ಬ್ರೇಕಿಂಗ್ ನ್ಯೂಸ್
20-05-22 10:07 pm HK Desk News ಕರ್ನಾಟಕ
ಕಾರವಾರ, ಮೇ 20 : ನಕಲಿ ನೋಟು ಮುದ್ರಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸದಸ್ಯರಿದ್ದ ಕುಟುಂಬವನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಕಾರವಾರದ ಕೋಡಿಬಾಗದ ಮುಸ್ತಾಕ್ ಬೇಗ್ (43), ಆತನ ಪತ್ನಿ ಸೀಮಾ ಮುಸ್ತಾಕ್ (40), ಅಪ್ಜಲ್ ಬೇಗ್ (45) ಮತ್ತು ಈತನ ಪತ್ನಿ ಆಸ್ಮಾ ಬೇಗ್ ಬಂಧಿತ ಆರೋಪಿಗಳು. ಮುಸ್ತಾಕ್ ಮತ್ತು ಅಪ್ಜಲ್ ಇಬ್ಬರೂ ಸಹೋದರರಾಗಿದ್ದು ಚಾಲಕ ವೃತ್ತಿ ಮಾಡುತ್ತಿದ್ದರು. ಇವರು ಮನೆಯಲ್ಲಿಯೇ ನಕಲಿ ನೋಟು ಮುದ್ರಿಸಿ ಹುಬ್ಬಳ್ಳಿ ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆ ವೇಳೆ ಪತ್ತೆಯಾಗಿದೆ.
ಬಂಧಿತರಿಂದ ನಕಲಿ ನೋಟು ಮುದ್ರಿಸಲು ಬಳಸುತ್ತಿದ್ದ ಪ್ರಿಂಟರ್, ಲ್ಯಾಪ್ಟಾಪ್, 500 ಮುಖಬೆಲೆಯ ನೋಟುಗಳು ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ಪಡೆದು ನಕಲಿ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಕಾರವಾರ ಪೊಲೀಸರು ಮೇ 5ರಂದು ಬಂಧಿಸಿದ್ದರು. ಕಾರವಾರದ ಪ್ರವೀಣ ನಾಯರ್, ಗೋವಾ ರಾಜ್ಯದ ಮಡಗಾಂವ್ನ ಲೋಯ್ಡ್ ಲಾರೆನ್ಸ್ ಸ್ಟೇವಿಸ್, ಲಾರ್ಸನ್ ಸಿಲ್ವಾ, ಪ್ರಣಯ್ ಫೆರ್ನಾಂಡಿಸ್ ಅರೆಸ್ಟ್ ಆಗಿದ್ದರು. ಆ ವೇಳೆ ಅಪ್ಜಲ್ ಬೇಗ್ ತಪ್ಪಿಸಿಕೊಂಡಿದ್ದನು. ವಿಶೇಷ ತಂಡ ರಚಿಸಿ ಪತ್ತೆಗಿಳಿದ ಪೊಲೀಸರು ಆರೋಪಿಗಳ ಮೊಬೈಲ್ ಸಂಪರ್ಕ ಮತ್ತು ವಿವಿಧ ಮೂಲಗಳ ಮಾಹಿತಿ ಆಧರಿಸಿ ಗೋವಾದಲ್ಲಿ ಬಂಧಿಸಿದ್ದಾರೆ. ಇದರಲ್ಲಿ ಅಪ್ಜಲ್ ಮತ್ತು ಮುಸ್ತಾಕ್ ನಕಲಿ ನೋಟು ಮುದ್ರಿಸುವಲ್ಲಿ ಕೌಶಲ ಹೊಂದಿದ್ದರು ಎಂದು ವಿಚಾರಣೆ ವೇಳೆ ಪತ್ತೆಯಾಗಿದೆ.
ಆರೋಪಿಗಳು ಕಾರವಾರದಲ್ಲೇ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಆದರೆ, ನೋಟುಗಳನ್ನು ಹೆಚ್ಚಾಗಿ ಬೇರೆ ಜಿಲ್ಲೆಗಳಲ್ಲಿಯೇ ಚಲಾವಣೆ ಮಾಡುತ್ತಿದ್ದರು. ಗೋವಾ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ತಮ್ಮ ಪರಿಚಯಸ್ಥರಿಗೆ ನಕಲಿ ನೋಟುಗಳನ್ನು ಪೂರೈಸುತ್ತಿದ್ದರು. ಸ್ಥಳೀಯವಾಗಿ ಹೆಚ್ಚು ವ್ಯವಹಾರ ಮಾಡುತ್ತಿರಲಿಲ್ಲ. 7 - 8 ತಿಂಗಳಿಂದ ಈ ದಂಧೆ ನಡೆಸುತ್ತಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
Two prime accused in the inter-state fake currency racket busted by Karwar police earlier this month were arrested from Margao on Thursday.
Police gave the names of those arrested as Mushtaq Hasan Beg, 43, and Afzal Hasan Beg, 45.Two of their family members, Seema Mushtaq Beg, 40, and Asma Afzal Beg, who were also involved in the racket have been arrested, police sources said.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm