ಬ್ರೇಕಿಂಗ್ ನ್ಯೂಸ್
30-05-22 03:25 pm HK News Desk ದೇಶ - ವಿದೇಶ
ಪೋಖರಾ, ಮೆ 30 : ಹಿಮಾಲಯದಲ್ಲಿ 22 ಮಂದಿಯೊಂದಿಗೆ ನಾಪತ್ತೆಯಾಗಿದ್ದ ಪ್ರಯಾಣಿಕ ವಿಮಾನದ ಅವಶೇಷಗಳಿಂದ 14 ಮೃತದೇಹಗಳನ್ನು ನೇಪಾಳ ಸೇನಾ ಸಿಬ್ಬಂದಿ ಸೋಮವಾರ ಹೊರತೆಗೆದಿದ್ದಾರೆ.
ನಿನ್ನೆ ಭಾನುವಾರ ಬೆಳಗ್ಗೆ ಪಶ್ಚಿಮ ನೇಪಾಳದ ಪೊಖರಾದಿಂದ ಜನಪ್ರಿಯ ಟ್ರೆಕ್ಕಿಂಗ್ ತಾಣವಾದ ಜೋಮ್ಸಮ್ಗೆ ಹೊರಟ ಸ್ವಲ್ಪ ಸಮಯದಲ್ಲಿ ನೇಪಾಳದ ವಾಹಕ ತಾರಾ ಏರ್ ನಿರ್ವಹಿಸುವ ಒಟ್ಟರ್ ವಿಮಾನದೊಂದಿಗೆ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಳೆದುಕೊಂಡಿತು.
ಮಿಲಿಟರಿ ಮತ್ತು ಖಾಸಗಿ ಸಂಸ್ಥೆಗಳು ನಿರ್ವಹಿಸುವ ಹೆಲಿಕಾಪ್ಟರ್ಗಳು ನಿನ್ನೆ ಇಡೀ ದಿನ ದೂರದ ಪರ್ವತ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ತಂಡದ ನೆರವಿನೊಂದಿಗೆ ಹುಡುಕಾಟ ನಡೆಸಿದವು., ಪ್ರತಿಕೂಲ ಹವಾಮಾನದಿಂದಾಗಿ ಸಮುದ್ರ ಮಟ್ಟದಿಂದ ಸುಮಾರು 3,800-4,000 ಮೀಟರ್ (12,500-13,000 ಅಡಿಗಳಷ್ಟು) ಎತ್ತರದಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಯಿತು.
ಇಂದು ಮುಂಜಾನೆ ಮತ್ತೆ ಶೋಧಕಾರ್ಯ ಆರಂಭಗೊಂಡಾಗ ನೇಪಾಳ ಸೈನ್ಯವು ಸಾಮಾಜಿಕ ಮಾಧ್ಯಮದಲ್ಲಿ ವಿಮಾನದ ಭಾಗಗಳು ಮತ್ತು ಇತರ ಶಿಲಾಖಂಡರಾಶಿಗಳ ಫೋಟೋವನ್ನು ಹಂಚಿಕೊಂಡಿದೆ, 9N-AET ನೋಂದಣಿ ಸಂಖ್ಯೆಯು ಸ್ಪಷ್ಟವಾಗಿ ಗೋಚರಿಸುವ ರೆಕ್ಕೆ ಸೇರಿದಂತೆ ವಿಮಾನದ ಅವಶೇಷಗಳು ಪರ್ವತದ ಮೇಲೆ ಬಿದ್ದಿದೆ.
ವಿಮಾನದಲ್ಲಿ ನಾಲ್ವರು ಭಾರತೀಯರು ಮತ್ತು ಇಬ್ಬರು ಜರ್ಮನ್ನರು, ಉಳಿದ ನೇಪಾಳಿಗಳಿದ್ದರು. ಅಪಘಾತದ ಕಾರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಮುಸ್ತಾಂಗ್ ಜಿಲ್ಲೆಯ ಥಾಸಾಂಗ್ ಗ್ರಾಮೀಣ ಪುರಸಭೆಯ ಸಾನೋಸ್ವೇರ್ ಪ್ರದೇಶದಲ್ಲಿ 14,500 ಅಡಿ (4,420 ಮೀಟರ್) ಎತ್ತರದಲ್ಲಿ ವಿಮಾನವು ಅಪಘಾತಕ್ಕೀಡಾಗಿ ಪತನವಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ.
ಇದುವರೆಗೆ 14 ಮಂದಿಯ ಶವಗಳನ್ನು ಹೊರತೆಗೆಯಲಾಗಿದ್ದು ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಹವಾಮಾನ ಪ್ರತಿಕೂಲವಾಗಿದ್ದು ಶೋಧಕಾರ್ಯ ತಂಡವನ್ನು ದುರ್ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಲು ನಮಗೆ ಸಾಧ್ಯವಾಯಿತು. ಬೇರೆ ಯಾವುದೇ ವಿಮಾನಕ್ಕೆ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ವಿಮಾನಯಾನ ಪ್ರಾಧಿಕಾರದ ವಕ್ತಾರ ಡಿಯೊ ಚಂದ್ರ ಲಾಲ್ ಕರ್ನ್ ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
Search and rescue teams in Nepal have recovered the bodies of 16 people on board a Tara Air flight that crashed with 22 people on board, authorities said Monday. Nepal's Civil Aviation Authority said on Twitter the bodies have been collected and are yet to be identified.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm