ಬ್ರೇಕಿಂಗ್ ನ್ಯೂಸ್
03-06-22 07:36 pm HK News Desk ದೇಶ - ವಿದೇಶ
ಕಾರವಾರ, ಜೂನ್ 3 : ಹಿಜಾಬ್ ವಿಚಾರ ನಮ್ಮ ಸರ್ಕಾರದ ಮಟ್ಟಿಗೆ ಮುಗಿದುಹೋಗಿರುವ ಅಧ್ಯಾಯ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವರು ಹಿಜಾಬ್ ಹಾಕಿಕೊಂಡು ಬಂದು ಅಶಾಂತಿಯನ್ನ ಸೃಷ್ಟಿಸುತ್ತಿದ್ದಾರೆ. ಸಂವಿಧಾನವನ್ನ ಸ್ವೀಕರಿಸುವವರು ಕೋರ್ಟಿನ ಆದೇಶವನ್ನ ವಿರೋಧ ಮಾಡತಕ್ಕದ್ದಲ್ಲ. ಹಿಜಾಬ್ ಹಾಕಿ ಬಂದು ವಿವಾದ ಸೃಷ್ಟಿಸಿದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಲೌಡ್ ಸ್ಪೀಕರ್ ತೆರವು ಮಾಡದಿದ್ದರೆ ಗುಂಡಿಕ್ಕಿ ಸಾಯಿಸೋದಾಗಿ ಪ್ರಮೋದ್ ಮುತಾಲಿಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೋಟ, ಮುತಾಲಿಕ್ ಅವರು ಯಾವುದೇ ಸರ್ಕಾರ ಇದ್ದರೂ ಜಾಗೃತಿ ಮಾಡುವಂತ ಕೆಲಸ ಮಾಡುತ್ತಾರೆ. ಲೌಡ್ಸ್ಪೀಕರ್ ವಿಚಾರದಲ್ಲಿ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಜಾರಿಮಾಡಲು ನಿರ್ದೇಶಿಸಿದೆ. ಕೆಲವೆಡೆ ಲೌಡ್ಸ್ಪೀಕರ್ ತೆಗೆಸಲಾಗಿದೆ, ಕೆಲವು ಕಡೆ ತೆಗೆಸುತ್ತಿದ್ದಾರೆ. ಇದು ಯಾವುದೇ ಜಾತಿ, ಧರ್ಮ, ಭಾಷೆಗೆ ಸೀಮಿತವಾಗಿಲ್ಲ. ಎಲ್ಲವೂ ಕೂಡ ನ್ಯಾಯಾಂಗ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಬರುತ್ತವೆ ಎಂದರು.
ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತರನ್ನ ತುಂಬುವುದು ತಪ್ಪಲ್ಲ. ಮುಂದಿನ ಪೀಳಿಗೆಗೆ ರಾಷ್ಟ್ರೀಯತೆ ಅಂದ್ರೆ ಏನು ಅಂತ ಹೇಳಬೇಕಾದ ಅಗತ್ಯ ಇದೆ. ಅದಕ್ಕೆ ಅವಶ್ಯಕವಾದ ಪಠ್ಯಗಳ ಅಳವಡಿಕೆಗೆ ತಜ್ಞರ ಸಮಿತಿ ಪರಿಷ್ಕರಣೆ ಮಾಡಿದೆ. ವಿನಾಕಾರಣ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ಹಿಂದೆ ಅಸಹಿಷ್ಣುತೆ ಕಾರಣ ನೀಡಿ ಕೆಲವರು ತಮ್ಮ ಪ್ರಶಸ್ತಿ ವಾಪಸ್ ನೀಡೋದಾಗಿ ಹೇಳಿದ್ದರು. ಆದ್ರೆ ಇಲಾಖೆಯವರ ಬಳಿ ಕೇಳಿದಾಗ ಯಾರೂ ಸಹ ಪ್ರಶಸ್ತಿಯನ್ನಾಗಲಿ, ಹಣವನ್ನಾಗಲಿ ವಾಪಸ್ ಮಾಡಿರಲಿಲ್ಲ. ಹೀಗೆ ಗುಮ್ಮನನ್ನು ಬಿಟ್ಟು ಹೆದರಿಸುವ ಪದ್ದತಿ ಹಿಂದಿನಿಂದಲೂ ಇದೆ. ದೇವನೂರು ಮಹಾದೇವನಂಥವರು ಕೆಲವೊಂದು ವಿಚಾರಗಳನ್ನ ಉಲ್ಲೇಖಿಸಿದ್ದಾರೆ. ಅವರು ತಿಳಿದುಕೊಂಡಿರುವ ತಪ್ಪುಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲಾಗುವುದು. ಕೆಲವರು ಪಠ್ಯಪುಸ್ತಕದಿಂದ ತನ್ನ ಪಾಠವನ್ನ ತೆಗೆಯಿರಿ ಎಂದು ಹೇಳಿಕೆ ನೀಡಿದ್ದಾರೆ. ಕೆಲವರ ಪಾಠಗಳೇ ಪುಸ್ತಕದಲ್ಲಿ ಇಲ್ಲ, ಸುಮ್ಮನೆ ಹೇಳಿಕೆ ಕೊಟ್ಟವರೂ ಇದ್ದಾರೆ. ಇದರಲ್ಲಿ ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ. ಎಲ್ಲರ ಸಲಹೆ ಕೇಳುತ್ತೇವೆ, ಸರಿಯಾದುದನ್ನೇ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Hijab row in Mangalore university, court order must be strictly followed says Kota Poojary.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm