ಬ್ರೇಕಿಂಗ್ ನ್ಯೂಸ್
16-08-22 10:25 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 16: ಜಮ್ಮು ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಉಗ್ರರು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಟ್ಟು ದಾಳಿ ಮುಂದುವರಿಸಿರುವುದರಿಂದ ಪಂಡಿತ ಸಮುದಾಯ ದಿಕ್ಕೆಟ್ಟಿದೆ. ಪಂಡಿತರನ್ನು ಪ್ರತಿನಿಧಿಸುವ ಕಾಶ್ಮೀರಿ ಪಂಡಿತ್ ಸಂಘರ್ಷ್ ಸಮಿತಿಯ ನಾಯಕರು, ಕಣಿವೆ ಭಾಗದಲ್ಲಿರುವ ಪಂಡಿತರನ್ನು ಊರು ತೊರೆದು ಬರುವಂತೆ ಕರೆ ನೀಡಿದ್ದಾರೆ.
ಸರಕಾರ ಮತ್ತು ನ್ಯಾಯಾಂಗ ಕಾಶ್ಮೀರಿ ಪಂಡಿತರ ಹಿತ ಕಾಯಲು ಸೋತಿವೆ. ಉಗ್ರರ ದಾಳಿ ನೋಡಿದರೆ, ಎಲ್ಲ ಪಂಡಿತರನ್ನೂ ಕೊಂದು ಹಾಕುವ ಗುರಿ ಇದ್ದಂತೆ ತೋರುತ್ತಿದೆ. ಸ್ಥಳೀಯರೇ ನೆರೆಹೊರೆಯ ಪಂಡಿತ ಸಮುದಾಯದ ಸದಸ್ಯರನ್ನು ಕೊಲ್ಲಲು ಉಗ್ರರಿಗೆ ನೆರವು ನೀಡುತ್ತಿದ್ದಾರೆ. ಇದರಿಂದಾಗಿ ಪಂಡಿತರು ಕಾಶ್ಮೀರ ಕಣಿವೆಯಲ್ಲಿ ಉಳಿಯುವುದು ಕಷ್ಟವಾಗಿದೆ ಎಂದು ಸಮಿತಿ ಮುಖ್ಯಸ್ಥ ಸಂಜಯ್ ಭಿಕ್ಕು ಹೇಳಿದ್ದಾರೆ.
ಕಾಶ್ಮೀರಕ್ಕೆ ಬರುವ ಪ್ರವಾಸಿಗರು ಸೇಫ್ ಇದ್ದಾರೆ. ಅಮರನಾಥ ಯಾತ್ರೆಯ ಸಂದರ್ಭದಲ್ಲೂ ದಾಳಿಗಳು ನಡೆದಿಲ್ಲ. ಆದರೆ ಮುಸ್ಲಿಮರಲ್ಲದ ಅದರಲ್ಲೂ ಪಂಡಿತ ಸಮುದಾಯದ ಸದಸ್ಯರನ್ನು ಗುರಿಯಿಟ್ಟು ಕೊಲ್ಲುತ್ತಿದ್ದಾರೆ. ಯಾವುದೇ ಪಂಡಿತ ಸಮುದಾಯದ ಸದಸ್ಯನಿಗೂ ರಕ್ಷಣೆಯಿಲ್ಲ. ಆಡಳಿತಗಳು ಕಾಶ್ಮೀರಿ ಪಂಡಿತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿವೆ. ಒಂದೋ ತಮ್ಮ ಊರು ತೊರೆದು ಹೋಗಬೇಕು, ಇಲ್ಲವೇ ಅಲ್ಲಿಯೇ ಉಳಿದು ಉಗ್ರರಿಂದ ಸಾಯಬೇಕು ಎಂಬ ಸ್ಥಿತಿಯಾಗಿದೆ ಎಂದು ಸಂಜಯ್ ಭಿಕ್ಕು ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಉಗ್ರರು ಪಂಡಿತ ಸಮುದಾಯದ ಇಬ್ಬರು ಸೋದರರ ಮೇಲೆ ದಾಳಿ ನಡೆಸಿದ್ದು, ಒಬ್ಬನನ್ನು ಗುರಿಯಿಟ್ಟು ಕೊಂದಿದ್ದಾರೆ. ಸುನಿಲ್ ಕುಮಾರ್ ಮತ್ತು ಪಿಂಟು ಕುಮಾರ್ ಮೇಲೆ ದಾಳಿ ನಡೆಸಲಾಗಿತ್ತು. ಸುನಿಲ್ ಕುಮಾರ್ ಸ್ಥಳದಲ್ಲೇ ಸಾವು ಕಂಡಿದ್ದರು. ಕಳೆದ ಎರಡು ತಿಂಗಳಲ್ಲಿ 25ಕ್ಕೂ ಹೆಚ್ಚು ಪಂಡಿತ ಸಮುದಾಯದ ಮಂದಿಯನ್ನು ಉಗ್ರರು ಗುರಿಯಿಟ್ಟು ಕೊಂದಿದ್ದಾರೆ. ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ಕಾಯ್ದೆಯನ್ನು ತೆಗೆದು ಹಾಕಿ, ಅಲ್ಲಿನ ಮೂಲ ನಿವಾಸಿಗಳಾದ ಪಂಡಿತರನ್ನು ಮರು ವಸತಿ ಸ್ಥಾಪಿಸಲು ಕೇಂದ್ರ ಸರಕಾರ ಅವಕಾಶ ನೀಡಿದ್ದನ್ನು ವಿರೋಧಿಸಿ ಭಯೋತ್ಪಾದಕರು ನಿರಂತರ ದಾಳಿ ನಡೆಸುತ್ತಿದ್ದಾರೆ. ಸ್ಥಳೀಯ ಮುಸ್ಲಿಮರ ಬೆಂಬಲ ಪಡೆದು ಸರಕಾರಿ ಕೆಲಸದಲ್ಲಿರುವ ಕಾಶ್ಮೀರಿ ಪಂಡಿತರು, ಶಿಕ್ಷಕರನ್ನು ಗುರಿಯಾಗಿಸಿ ಕೊಲ್ಲುತ್ತಿದ್ದಾರೆ. ಉಗ್ರರ ಉಪಟಳದಿಂದಾಗಿ ಪಂಡಿತರು ಭೀತಿಗೊಳಗಾಗಿದ್ದು, ಕಾಶ್ಮೀರ್ ಫೈಲ್ಸ್ ಚಿತ್ರದ ಭಯಾನಕ ಚಿತ್ರಣ ಮರುಕಳಿಸುವಂತಾಗಿದೆ.
Kashmiri Pandit Sangarsh Samiti (KPSS), an organisation that represents the Pandits living in the Valley, on Tuesday asked community members to leave the valley in the wake of increased attacks on them by militants."With another deadly attack on Kashmiri Pandits in Kashmir, the terrorists have made it clear that they are going to kill all the Kashmiri Pandits in Kashmir valley," KPSS chief Sanjay Tickoo said in an official statement.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm