ಬ್ರೇಕಿಂಗ್ ನ್ಯೂಸ್
26-08-22 03:36 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 26: ಕಾಂಗ್ರೆಸ್ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕೊನೆಗೂ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ರಾಹುಲ್ ಗಾಂಧಿಯನ್ನು ಅಪ್ರಬುದ್ಧ ಎಂದು ಜರೆದಿರುವ ಆಜಾದ್ ಅವರು, ಸೋನಿಯಾ ಗಾಂಧಿಗೆ ಬರೆದ ರಾಜಿನಾಮೆ ಪತ್ರದಲ್ಲಿ ಅನುಭವ ರಹಿತರಿಗೆ ಪಕ್ಷದಲ್ಲಿ ಆದ್ಯತೆ ಕೊಟ್ಟಿರುವುದನ್ನು ಟೀಕಿಸಿದ್ದಾರೆ. ತಾನು ಪಕ್ಷದಿಂದ ಹೊರ ನಡೆಯುತ್ತಿರುವುದಕ್ಕೆ ಇದೇ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಆಗಸ್ಟ್ 16ರಂದು ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥನಾಗಿ ತಮ್ಮನ್ನು ನೇಮಿಸಿದ್ದನ್ನು ಗುಲಾಂ ನಬಿ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ರಾಜಿನಾಮೆ ಪತ್ರ ಬರೆದಿದ್ದು, ರಾಹುಲ್ ಗಾಂಧಿಯನ್ನು ಅಪ್ರಬುದ್ಧ. ರಾಹುಲ್ ಕಾರಣದಿಂದಾಗಿಯೇ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪುತ್ತಿದೆ ಎಂದು ಟೀಕಿಸಿದ್ದಾರೆ. ಸರಕಾರದ ಸುಗ್ರೀವಾಜ್ಞೆಯನ್ನು ಮಾಧ್ಯಮಗಳ ಮುಂದೆ ಹರಿದು ಹಾಕಿದ್ದು ರಾಹುಲ್ ಗಾಂಧಿಯ ಅಪ್ರಬುದ್ಧ ಮತ್ತು ಬಾಲಿಶಃ ನಡೆಯನ್ನು ತೋರಿಸುತ್ತದೆ. ತಮ್ಮ ಬಾಲಿಶ ವರ್ತನೆಗಳೇ ಕಾಂಗ್ರೆಸ್ ನೆಲಕಚ್ಚಲು ಕಾರಣವಾಗುತ್ತಿವೆ. 2014ರ ನಂತರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುತ್ತಿರುವುದು, ಅಸೆಂಬ್ಲಿ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಈ ರೀತಿಯ ವರ್ತನೆಗಳೇ ಕಾರಣ ಎಂದು ದೂರಿದ್ದಾರೆ.
ರಿಮೋಟ್ ಕಂಟ್ರೋಲ್ ಮೋಡೆಲ್ ನಡೆಯೇ ಯುಪಿಎ ಒಕ್ಕೂಟವನ್ನು ಹಾಳು ಮಾಡಿತ್ತು. ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನೂ ಅದೇ ನಡೆಗಳು ಹಾಳು ಮಾಡುತ್ತಿವೆ. ಎಲ್ಲ ನಿರ್ಧಾರಗಳನ್ನು ಒಂದೋ ರಾಹುಲ್ ಗಾಂಧಿ ಅಥವಾ ಆತನ ಹಿಂಬಾಲಕರು, ಸೆಕ್ಯುರಿಟಿ ಗಾರ್ಡ್, ಪಿಎಗಳು ತೆಗೆದುಕೊಳ್ಳುತ್ತಿದ್ದಾರೆ. ಸೋನಿಯಾ ಗಾಂಧಿ ಕೇವಲ ನಾಮಕೇವಾಸ್ತೆ ಇದ್ದಾರೆ ಎಂದು ಆಜಾದ್ ಟೀಕಿಸಿದ್ದಾರೆ.
ಒಂದು ವರ್ಷದ ಹಿಂದೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದ 23 ಮಂದಿ ರಾಷ್ಟ್ರೀಯ ನಾಯಕರಲ್ಲಿ ಗುಲಾಂ ನಬಿ ಕೂಡ ಒಬ್ಬರು. ಇನ್ನೊಬ್ಬ ಕಪಿಲ್ ಸಿಬಲ್ ಇತ್ತೀಚೆಗಷ್ಟೇ ರಾಜ್ಯಸಭೆ ಚುನಾವಣೆ ಸಂದರ್ಭ ಸದ್ದಿಲ್ಲದೇ ಪಕ್ಷದಿಂದ ಹೊರ ನಡೆದು ಬಿಎಸ್ಪಿ ಬೆಂಬಲದಲ್ಲಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ಗುಲಾಂ ನಬಿ ಕಾಲು ಹೊರಗಿಟ್ಟಿದ್ದು, ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯನ್ನು ಬಲಪಡಿಸಲು ಮುಂದಾಗುತ್ತಾರೆಯೇ ಅನ್ನುವ ಕುತೂಹಲ ಇದೆ, ಯಾಕಂದ್ರೆ ಗುಲಾಂ ನಬಿ ಅವರಿಗೆ ಪ್ರಧಾನಿ ಮೋದಿ ಜೊತೆ ಹತ್ತಿರದ ಸಂಬಂಧ ಇದೆ.
In a fresh jolt to the Congress, senior leader Ghulam Nabi Azad resigned from the party with sharp jabs at the Gandhis and the organisational leadership.In a letter addressed to Congress president Sonia Gandhi, Azad cited the sidelining of senior leaders and the increasing sway of a "coterie of inexperienced sycophants" as the reasons behind his exit from the party.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm