ಬ್ರೇಕಿಂಗ್ ನ್ಯೂಸ್
07-04-22 05:40 pm HK Desk news ಕರ್ನಾಟಕ
ಚಾಮರಾಜನಗರ, ಎ.7 : ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದ್ರೆ ಹಿರಿಯ ಸಚಿವರನ್ನು ತೆಗೆಯಬೇಕು. ಯಾರನ್ನು ತೆಗೆಯುತ್ತಾರೋ ತೆಗೆಯಲಿ. ಯುವಕರಿಗೆ, ಹೊಸಬರಿಗೆ ಆದ್ಯತೆ ನೀಡಬೇಕು. ನನ್ನನ್ನೂ ತೆಗೆದರೂ ಆಕ್ಷೇಪ ಇಲ್ಲ ಎಂದು ಹಿರಿಯ ಸಚಿವ ಉಮೇಶ ಕತ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಬಂಡೀಪುರದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಉಮೇಶ್ ಕತ್ತಿ, ಚುನಾವಣೆ ದೃಷ್ಟಿಯಿಂದ ಪಕ್ಷದ ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಸ್ವಾಗತ ಮಾಡ್ತೇನೆ. ಹಿರಿಯರಿಗೆ ಕೊಕ್ ಕೊಟ್ರೂ ಸ್ವಾಗತ, ಇಟ್ಕೊಂಡ್ರು ಸ್ವಾಗತ. ಬಹಳಷ್ಟು ಜನ ಹೊಸ ಶಾಸಕರಿದ್ದಾರೆ. ನಾವು ಹಳೆ ಶಾಸಕರು. ನಾನು ಹತ್ತು ಚುನಾವಣೆ ಎದುರಿಸಿ ಒಂಬತ್ತರಲ್ಲಿ ಗೆದ್ದಿದ್ದೇನೆ. ನನ್ನನ್ನು ತೆಗೆದ್ರೂ ಸೈ, ಇಟ್ಕೊಂಡ್ರು ಸೈ. ಪಾರ್ಟಿ ಕೆಲಸ ಕೊಟ್ರೂ ಓಕೆ ಎಂದು ಹೇಳಿದ್ದಾರೆ.
ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಕೇಳಿದ್ದಕ್ಕೆ, ವಿಜಯೇಂದ್ರಗೆ ಸಚಿವ ಸ್ಥಾನ ನೀಡಿದ್ರೆ ಸ್ವಾಗತ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿಗಳ ಮಗ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅವರು. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿದ್ರೆ ತಪ್ಪಿಲ್ಲ ಎಂದು ಉಮೇಶ್ ಕತ್ತಿ ಬ್ಯಾಟಿಂಗ್ ಮಾಡಿದ್ದಾರೆ.
ಸಚಿವ ಸಂಪುಟವನ್ನು ಪುನರ್ರಚನೆ ಮಾಡುತ್ತಾರೋ, ವಿಸ್ತರಣೆಯೋ ನನಗೆ ಗೊತ್ತಿಲ್ಲ. ಇನ್ನು ಒಂದು ವರ್ಷ ನಾವೇ ಅಧಿಕಾರದಲ್ಲಿ ಇರ್ತೀವಿ. ಸರ್ಕಾರ ನಡೆಸುವಾಗ ಹೆಚ್ಚು- ಕಡಿಮೆ ಆಗುವುದು ಸಹಜ. ಆಗ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ತಾರೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
Speaking to media in Chamarajanagar Bandipur, Minister Umesh Swathi said, "We are in power for another year in the state. It is normal for government to fall short. The party's high command will take a final decision. Dropped from the Senior Minister's Cabinet is welcome. The party must be brought back to power. So let's drop out of the Elder's Vol. He said the youth should be let go of the elders.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm