ಬ್ರೇಕಿಂಗ್ ನ್ಯೂಸ್
03-06-22 09:29 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 3: ಆರ್ಯ ಸಮಾಜ ನೀಡುವ ಮ್ಯಾರೇಜ್ ಸರ್ಟಿಫಿಕೇಟಿಗೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆರ್ಯ ಸಮಾಜ ಅನ್ನುವುದು ಹಿಂದು ಸುಧಾರಣಾವಾದಿ ಸಂಘಟನೆಯಾಗಿದ್ದು, 1875ರಲ್ಲಿ ದಯಾನಂದ ಸರಸ್ವತಿ ಸ್ಥಾಪಿಸಿದ್ದರು. ಅಲ್ಲಿ ಅಂತರ್ಜಾತಿ ಮದುವೆಗಳನ್ನು ಮಾಡುತ್ತಿದ್ದುದರಿಂದ ಪ್ರೀತಿಸಿ ಓಡಿ ಹೋದವರೆಲ್ಲ ಆರ್ಯ ಸಮಾಜದ ಸಭಾಂಗಣದಲ್ಲಿ ಮದುವೆಯಾಗುತ್ತಿದ್ದರು. ಅಲ್ಲಿಂದಲೇ ಮದುವೆ ನೋಂದಣಿಯನ್ನೂ ಮಾಡುತ್ತಿದ್ದರು.
ಇದೀಗ ಅಂತಹುದೇ ಲವ್ ಮ್ಯಾರೇಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಆರ್ಯ ಸಮಾಜ ಕೊಟ್ಟಿದ್ದ ಮ್ಯಾರೇಜ್ ಸರ್ಟಿಫಿಕೇಟನ್ನು ಮಾನ್ಯ ಮಾಡಲು ನಿರಾಕರಿಸಿದೆ. ಅಜಯ್ ರಸ್ತೋಗಿ ಮತ್ತು ಬಿವಿ ನಾಗರತ್ನ ಅವರಿದ್ದ ಪೀಠವು, ಈ ಕುರಿತ ಪ್ರಕರಣದಲ್ಲಿ ಮದುವೆ ನೋಂದಣಿ ಮಾಡಿಸುವುದು ಆರ್ಯ ಸಮಾಜದ ಕೆಲಸ ಅಲ್ಲ ಎಂದು ಹೇಳಿದೆ. ಅಲ್ಲದೆ, ಅದಕ್ಕೆಂದೇ ಮದುವೆ ನೋಂದಣಿ ಮಾಡುವ ರಿಜಿಸ್ಟರ್ಡ್ ಬಾಡಿ ಇದೆ. ಅಲ್ಲಿಂದಲೇ ಒರಿಜಿನಲ್ ಮದುವೆ ಸರ್ಟಿಫಿಕೇಟ್ ಮಾಡಿಕೊಂಡು ಬನ್ನಿ ಎಂದು ಅರ್ಜಿದಾರರಿಗೆ ಆದೇಶಿಸಿದೆ.

ಮಧ್ಯಪ್ರದೇಶದ ಕುಟುಂಬವೊಂದು ತಮ್ಮ ಅಪ್ರಾಪ್ತ ಮಗಳನ್ನು ಯುವಕನೊಬ್ಬ ಅಪಹರಿಸಿ, ಅತ್ಯಾಚಾರ ನಡೆಸಿದ್ದಾನೆಂದು ಪೊಲೀಸ್ ದೂರು ದಾಖಲಿಸಿತ್ತು. ಆದರೆ ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ರಿಟ್ ಸಲ್ಲಿಸಿದ್ದ ಯುವಕ, ಯುವತಿ ಅಪ್ರಾಪ್ತಳು ಅಲ್ಲ. ಪ್ರಾಯ ಪ್ರಬುದ್ಧಳಾಗಿದ್ದು ತನ್ನ ಸ್ವಇಚ್ಚೆಯಿಂದಲೇ ತನ್ನ ಜೊತೆಗೆ ಬಂದಿದ್ದಾಳೆ. ಆಕೆಯನ್ನು ಆರ್ಯ ಸಮಾಜದಲ್ಲಿ ಮದುವೆಯಾಗಿದ್ದೇನೆ ಎಂದು ಭಾರತೀಯ ಆರ್ಯ ಪ್ರತಿನಿಧಿ ಸಭಾ ಕೊಟ್ಟಿದ್ದ ಮದುವೆ ನೋಂದಣಿ ಪತ್ರವನ್ನು ಕೋರ್ಟ್ ಮುಂದಿಟ್ಟಿದ್ದಾನೆ. ಆದರೆ ಕೋರ್ಟ್, ಆರ್ಯ ಸಮಾಜ ಕೊಟ್ಟಿದ್ದ ಮದುವೆ ನೋಂದಣಿ ಪತ್ರವನ್ನು ಪರಿಗಣಿಸಲು ನಿರಾಕರಿಸಿದೆ.
The Supreme Court on Friday refused to give legal recognition to a marriage certificate issued by Arya Samaj. Arya Samaj is a Hindu reformist organization and was established by Swami Dayanand Saraswati in 1875. A bench of Justices Ajay Rastogi and BV Nagarathna said that the work and jurisdiction of Arya Samaj is not to issue marriage certificates. “Only competent authorities can issue marriage certificates. Bring the original certificate before the court,” the bench said.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
17-07-26 09:07 pm
HK News Staffer
ಮಠದಕಣಿ ಮನೆ ಕಳ್ಳತನ ಬೆನ್ನತ್ತಿದ ಬರ್ಕೆ ಪೊಲೀಸರು; ನ...
17-07-26 08:11 pm
ಬಿಸಿ ರೋಡಿನಲ್ಲಿ ಯುವತಿ ಕೊಂದ ಆರೋಪಿ ಚೇತನ್ ಪಚ್ಚನಾಡ...
17-07-26 12:58 pm
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm