ಬ್ರೇಕಿಂಗ್ ನ್ಯೂಸ್
21-02-22 03:25 pm HK News Desk ಕರ್ನಾಟಕ
ಬೆಂಗಳೂರು, ಫೆ.21: ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಗೂಂಡಾ ವರ್ತನೆಗೆ ಇನ್ನೆಷ್ಟು ಕಾರ್ಯಕರ್ತರು ಬಲಿಯಾಗಬೇಕ್ರೀ.. ಕಳೆದ ಬಾರಿ ನೀವು ವಿರೋಧ ಪಕ್ಷದಲ್ಲಿದ್ದಾಗ ಬ್ಯಾನ್ ಮಾಡುವಂತೆ ಆಗ್ರಹ ಮಾಡುತ್ತಿದ್ದೀರಲ್ಲಾ.. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯದ್ದೇ ಸರಕಾರ ಇದೆ.. ಈಗ ನಿಷೇಧ ಮಾಡಲು ನಿಮಗೇನ್ರೀ ರೋಗ ಎಂದು ಶ್ರೀರಾಮಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹರ್ಷ ಒಬ್ಬ ಅಪ್ಪಟ ಹಿಂದು ಕಾರ್ಯಕರ್ತ. ಕಳೆದ ಐದು ವರ್ಷಗಳಿಂದ ಆತ ಗೋರಕ್ಷಣೆ, ಹಿಂದು ಪರ ಕೆಲಸ ಮಾಡಿಕೊಂಡು ಬಂದಿದ್ದ. ಒಬ್ಬ ಬಡ ಟೈಲರನ ಒಬ್ಬ ಮಗ. ಆತನನ್ನು ಗುರಿಯಾಗಿಸ್ಕೊಂಡು ಹತ್ಯೆ ಮಾಡಿದ್ದಾರೆ. ಹರ್ಷನನ್ನು ಕೊಲೆ ಮಾಡುವುದಕ್ಕೆ ಹಲವು ಬಾರಿ ಪ್ರಯತ್ನ ನಡೆದಿತ್ತು. ದುಷ್ಕರ್ಮಿಗಳು ನಿನ್ನೆ ರಾತ್ರಿ ಹೊಂಚು ಹಾಕಿ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಬೇರಾವುದೇ ವೈಯಕ್ತಿಕ ಕಾರಣಗಳಿಲ್ಲ. ಹಿಜಾಬ್ ಗಲಾಟೆಯ ಹಿಂದಿನ ಶಕ್ತಿಗಳೇ ಈ ಕೊಲೆಯನ್ನು ಮಾಡಿದ್ದಾರೆ.


ಇಂಥ ಕೊಲೆ ಸರಣಿ ಮುಂದೆ ನಡೀಬಾರ್ದು. ಇದಕ್ಕಾಗಿ ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡಿ. ಬಿಜೆಪಿಗೆ ತಾಕತ್ತಿದ್ದರೆ ಇದನ್ನು ಮಾಡಿ ಎಂದು ಸವಾಲು ಹಾಕುತ್ತೇನೆ. ಪಾಪದ ಕಾರ್ಯಕರ್ತರನ್ನು ಬಲಿ ಕೊಡಬೇಡಿ. ಕೂಡಲೇ ಪ್ರಕರಣದ ಹಿಂದಿನ ಆರೋಪಿಗಳನ್ನು ಬಂಧಿಸಿ. ಅವರನ್ನು ಜಾಮೀನಿನಲ್ಲಿ ಹೊರಬರದಂತೆ ಜೈಲಿನಲ್ಲಿ ಕೂಡಿ ಹಾಕಿ. ಅಥವಾ ಅವರನ್ನು ಎನ್ಕೌಂಟರ್ ಮಾಡಿ, ಮುಂದೆ ಈ ರೀತಯ ಅಸಹನೀಯ ಸ್ಥಿತಿ ಮರುಕಳಿಸಬಾರದು ಎಂದು ಮುತಾಲಿಕ್ ಆಗ್ರಹ ಮಾಡಿದ್ದಾರೆ.

ಬಿಜೆಪಿಯವ್ರೇ ಸೇರಿ 25 ಲಕ್ಷ ಪರಿಹಾರ ಕೊಡಿ :
ಅಲ್ಲದೆ, ಹರ್ಷನ ಬಡ ಕುಟುಂಬಕ್ಕೆ ರಾಜ್ಯ ಸರಕಾರ 25 ಲಕ್ಷ ರೂ. ಪರಿಹಾರ ನೀಡಬೇಕು. ಸರಕಾರದಿಂದ ಆಗದಿದ್ದರೆ ನಿಮ್ಮ ಜೇಬಿನಿಂದ ತೆಗೆದು ಕೊಡಿ. ಮಾಜಿ ಮುಖ್ಯಮಂತ್ರಿಯ ಊರಿನಲ್ಲಿ ಈ ಕೊಲೆಯಾಗಿದೆ. ಅಲ್ಲಿಯೇ ಗೃಹ ಸಚಿವರು ಇದ್ದಾರೆ. ಸಂಸದ ಇದ್ದಾರೆ. ಇನ್ನೊಬ್ಬ ಈಶ್ವರಪ್ಪ ಅನ್ನುವ ಸಚಿವನೂ ಇದ್ದಾರೆ. ಇವರೆಲ್ಲ ಸೇರಿ ಪರಿಹಾರ ಕೊಡಲಿ. ಇಂಥ ಜಾಗದಲ್ಲಿ ಒಬ್ಬ ಬಡಪಾಯಿ ಕಾರ್ಯಕರ್ತನ ಕೊಲೆಯಾಗುತ್ತದೆ ಎಂದರೆ ಇವರೇನು ಮಾಡುತ್ತಿದ್ದಾರೆ ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುತಾಲಿಕ್, ಈ ಮಾತುಗಳನ್ನು ಹೇಳಿದ್ದಾರೆ.
Pramod Muthalik Reacts over Shivamogga Murder, Slams BJP says why cant PFI and SDPI be banned
29-04-26 10:36 am
HK News Staffer
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
29-04-26 11:10 pm
HK News Staffer
ಬೆಂಗಳೂರಿನಲ್ಲಿ ದಿಢೀರ್ ಮಳೆ ಆರ್ಭಟ ; ಬೌರಿಂಗ್ ಆಸ್ಪ...
29-04-26 08:12 pm
ಆಧಾರ್ ಹಿಡಿದು ಹೋದವರು 8 ತಿಂಗಳಾದರೂ ಸಿಗದ ಸುಳಿವು ;...
29-04-26 07:54 pm
ತ್ರಾಸಿ ಬೀಚ್ ಬಳಿ ಭೀಕರ ಅಪಘಾತ ; ಶಿವಮೊಗ್ಗದ ಪ್ರವಾಸ...
29-04-26 03:50 pm
ಪಹಲ್ಗಾಮ್ ಮಾದರಿಯಲ್ಲೇ ಮುಂಬೈನಲ್ಲಿ ದಾಳಿ ; ಕಲ್ಮಾ ಪ...
29-04-26 02:46 pm