ಬ್ರೇಕಿಂಗ್ ನ್ಯೂಸ್
10-09-22 04:09 pm HK News Desk ದೇಶ - ವಿದೇಶ
ತಿರುವನಂತಪುರ, ಸೆ.10: ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಮತ್ತೆ ವಿವಾದಕ್ಕೆ ತುತ್ತಾಗಿದ್ದಾರೆ. ಯಾತ್ರೆ ಆರಂಭಿಸಿರುವ ಕನ್ಯಾಕುಮಾರಿಯಲ್ಲಿ ಚರ್ಚ್ ಒಂದಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿನ ಪಾದ್ರಿಗಳ ಬಳಿ ಜೀಸಸ್ ಕ್ರಿಸ್ತನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾದ್ರಿ, ಜೀಸಸ್ ಮಾತ್ರ ನಿಜವಾದ ದೇವರು, ಉಳಿದವರಲ್ಲ ಎಂದು ಹೇಳಿರುವ ವಿಡಿಯೋವನ್ನು ಬಿಜೆಪಿ ಟೀಕಿಸಿದ್ದು, ವಿವಾದಕ್ಕೆ ಬಳಸಿದೆ.
ಚರ್ಚ್ ಫಾದರ್ ಜಾರ್ಜ್ ಪೊನ್ನಯ್ಯ ಈ ರೀತಿ ರಾಹುಲ್ ಗಾಂಧಿಗೆ ಹೇಳುವ ವಿಡಿಯೋವನ್ನು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ವಿಡಿಯೋ ಶೇರ್ ಮಾಡಿದ್ದು, ರಾಹುಲ್ ಗಾಂಧಿಯನ್ನು ಟೀಕಿಸಲು ಬಳಸಿದ್ದಾರೆ. ಜೀಸಸ್ ಮಾತ್ರ ದೇವರು. ಉಳಿದವರಲ್ಲ ಎಂದು ಜಾರ್ಜ್ ಪೊನ್ನಯ್ಯ ರಾಹುಲ್ ಗಾಂಧಿಗೆ ಹೇಳುತ್ತಾರೆ. ಇದೇ ಪೊನ್ನಯ್ಯ, ತನ್ನ ಹಿಂದು ವಿರೋಧಿ ಹೇಳಿಕೆಯ ಕಾರಣಕ್ಕೆ ಹಿಂದೆ ಬಂಧನಕ್ಕೊಳಗಾಗಿದ್ದರು. ನಾನು ಶೂ ಯಾಕೆ ಹಾಕ್ಕೊಂಡಿದ್ದೇನಂದ್ರೆ, ಭಾರತ ಮಾತೆಯ ಕಲ್ಮಶಗಳು ನಮಗೆ ಅಂಟಿಕೊಳ್ಳಬಾರದಲ್ಲ ಎಂದು ಹೇಳಿದ್ದರು. ಭಾರತ್ ತೋಡೋಗಳ ಜೊತೆಗೆ ರಾಹುಲ್ ಭಾರತ್ ಜೋಡೊ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಲ್ಲಿ ಚರ್ಚ್ ಒಂದಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಪಾದ್ರಿಗಳ ಜೊತೆ ಪ್ರಶ್ನೆ ಮಾಡಿದ್ದರು. ಜೀಸಸ್ ಸ್ವತಃ ದೇವರಾಗಿದ್ದರೇ ಅಥವಾ ದೇವರ ದೂತನೇ ಎಂದು ಕೇಳಿದ್ದರು. ಅದಕ್ಕುತ್ತರಿಸಿದ್ದ ಪಾದ್ರಿ ಜಾರ್ಜ್ ಪೊನ್ನಯ್ಯ, ಜೀಸಸ್ ನಿಜವಾದ ದೇವರು. ದೇವರ ದೂತನಾಗಿ ಮನುಷ್ಯ ರೂಪದಲ್ಲಿ ಭೂಲೋಕಕ್ಕೆ ಬಂದಿದ್ದರೆಂದು ನಂಬುತ್ತೇವೆ ಎಂದು ಹೇಳಿದ್ದರು. ಅದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಬಲಭಾಗದಲ್ಲಿ ಕುಳಿತಿದ್ದ ವ್ಯಕ್ತಿಗಳು, ಜೀಸಸ್ ದೇವರು ಮತ್ತು ದೇವದೂತ ಎರಡೂ ಆಗಿದ್ದರು ಎಂದು ಹೇಳುತ್ತಾರೆ. ಆದರೆ ಈ ವಿಡಿಯೋವನ್ನು ಬಿಜೆಪಿ ನಾಯಕರು ಟೀಕೆಗೆ ಬಳಸ್ಕೊಂಡಿದ್ದು, ಭಾರತ ವಿರೋಧಿಗಳ ಜೊತೆಗೆ ರಾಹುಲ್ ಗಾಂಧಿ ಕೈಜೋಡಿಸಿದ್ದಾರೆಂದು ಟೀಕಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅದು ಬೋಗಸ್ ವಿಡಿಯೋ, ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಯನ್ನು ಈ ಮೂಲಕ ತೋರಿಸುತ್ತಿದ್ದಾರೆ. ನಾವು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿಯವರು ಜನರನ್ನು ಒಡೆಯಲು ನೋಡುತ್ತಿದ್ದರೆ, ಕಾಂಗ್ರೆಸ್ ಒಗ್ಗೂಡಿಸಲು ಶ್ರಮಿಸುತ್ತಿದೆ. ಭಾರತವನ್ನು ಒಗ್ಗೂಡಿಸುವ ಕಾಂಗ್ರೆಸ್ ಪ್ರಯತ್ನವನ್ನು ಹಾಳುಗೆಡಹುವ ಹುನ್ನಾರ ಬಿಜೆಪಿಯದ್ದು ಎಂದು ಹೇಳಿದ್ದಾರೆ.
ಜಾರ್ಜ್ ಪೊನ್ನಯ್ಯ, ತಮಿಳುನಾಡಿನಲ್ಲಿ ಜನನಾಯಕ ಕ್ರಿಸ್ತವ ಪೆರಾವಿ ಎನ್ನುವ ಎನ್ ಜಿಓ ಸಂಘಟನೆಯೊಂದನ್ನು ನಡೆಸುತ್ತಿದ್ದು ಕನ್ಯಾಕುಮಾರಿಯಲ್ಲಿ ಪ್ರಧಾನ ಕೇಂದ್ರವನ್ನು ಹೊಂದಿದ್ದಾರೆ. ವಿವಾದಕ್ಕೂ ಇವರಿಗೂ ಹತ್ತಿರದ ನಂಟಿದೆ. ಈ ಹಿಂದೆ ಪ್ರಧಾನಿ ಮೋದಿ ವಿರುದ್ಧ ನಿಂದಿಸಿ ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆನಂತರ, ತಮಿಳುನಾಡಿನ ವಿವಿಧೆಡೆ ಜಾರ್ಜ್ ವಿರುದ್ಧ 30ಕ್ಕೂ ಹೆಚ್ಚು ಕೇಸುಗಳು ದಾಖಲಾಗಿದ್ದವು. ಜಾರ್ಜ್ ಬಹಿರಂಗ ಕ್ಷಮೆ ಯಾಚಿಸುವಂತೆ ಆಗ್ರಹ ಮಾಡಲಾಗಿತ್ತು.
ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಉತ್ತರ ಭಾರತದ ವರೆಗೆ ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿದ್ದು, 12 ರಾಜ್ಯಗಳಲ್ಲಿ 3750 ಕಿಮೀ ಉದ್ದಕ್ಕೆ 150 ದಿನಗಳ ವರೆಗೆ ಯಾತ್ರೆ ನಡೆಯಲಿದೆ. ಸೆ.7ರಂದು ಯಾತ್ರೆ ಆರಂಭಗೊಂಡಿತ್ತು.
George Ponnaiah who met Rahul Gandhi says “Jesus is the only God unlike Shakti (& other Gods) “
— Shehzad Jai Hind (@Shehzad_Ind) September 10, 2022
This man was arrested for his Hindu hatred earlier - he also said
“I wear shoes because impurities of Bharat Mata should not contaminate us.”
Bharat Jodo with Bharat Todo icons? pic.twitter.com/QECJr9ibwb
The Congress’ ‘Bharat Jodo’ campaign has given the BJP yet another reason to take on Rahul Gandhi. The BJP slammed the Congress leader over a video that is now viral on social media that captures a conversation between George Ponniah - a pastor in Tamil Nadu’s Kanyakumari and Rahul Gandhi. In the video the pastor is seen terming Jesus the ‘only real god’.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm