ಬ್ರೇಕಿಂಗ್ ನ್ಯೂಸ್
19-09-22 12:35 pm HK News Desk ದೇಶ - ವಿದೇಶ
ತಿರುವನಂತಪುರಂ, ಸೆ.19: ಭಾಗ್ಯಲಕ್ಷ್ಮಿ ಕೆಲವೊಮ್ಮೆ ಯಾವ ಮೂಲೆಯಿಂದ ಮನೆ ಒಳಕ್ಕೆ ಕಾಲಿಡುತ್ತಾಳೆಂದು ಹೇಳೋದಿಕ್ಕೆ ಬರಲ್ಲ. ಕೇರಳದಲ್ಲಿ ಬಡ ಆಟೋ ಚಾಲಕನ ಪಾಲಿಗೆ ಅದೃಷ್ಟ ಲಕ್ಷ್ಮಿಯೇ ಒಲಿದು ಬಂದಿದ್ದಾಳೆ. ಹಣ ಇಲ್ಲದೆ, ಮಗಳ ದುಡ್ಡಿನಲ್ಲಿ 500 ರೂ. ಮೊತ್ತದ ಲಾಟರಿ ಟಿಕೆಟ್ ಖರೀದಿಸಿದ್ದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ. ಕೇರಳ ಸರಕಾರದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ತನ್ನನ್ನು ತಾನೇ ನಂಬದಾಗಿದ್ದಾನೆ.
ತಿರುವನಂತಪುರದ ಶ್ರೀ ವರಹಂ ಎಂಬಲ್ಲಿನ ನಿವಾಸಿ ಅನೂಪ್ ಎಂಬ ಆಟೋ ಚಾಲಕ ಲಾಟರಿ ಗೆದ್ದ ಅದೃಷ್ಟವಂತ. ಲಾಟರಿ ಡ್ರಾಗೊಳ್ಳುವ ದಿನಾಂಕದ ಒಂದು ದಿನದ ಹಿಂದೆ ಮನೆಗೆ ಮರಳುತ್ತಿದ್ದಾಗ ತಿರುವನಂತಪುರದ ಪಜವಂಗಡಿಯ ಗಣಪತಿ ದೇಗುಲದ ಬಳಿ ಅಂಗಡಿಯೊಂದರಲ್ಲಿ ಲಾಟರಿ ಖರೀದಿಸಿದ್ದರು. ಟಿಜೆ 750605 ನಂಬರಿನ ಲಾಟರಿ ಟಿಕೆಟ್ ಮೂಲಕ ಇವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಲಾಟರಿ ಏಜೆಂಟ್ ತಂಗರಾಜ್ ಎಂಬವರಿಂದ ಖರೀದಿಸಿದ ಈ ಲಾಟರಿಯಿಂದ ಅನೂಪ್ ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದು, ದೇಶದ ಗಮನಸೆಳೆದಿದ್ದಾರೆ.
ಆಟೋ ಚಾಲಕ ಅನೂಪ್ ಬಡ ಕುಟುಂಬದ ವ್ಯಕ್ತಿಯಾಗಿದ್ದು ಆಟೋ ಚಾಲನೆಯಿಂದಲೇ ಜೀವನ ದೂಡುತ್ತಿದ್ದ. ಲಾಟರಿ ಟಿಕೆಟ್ ದರ 500 ರೂಪಾಯಿ ಇದ್ದುದರಿಂದ ಅದನ್ನು ಕೊಳ್ಳುವುದಕ್ಕೂ ಹಣ ಇರಲಿಲ್ಲ. ತನ್ನ ಮಗಳ ಪಿಗ್ಗಿ ಡಬ್ಬಿಯಲ್ಲಿದ್ದ ಐನೂರು ರೂ. ತೆಗೆದುಕೊಂಡು ಹೋಗಿ ಲಾಟರಿ ಖರೀದಿಸಿದ್ದರು. ಮಗಳ ಅದೃಷ್ಟದ ಫಲವೋ ಎಂಬಂತೆ ಅದೇ ಲಾಟರಿ ಟಿಕೇಟಿಗೆ 25 ಕೋಟಿ ರೂ. ಬಹುಮಾನ ಬಂದಿದೆ. ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಲಾಟರಿ ಬಹುಮಾನದ ಫಲಿತಾಂಶ ಪ್ರಕಟಿಸಿದ್ದರು.
Ticket number TJ-750605 has emerged as the winner at the much-awaited Onam bumper lucky draw, which carries a jackpot of Rs 25 crore. Anoop, a native of Sreevaraham in Thiruvananthapuram, has won the mega prize.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
21-04-26 02:36 pm
HK News Staffer
ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ...
20-04-26 09:40 pm
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
21-04-26 03:13 pm
HK News Staffer
ನಂತೂರು ಜಂಕ್ಷನ್ನಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗ...
21-04-26 12:44 pm
ಬೀದರ್ ; ಬಿರು ಬಿಸಿಲಿನ ಝಳಕ್ಕೆ 20 ವರ್ಷದ ಯುವಕ ಕ...
20-04-26 09:35 pm
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm
ಮಣಿಪಾಲದ ಸಾಫ್ಟ್ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷ...
20-04-26 11:13 am