ಬ್ರೇಕಿಂಗ್ ನ್ಯೂಸ್
13-09-22 10:43 pm HK News Desk ದೇಶ - ವಿದೇಶ
ದೋಹಾ, ಸೆ.13 : ಕತಾರ್ನಲ್ಲಿ ನೆಲೆಸಿದ್ದ ಕೇರಳ ಮೂಲದ ದಂಪತಿಯ 4 ವರ್ಷದ ಪುಟ್ಟ ಮಗಳು ಶಾಲಾ ಬಸ್ನಲ್ಲಿ ಉಸಿರು ಕಟ್ಟಿ ಸಾವನ್ನಪ್ಪಿದ ಘಟನೆ ನಡೆದಿದೆ. ಬರೋಬ್ಬರಿ 4 ಗಂಟೆಗಳ ಕಾಲ ಬಾಲಕಿ ಬಸ್ ಒಳಗೆ ಸಿಲುಕಿ, ಉಸಿರಾಡಲಾಗದೇ ಶಾಲಾ ಬಸ್ ಒಳಗೇ ಸಾವನ್ನಪ್ಪಿದ್ದಾಳೆ.
ಹುಟ್ಟುಹಬ್ಬದಂದೇ ಸಾವನ್ನಪ್ಪಿದ ಬಾಲಕಿ
ಕೇರಳ ಮೂಲದ ಅಭಿಲಾಷ್ ಜಾಕೋಬ್ ಮತ್ತು ಸೌಮ್ಯಾ ದಂಪತಿಯ ಎರಡನೇ ಮಗಳು ಮಿನ್ಸಾ ಮರಿಯಮ್ ಜಾಕೋಬ್ ಎಂಬ ಪುಟ್ಟ ಬಾಲಕಿಯೇ ಮೃತ ದುರ್ದೈವಿ. ನಾಲ್ಕು ವರ್ಷದ ಮಿನ್ಸಾ ಮರಿಯಮ್ ಜಾಕೋಬ್ ತನ್ನ ಹುಟ್ಟುಹಬ್ಬದಂದು ಸೆಪ್ಟೆಂಬರ್ 11 ರ ಭಾನುವಾರ ಶಾಲಾ ಬಸ್ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಿನ್ಸಾ ವಕ್ರಾದಲ್ಲಿ ಶಿಶು ವಿಹಾರದಲ್ಲಿ ಓದುತ್ತಿದ್ದಳು. ಅದೇ ಶಾಲೆಯ ಬಸ್ನಲ್ಲಿಯೇ ಬಂಧಿಯಾಗಿ ಬಾಲಕಿ ಮೃತಪಟ್ಟಿದ್ದಾಳೆ.
ಸ್ಕೂಲ್ ಬಸ್ಸಿನಲ್ಲಿ ನಿದ್ದೆ ಮಾಡುತ್ತಿದ್ದ ಬಾಲಕಿ
ಮಿನ್ಸಾ ಮರಿಯಮ್ ಜಾಕೋಬ್ ಭಾನುವಾರ ಬೆಳಗ್ಗೆ ತನ್ನ ಸ್ಕೂಲ್ ಬಸ್ನಲ್ಲಿ ಶಾಲೆಗೆ ಹೋಗಿದ್ದಳು. ಹಿಂದೆ ಕುಳಿತಿದ್ದ ಆಕೆ ದಾರಿ ಮಧ್ಯೆಯೇ ಬಸ್ಸಿನಲ್ಲಿ ನಿದ್ದೆ ಮಾಡಿದ್ದಳು. ಆದರೆ ಆಕೆ ನಿದ್ದೆ ಮಾಡಿದ್ದನ್ನು ಶಾಲಾ ಬಸ್ ಸಿಬ್ಬಂದಿ ಯಾರೂ ಗಮನಿಸಲಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಯಲ್ಲಿ ಇಳಿಸಿದ ಸಿಬ್ಬಂದಿ ಶಾಲಾ ವಾಹನವನ್ನು ಬಂದ್ ಮಾಡಿ ಬಿಟ್ಟು ಹೋಗಿದ್ದಾರೆ.
ಮಧ್ಯಾಹ್ನ ತರಗತಿ ಮುಗಿದ ನಂತರ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ಹಿಂತಿರುಗಿದಾಗ, ಬಸ್ ಒಳಗೆ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಆಕೆಯನ್ನು ಉಳಿಸಲಾಗಲಿಲ್ಲ. ಬಸ್ಸಿನ ಕಿಟಕಿ, ಬಾಗಿಲುಗಳನ್ನು ಕ್ಲೋಸ್ ಮಾಡಿದ್ದರಿಂದ ಬಾಲಕಿಗೆ ಉಸಿರಾಡಲು ಸಾಧ್ಯವಾಗಿಲ್ಲ. ಕತಾರ್ನಲ್ಲಿ ಗರಿಷ್ಠ ತಾಪಮಾನವು 36ರಿಂದ 43 ಡಿಗ್ರಿ ಇದೆ. ಇದರಿಂದಾಗಿ ಬಾಲಕಿ ಉಸಿರು ಕಟ್ಟಿ ಸಾವು ಕಂಡಿದ್ದಾಳೆ ಎನ್ನಲಾಗಿದೆ.
A four-year-old girl Kerala whose family is based in Doha died on Sunday after she was left locked inside her school bus for hours at Al Wakrah in Qatar. Apparently, the little girl had dozed off on her way to her kindergarten. The bus staff did not realise that the girl had fallen asleep inside the bus and they locked the bus after leaving it in the parking lot and left.
22-04-25 01:00 pm
Bangalore Correspondent
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm