತೆ ಬಳಿಕ ಗಾಂಧೀಜಿ ಪ್ರತಿಮೆಯನ್ನು ತೆರವು ಮಾಡಲಾಗಿದೆ.
ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಪ್ರತಿಮೆಯನ್ನು ತೆರವು ಮಾಡಲಾಗಿದೆ. ಅಖಿಲ ಭಾರತೀಯ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮಾತೆಯ ಪ್ರತಿಮೆಯಲ್ಲಿ ಅಸುರ ಗಾಂಧಿಯನ್ನು ದುರ್ಗಾಮಾತೆ ಕೊಲ್ಲುವ ರೀತಿ ಚಿತ್ರಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಂದು ಮಹಾಸಭಾ ಪಶ್ಚಿಮ ಬಂಗಾಳ ಘಟಕದ ಕಾರ್ಯಾಧ್ಯಕ್ಷ ಚಂದ್ರಾಚುರ್ ಗೋಸ್ವಾಮಿ, ನಾವು ಗಾಂಧಿಯನ್ನು ನೈಜ ಅಸುರನಾಗಿಯೇ ನೋಡುತ್ತೇವೆ. ಗಾಂಧಿ ಒಬ್ಬ ರಾಕ್ಷಸನಾಗಿದ್ದ. ಅದಕ್ಕಾಗಿಯೇ ಆ ರೀತಿ ಮೂರ್ತಿಯನ್ನು ಚಿತ್ರಿಸಲಾಗಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಗಾಂಧೀಜಿಯನ್ನು ಪ್ರಮೋಟ್ ಮಾಡುತ್ತಿದೆ. ಆದರೆ ನಾವು ಗಾಂಧಿಯನ್ನು ಒಪ್ಪುವುದಿಲ್ಲ. ನಾವು ಅಸುರನಂತೆ ಚಿತ್ರಿಸಿ ಹಾಕಿದ್ದ ಮೂರ್ತಿಯನ್ನು ಬಲವಂತದಿಂದ ಬದಲಿಸಿದ್ದಾರೆ. ನಾವು ಎಲ್ಲ ಕಡೆ ಹಾಕಿರುವ ಗಾಂಧಿ ಚಿತ್ರಣವನ್ನು ತೆಗೆದು ಸುಭಾಸ್ ಚಂದ್ರ ಬೋಸ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಮುನ್ನೆಲೆಯಲ್ಲಿ ಹಾಕಲಿದ್ದೇವೆ ಎಂದು ಗೋಸ್ವಾಮಿ ಹೇಳಿದ್ದಾರೆ. ದಸರಾ ಎಂದರೆ, ಮಹಿಷಾಸುರನನ್ನು ದೇವಿ ಕೊಂದಿರುವ ದಿನವೆಂದು ಪುರಾಣ ನಂಬಿಕೆ. ಅದೇ ರೀತಿ ಅಸುರನನ್ನು ಕೊಂದ ದೇವಿಯ ಪ್ರತೀಕವಾಗಿ ದೇಶದೆಲ್ಲೆಡೆ ದೇವಿಯ ಆರಾಧನೆ ನಡೆಯುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕವಾಗಿ ಗಾಂಧೀಜಿ ಜನ್ಮದಿನದ ಸಂದರ್ಭದಲ್ಲಿ ದಸರಾ ಬಂದಿದ್ದರಿಂದ ಗಾಂಧೀಜಿಯನ್ನೇ ದುರ್ಗೆ ಕೊಲ್ಲುವ ರೀತಿ ಚಿತ್ರಿಸಿ ವಿವಾದ ಎಬ್ಬಿಸಲಾಗಿದೆ. ಘಟನೆ ಬಗ್ಗೆ ತೃಣಮೂಲ ಕಾಂಗ್ರೆಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆಲ್ಲ ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ.
A controversy erupted after a durga puja in Kolkata organised by the All India Hindu Mahasabha depicted the ‘Mahisasura’ as Mahatma Gandhi, sparking a controversy. However, after pressure from the Ministry of Home Affairs , the organisers of the puja changed and removed the face, they alleged.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm