ಬ್ರೇಕಿಂಗ್ ನ್ಯೂಸ್
03-12-21 07:22 pm HK Desk news ಕರ್ನಾಟಕ
ಚಿತ್ರದುರ್ಗ, ಡಿ.3: ಕಳೆದ ವಿಧಾನಸಭೆ ಅಧಿವೇಶನದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ತನ್ನ ಕ್ಷೇತ್ರದಲ್ಲಿ ಅಮಾಯಕ ಜನರನ್ನು ಕ್ರಿಸ್ತಿಯನ್ನರಾಗಿ ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಮತಾಂತರ ನಿಷೇಧಕ್ಕೆ ಕಾನೂನು ತರಬೇಕೆಂದು ಆಗ್ರಹಿಸಿದ್ದರು. ತನ್ನ ತಾಯಿಯೂ ಈ ಮತಾಂತರ ಪೀಡೆಗೆ ಒಳಗಾಗಿದ್ದಾರೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.
ಅದರಂತೆ, ಹೊಸದುರ್ಗ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಮತಾಂತರ ಪ್ರಕ್ರಿಯೆ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿತ್ತು. ತಾಲೂಕಿನ ಎರಡು ಗ್ರಾಮಗಳಲ್ಲಿ 45 ಕುಟುಂಬಗಳ ಸದಸ್ಯರು ಸ್ವಯಂಪ್ರೇರಿತರಾಗಿ ಮತಾಂತರ ಆಗಿದ್ದಾಗಿ ಹೇಳಿಕೆ ನೀಡಿದ್ದಾರೆ. ಯಾವುದೇ ಒತ್ತಡ, ಬಲವಂತಕ್ಕೆ ನಾವು ಮತಾಂತರ ಆಗಿಲ್ಲ. ಸ್ವಯಂ ಆಗಿಯೇ ಕ್ರಿಸ್ತಿಯನ್ ಆಗಿ ಮತಾಂತರ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಬಲವಂತದ ಮತಾಂತರ ಪ್ರಕ್ರಿಯೆ ಬಗ್ಗೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮೀಕ್ಷೆ ಕೈಗೊಂಡಿದ್ದರು. ಸಮೀಕ್ಷೆಯಲ್ಲಿ ಕೆಲವು ಕಡೆ ಗ್ರಾಮಸ್ಥರು ಬಲವಂತದ ಮತಾಂತರ ನಡೆಸುತ್ತಿರುವ ಬಗ್ಗೆ ಆರೋಪ ಮಾಡಿದ್ದಾರೆ. ಮತಾಂತರ ಆದವರು, ಕೆಲವು ಆಮಿಷಗಳಿಗೆ ಬಲಿಯಾಗಿ ಸ್ವಧರ್ಮ ತೊರೆದಿದ್ದಾರೆ ಎನ್ನುವ ಮಾತು ಹೇಳಿದ್ದಾರೆ. ಆದರೆ, ಮತಾಂತರ ಆದವರು ಈ ಮಾತನ್ನು ಅಲ್ಲಗಳೆದಿದ್ದಾರೆ. ನಾವು ಯಾವುದೇ ಒತ್ತಡಕ್ಕೆ ಕಟ್ಟುಬಿದ್ದಿಲ್ಲ. ನಮಗೆ ಇಲ್ಲಿ ಮಾನಸಿಕ ಶಾಂತಿ ಸಿಕ್ಕಿದೆ, ಹೀಗಾಗಿ ಮತಾಂತರ ಆಗಿದ್ದೇವೆ ಎಂದಿದ್ದಾರೆ.
ಗೂಳಿಹಟ್ಟಿ ಶೇಖರ್ ಅಧಿವೇಶನದಲ್ಲಿ ತನ್ನ ತಾಯಿಯೇ ಮತಾಂತರ ಆಗಿದ್ದಾರೆಂದು ಹೇಳಿಕೆ ನೀಡಿದ್ದು ದೊಡ್ಡ ಸಂಚಲನ ಉಂಟುಮಾಡಿತ್ತು. ಆನಂತರ, ಶೇಖರ್ ತಾಯಿ ಮತ್ತು ಇತರ 9 ಮಂದಿ ಸ್ವಧರ್ಮಕ್ಕೆ ಮರಳಿದ್ದಾಗಿ ಹೇಳಲಾಗಿತ್ತು. ರಾಜ್ಯ ಸರಕಾರ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಹೇಳಿಕೆ ನೀಡಿದೆ.
Contrary to what Hosadurga BJP MLA Gulihatti Shekhar had claimed, an official survey conducted by Hosadurga tahsildar found that 46 families in two villages in Hosadurga taluk of Chitradurga district accepted Christianity on their own, and were not forced. The families told the official team that nobody forced them to accept Christianity.
29-06-25 10:48 pm
Bangalore Correspondent
DK Shivakumar, R Ashok: ಡಿಕೆಶಿ ಜಾತಕ ಸರಿಯಿಲ್ಲ...
29-06-25 10:33 pm
Grace Ministry Theological Bible College, Ban...
29-06-25 04:49 pm
Fact Finding, Police, Mangalore Mob Lynching...
29-06-25 03:04 pm
RCB, Three IPS Officers Suspend: ಚಿನ್ನಸ್ವಾಮಿ...
28-06-25 04:27 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
29-06-25 11:23 pm
Mangalore Correspondent
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm
Rape, Mangalore Crime, Someshwara Beach: ಇನ್ಸ...
28-06-25 07:30 pm