ಬ್ರೇಕಿಂಗ್ ನ್ಯೂಸ್
30-05-22 08:06 pm HK News Desk ದೇಶ - ವಿದೇಶ
ನವದೆಹಲಿ, ಮೇ 30: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಆಪ್ ಸರಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
2015-16ರಲ್ಲಿ ಸತ್ಯೇಂದ್ರ ಜೈನ್ ದೆಹಲಿಯಲ್ಲಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ 4.81 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಆಗಿತ್ತು. ಕೊಲ್ಕತ್ತಾ ಮೂಲದ ಕಂಪನಿಗಳು ಹವಾಲಾ ರೂಪದಲ್ಲಿ ಸತ್ಯೇಂದ್ರ ಜೈನ್ ಹೆಸರಲ್ಲಿದ್ದ ಕಂಪನಿಗೆ ಹಣ ವರ್ಗಾವಣೆ ಮಾಡಿತ್ತು. ಈ ಹಣವನ್ನು ಸತ್ಯೇಂದ್ರ ಜೈನ್ ದೆಹಲಿ ಸುತ್ತಮುತ್ತ ಆಸ್ತಿ ಖರೀದಿಸಲು ಬಳಕೆ ಮಾಡಿದ್ದರು ಅನ್ನೋದು ಇಡಿ ಅಧಿಕಾರಿಗಳ ಆರೋಪ.
ಆದರೆ ಹಳೆ ಪ್ರಕರಣದಲ್ಲಿ ಈಗ ಯಾಕೆ ಬಂಧಿಸುತ್ತಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಸತ್ಯೇಂದ್ರ ಜೈನ್, ದೆಹಲಿ ಸರಕಾರದಲ್ಲಿ ಇಂಧನ, ಆರೋಗ್ಯ, ಕೈಗಾರಿಕೆ, ಪಿಡಬ್ಲ್ಯುಡಿ ಹೀಗೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಆಪ್ ಸರಕಾರದಲ್ಲಿ ಪ್ರಭಾವಿ ಸಚಿವರೂ ಹೌದು. ಇತ್ತೀಚೆಗೆ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಆರೋಗ್ಯ ಸಚಿವ ಗುತ್ತಿಗೆ ಒಂದರಲ್ಲಿ ಪರ್ಸೆಂಟೇಜ್ ತೆಗೆದುಕೊಂಡಿರುವುದು ತಿಳಿಯುತ್ತಲೇ ಸಚಿವ ಸ್ಥಾನದಿಂದ ವಜಾ ಮಾಡಿದ್ದಲ್ಲದೆ, ಒಟ್ಟು ಪ್ರಕರಣದ ಬಗ್ಗೆ ತನಿಖೆಗೆ ಆದೇಶ ಮಾಡಿ ಸಚಿವರನ್ನೇ ಬಂಧಿಸಿತ್ತು.
ಪಂಜಾಬ್ ಆಪ್ ಸರಕಾರದ ನಡೆ ದೇಶಾದ್ಯಂತ ಭಾರೀ ಮೆಚ್ಚುಗೆಗೂ ಪಾತ್ರವಾಗಿದ್ದಲ್ಲದೆ, ಬಿಜೆಪಿ ಸರಕಾರಕ್ಕೆ ಇರಿಸು ಮುರಿಸನ್ನೂ ಮಾಡಿತ್ತು. ಬಿಜೆಪಿ ಸರಕಾರದ ಸಚಿವರ ಬಗ್ಗೆ ಆರೋಪಗಳು ಇದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಆಪ್ ಸರಕಾರ ತನ್ನ ಸಚಿವನನ್ನೇ ಬಂಧಿಸಿದ್ದು ಭಾರೀ ಸುದ್ದಿಯಾಗಿತ್ತು. ಇದೇ ಕಾರಣಕ್ಕೋ ಏನೋ, ಇಡಿ ಅಧಿಕಾರಿಗಳ ಮೂಲಕ ಹಳೆ ಕೇಸಿನಲ್ಲಿ ಆಪ್ ಸರಕಾರದ ಸಚಿವರನ್ನು ಬಂಧಿಸಿದೆ.
The Enforcement Directorate on Monday arrested Delhi Health Minister Satyendar Jain in a case connected to hawala transactions related to a Kolkata-based company. Jain, 57, is the minister for health, power, home, PWD, industries, urban development, flood, irrigation and water in the Arvind Kejriwal-led government. In April, ED had attached assets worth Rs 4.81 crore of the family and companies ''beneficially owned and controlled'' by Jain in connection with a money-laundering probe against him.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm