ಬ್ರೇಕಿಂಗ್ ನ್ಯೂಸ್
05-02-22 10:44 pm HK Desk news ಕರ್ನಾಟಕ
ಬೆಂಗಳೂರು, ಫೆ.5 : ಕಾಂಗ್ರೆಸ್ ಬಿಟ್ಟು ಕುತೂಹಲ ಮೂಡಿಸಿದ್ದ ಹಿರಿಯ ನಾಯಕ ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅಹಿಂದವನ್ನು ಅಲ್ಲಿಯೇ ಬಿಟ್ಟಿದ್ದಾರೆ. ನಾವು ಅಲಿಂಗ ಚಳುವಳಿ ಮಾಡ್ತಿದ್ದೇವೆ. ಯಡಿಯೂರಪ್ಪ ಜೊತೆಗೂ ಮಾತನಾಡಿದ್ದೇವೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಬಿಜೆಪಿ ಏಳು ವರ್ಷದಿಂದ ಏನು ಮಾಡಿದೆ ಎನ್ನೋದು ಗೊತ್ತಿದೆ. ಕಾಂಗ್ರೆಸ್ ಇಲ್ಲಿಯವರೆಗೆ ಏನು ಮಾಡಿದೆ ಅನ್ನೋದು ಜನ್ರಿಗೆ ಗೊತ್ತಿದೆ. ಇವೆರಡರಿಂದ ಹೊರತಾದ ಥರ್ಡ್ ಪೋರ್ಸ್ ಆಡಳಿತಕ್ಕೆ ಬರಬೇಕು. ಜೆಡಿಎಸ್ ಆ ಲೆವೆಲ್ ಗೆ ಬರುತ್ತೆ ಅಂತ ನಮ್ಮ ಅಭಿಮತ ಎಂದು ಹೇಳಿದ ಸಿಎಂ ಇಬ್ರಾಹಿಂ, ಟಿಎಂಸಿ, ಎಸ್ಪಿ, ಬಿಎಸ್ ಪಿಯಾದರೆ ಒಂದರಿಂದ ಎಣಿಕೆ ಮಾಡಬೇಕು. ಜೆಡಿಎಸ್ ಆದರೆ 31 ರಿಂದ ಎಣಿಕೆ ಮಾಡಬೇಕಿದೆ. ಹಾಗಾಗಿ ಜನತಾ ದಳಕ್ಕೆ ಉತ್ತೇಜನ ಕೊಡ್ತೇವೆ ಎಂದು ಹೇಳಿದರು.

೧೪ ರಂದು ಹುಬ್ಬಳ್ಳಿಯಲ್ಲಿ ಸಭೆ ಏರ್ಪಡಿಸಿದ್ದೇನೆ. ಅದರ ನಂತರ ನಾನು ಜೆಡಿಎಸ್ ಸೇರುವ ದಿನಾಂಕ ಹೇಳ್ತೇನೆ. ಇಂದು ಯಾರು ಕೂಡ ನನ್ನ ಪರವಾಗಿ ಮಾತನಾಡಲು ರೆಡಿ ಇಲ್ಲ. ನಮ್ಮದು ಸಣ್ಣ ಜಾತಿ ಅನ್ನೋ ಕಾರಣಕ್ಕೆ. ಆದರೆ ನಮ್ಮ ಸ್ಥಾನ ಏನೆಂದು ತೋರಿಸುತ್ತೇನೆ. ಕಾಂಗ್ರೆಸ್ ನಲ್ಲಿ ನಲಪಾಡ್, ಸಲೀಂಗೆ ಏನು ಮಾಡಿದ್ರಿ ಅಂತ ಗೊತ್ತು. ನನ್ನನ್ನು ಕೆಣಕ ಬೇಡಿ, ಕೆಣಕಿದರೆ ಸರಿ ಇರಲ್ಲ ಎಂದು ಪ್ರಶ್ನೆಯೊಂದಕ್ಕೆ ಗರಂ ಆದರು.
ಮಾರ್ಚ್ 10 ರ ನಂತರ ರಾಜ್ಯದಲ್ಲಿ ಏನಾಗುತ್ತೆ ಅಂತ ಗೊತ್ತಾಗುತ್ತದೆ. ಕಾಂಗ್ರೆಸ್, ಬಿಜೆಪಿಯಿಂದ ಬಹಳಷ್ಟು ಜನ ಬಿಡಲಿದ್ದಾರೆ ಎಂದು ಭವಿಷ್ಯ ನುಡಿದ ಇಬ್ರಾಹಿಂ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಮೊದಲ ಸ್ಥಾನ ಬಂದರೆ, ಬಿಜೆಪಿ ಸೆಕೆಂಡ್ ಸ್ಥಾನದಲ್ಲಿ ಇರುತ್ತದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಬರುತ್ತದೆ ನೋಡ್ತಾ ಇರಿ ಎಂದು ಮತ್ತೊಂದು ಭವಿಷ್ಯದ ನುಡಿಯಾಡಿದರು.


ವಿವಾದ ಎಬ್ಬಿಸೋದ್ರಲ್ಲಿ ಬಿಜೆಪಿ ಎತ್ತಿದ ಕೈ
ಕರ್ನಾಟಕ ಬಿಜೆಪಿ ಸರ್ಕಾರ ವಿವಾದಗಳನ್ನು ಸೃಷ್ಟಿ ಮಾಡೋದ್ರಲ್ಲಿ ಮುಂಚೂಣಿಯಲ್ಲಿ ಇದೆ. ಯಾವುದೇ ವಿವಾದ ಮಾಡಿದ್ರೂ ಸಕ್ಸಸ್ ಆಗ್ತಾ ಇಲ್ಲ. ಗೋ ಹತ್ಯೆ ಬಿಲ್, ಧರ್ಮ ಪರಿವರ್ತನಾ ಬಿಲ್ ಎಲ್ಲಾ ಅಲ್ಲೇ ನಿಲ್ತು. ಈಗ ಹಿಜಬ್ ವಿವಾದ ಇದ್ದಕ್ಕಿದ್ದಂತೆ ಬಂದಿದೆ. ಹಿಜಬ್ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮೈಸೂರು ಮಹಾರಾಜರ ಕಾಲದಿಂದಲೂ ಇದೆ. ಅಲ್ಲಿ ಕಾಲೇಜು ಸ್ಕೂಲ್ ಹೋಗುವ ಮಕ್ಕಳಿಗೆ ಹಿಜಾಬ್ ಇತ್ತು. ಟಿಪ್ಪು ಸುಲ್ತಾನ್ ನಂತರ ಮಹರಾಜರು ಬಂದಾಗ ಇವೆಲ್ಲಾ ಇತ್ತು. ಇದು ನಾಡಿನ ಇತಿಹಾಸ. ಮಾರ್ವಾಡಿ ಸಮಾಜದಲ್ಲೂ ಕೂಡ ಇದೆ. ಆದರೆ ಉಡುಪಿ ಸರಕಾರಿ ಕಾಲೇಜಿನ ಪ್ರಿನ್ಸಿಪಲ್ ಮಕ್ಕಳಿಗೆ ಪಾಠ ಮಾಡೋದು ಬಿಟ್ಟು ಏನು ಮಾಡ್ತಾ ಇದ್ದಾರೆ ಅಂತ ಗೊತ್ತಾಗಲ್ಲ ಎಂದು ಕಟಕಿಯಾಡಿದರು ಇಬ್ರಾಹಿಂ.

ಆ ಮಕ್ಕಳನ್ನು ಗೇಟ್ ಬಳಿ ಕೂರಿಸೋದು ಎಷ್ಟು ಸರಿ. ಶಿಕ್ಷಣ ಸಚಿವ ನಾಗೇಶ್ ಒಳ್ಳೆ ಮನುಷ್ಯ. ಅವರಿಗೆ ಮನವಿ ಮಾಡ್ತೀನಿ. ಇದನ್ನು ವಿವಾದ ಆಗಲು ಬಿಡಬೇಡಿ. ಕೇಸರಿ ಶಾಲು ಹಾಕೋದು, ಏನಿದು ಕಥೆ. ಎಲ್ಲಿಗೆ ರಾಜ್ಯ ತೆಗೆದುಕೊಂಡು ಹೋಗ್ತಾ ಇದ್ದೀರಾ. ಇದು ಕೊನೆಯ ಅಧಿಕಾರ ಇವರದ್ದು. ರಾಜಕೀಯಕ್ಕೆ ಅನುಕೂಲ ಆಗಬೇಕು ಅಂತ ಸರ್ಕಾರಿ ಅಧಿಕಾರಿಗಳು ಫೇವರ್ ಮಾಡಬೇಡಿ. ಮುಂದೆ ಅಧಿಕಾರ ಬದಲಾಗಲಿದೆ, ಗಾಳಿ ಬೇರೆ ಬೀಸುತ್ತಿದೆ ಎಂದು ಹೇಳಿದರು.
Bangalore, former chief minister and party legislature leader h d kumaraswamy today held important talks with former union minister cm ibrahim, who has announced that he will resign from the congress party and join the jd(s).
03-03-26 08:39 pm
HK News Staffer
ಜೀವನಾಂಶ ಕೇಳಿದ ಪತ್ನಿಯನ್ನು ಸುಪಾರಿ ಕೊಟ್ಟು ಕೊಲ್ಲಿ...
03-03-26 08:37 pm
ತಮ್ಮದೇ ಶಾಸಕರ ಫೋನ್ ಕದ್ದಾಲಿಕೆ - ಡಿಕೆಶಿ ಬಗ್ಗೆ ಎಚ...
03-03-26 08:25 pm
1ನೇ ತರಗತಿ ಸೇರಲು 6 ವರ್ಷ ಕಡ್ಡಾಯ; ಸರ್ಕಾರದ ವಯೋಮಿತ...
02-03-26 09:19 pm
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
03-03-26 04:30 pm
HK News Staffer
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
ಗಲ್ಫ್ ಯುದ್ಧ ಹೊಡೆತ ; 80 ಡಾಲರ್ ದಾಟಿದ ಕಚ್ಚಾ ತೈಲದ...
02-03-26 09:23 pm
03-03-26 09:33 pm
HK News Staffer
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
ನಾಲ್ಕು ವರ್ಷಗಳ ಪ್ರೀತಿ ನಿರಾಕರಿಸಿದ ಪ್ರೇಯಸಿ; ವಿರಸ...
03-03-26 10:37 am
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm