ಬ್ರೇಕಿಂಗ್ ನ್ಯೂಸ್
20-09-22 07:03 pm HK News Desk ದೇಶ - ವಿದೇಶ
ಕಾಸರಗೋಡು, ಸೆ.20: ತಾಯಿಯೊಂದಿಗೆ ಜಗಳವಾಡಿದ ಹದಿಹರೆಯದ ಮಗ ಆಕೆಯನ್ನು ಗ್ರೈಂಡರ್ ಕಲ್ಲಿನಿಂದ ತಲೆಗೆ ಹೊಡೆದು ಕೊಲ್ಲಲು ಯತ್ನಿಸಿದ್ದಲ್ಲದೆ, ಆನಂತರ ತಾನೇ ನೇಣು ಬಿಗಿದು ಸಾವಿಗೆ ಶರಣಾದ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಮಡಿಕೈ ನಿವಾಸಿ ಸುಧಾ (37) ಅವರ ಮೇಲೆ ಐಟಿಐ ಓದುತ್ತಿದ್ದ ಮಗ ಸುಜಿತ್ (19) ಹಲ್ಲೆ ನಡೆಸಿದ್ದಾನೆ. ಆನಂತರ ತಾನೇ ಸಾವಿಗೆ ಶರಣಾಗಿದ್ದಾನೆ. ಸುಜಿತ್ ಒಬ್ಬನೇ ಮಗನಾಗಿದ್ದು ಕಯ್ಯೂರು ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ. ಸುಧಾ ಅವರ ಪತಿ ಇತ್ತೀಚೆಗೆ ಸಾವು ಕಂಡಿದ್ದರು. ಆನಂತರ, ಸುಧಾ ಮಾನಸಿಕವಾಗಿ ನೊಂದಿದ್ದು ಮನೆಯಲ್ಲಿ ಮಗನನ್ನು ಹೊರಗೆ ಹೋಗದಂತೆ ಒತ್ತಡ ಹೇರುತ್ತಿದ್ದರು. ಸದಾ ತನ್ನ ಜೊತೆಗೇ ಇರುವಂತೆ ಮಗನಲ್ಲಿ ಹೇಳುತ್ತಿದ್ದರು.
ಇದರಿಂದ ಹಿಂಸೆಯಾಗಿದ್ದ ಸುಜಿತ್, ತಾಯಿ ಜೊತೆ ಜಗಳ ಮಾಡುತ್ತಿದ್ದ. ಓಣಂ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ಸುಜಿತ್ ಅಲ್ಲಿಗೆ ಹೊರಟು ನಿಂತಿದ್ದ. ಈ ವೇಳೆ, ತಾಯಿ ಮಗನನ್ನು ಹೊರಗೆ ಹೋಗಲು ಬಿಡದೆ ಜಗಳ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಕುಪಿತನಾದ ಸುಜಿತ್ ತಾಯಿ ಮೇಲೆಯೇ ಗ್ರೈಂಡರ್ ಕಲ್ಲನ್ನು ಎತ್ತಿ ಬಡಿದಿದ್ದಾನೆ. ಅಲ್ಲದೆ, ತೆಂಗಿನ ಚಿಪ್ಪನ್ನು ತಲೆಗೆ ಬಡಿದು ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರ ಏಟು ಬಿದ್ದು ಸುಧಾ ಗಂಭೀರ ಸ್ಥಿತಿಗೆ ಒಳಗಾಗಿದ್ದಾರೆ. ಇದರಿಂದ ನೊಂದ ಸುಜಿತ್ ತಾನೇ ಸಾವಿಗೆ ಶರಣಾಗಿದ್ದಾನೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a shocking incident reported from Hosadurga Madikai of the district, a youth, student of ITI, dropped a grinding stone on the head of his mother who was asleep and also hit her head with coconut scrapper and later killed himself by hanging.Sudha (37), a resident of Madikai Alaipathukaran, is the woman who is seriously injured. Her only son, Kayyur ITI student Sujith is the one who hit her and later killed himself.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 11:27 am
Mangalore Correspondent
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm