ಬ್ರೇಕಿಂಗ್ ನ್ಯೂಸ್
31-10-21 02:49 pm Mangalore Reporter ಕರ್ನಾಟಕ
ಬೆಂಗಳೂರು, ಅ.31 : ಕನ್ನಡಿಗರ ಕಣ್ಮಣಿಯಾಗಿ ಅರಳಿ ನಿಂತು ಹೊಂಬಿಸಿಲು ಬೀರುತ್ತಿರುವಾಗಲೇ ಮರೆಯಾದ ಅಪ್ಪು ಇನ್ನು ಕೇವಲ ನೆನಪು ಮಾತ್ರ. ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪ ರಾಜಕುಮಾರ್ ಸಮಾಧಿ ಪಕ್ಕದಲ್ಲೇ ಪ್ರಕೃತಿಯಲ್ಲಿ ಲೀನವಾಗಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಲಕ್ಷಾಂತರ ಜನರ ಕಣ್ಣೀರಿನ ನಡುವೆ ಪುನೀತ್ ಕುಮಾರ್ ಮಣ್ಣಿನಲ್ಲಿ ಸೇರಿದ್ದಾರೆ.
ಅಲ್ಲಿ ಸೇರಿದ್ದ ಕುಟುಂಬಸ್ಥರ ರೋದನಕ್ಕಿಂತಲೂ ಅಭಿಮಾನಿಗಳ ಆಕ್ರಂದನವೇ ಮುಗಿಲು ಮುಟ್ಟಿತ್ತು. ಕಂಠೀರವ ಕ್ರೀಡಾಂಗಣದಿಂದ ಬೆಳಗ್ಗೆಯೇ ಅಪ್ಪು ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತರಲಾಗಿತ್ತು. ಜೊತೆಯಲ್ಲೇ ರಾಜ್ಯ ಸರಕಾರದ ಪ್ರತಿನಿಧಿಗಳೂ ಹಿಂಬಾಲಿಸಿದ್ದರು.
ಪುನೀತ್ ಅವರನ್ನು ತೀರಾ ಹಚ್ಚಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಂತೂ ತನ್ನ ಮಗನಂತೆಯೇ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಸಮಾಧಿಗೆ ಇಳಿಸುವುದಕ್ಕೂ ಮುನ್ನ ಬೊಮ್ಮಾಯಿ ಅಪ್ಪುವನ್ನು ಅಪ್ಪಿಕೊಂಡು ಹಣೆಗೆ ಮುತ್ತಿಕ್ಕಿದ್ದು ನೋಡುಗರನ್ನೇ ಭಾವುಕರನ್ನಾಗಿಸಿತ್ತು.
ದೇಹ, ಮೈಕಟ್ಟು ಸದೃಢ ಆಗಿರಬೇಕೆಂಬ ಅಪಾರ ಕಾಳಜಿ ಹೊಂದಿದ್ದ ಪುನೀತ್, ಸದೃಢ ದೇಹ ಇಟ್ಟುಕೊಂಡೇ ಇಹಲೋಕ ತ್ಯಜಿಸಿದ್ದಾರೆ. ಕೊನೆಯ ಬಾರಿಗೆ ತಮ್ಮನ ಅಗಲಿಕೆ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ಶಿವಣ್ಣ, ಮಗನನ್ನೇ ಕಳಕೊಂಡಿದ್ದೇನೆ. ದೇವರಿಗೆ ಆತನ ಮೇಲೆ ಹೆಚ್ಚು ಪ್ರೀತಿ ಇತ್ತು. ಬೇಗನೇ ಕರೆಸಿಕೊಂಡ ಎಂದು ಹೇಳಿ ಕಣ್ಣೀರು ಹಾಕಿದ್ದು ಅಲ್ಲಿ ಸೇರಿದ್ದ ಜನರನ್ನೂ ಕಣ್ಣಂಚು ಒದ್ದೆ ಮಾಡಿತ್ತು.
ಕಳೆದ ಎರಡು ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಸಾಗರದೋಪಾದಿಯಲ್ಲಿ ಬಂದಿದ್ದು ಅಪ್ಪುವನ್ನು ಕೊನೆಯ ಬಾರಿಗೆ ಕಂಡಿದ್ದಾರೆ. ಎರಡು ದಿವಸದಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಜನ ಅಪ್ಪು ಪಾರ್ಥಿವ ಶರೀರದ ದರ್ಶನ ಮಾಡಿದ್ದಾರೆ ಎಂಬ ಅಂದಾಜು ಮಾಡಲಾಗಿದೆ.
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.#PuneethRajkumar @PuneethRajkumar pic.twitter.com/aEymZwD4aG
— Basavaraj S Bommai (@BSBommai) October 31, 2021
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.#PuneethRajkumar @PuneethRajkumar pic.twitter.com/aEymZwD4aG
— Basavaraj S Bommai (@BSBommai) October 31, 2021
Kannada actor Puneeth Rajkumar was buried with State honours next to his parents Dr. Rajkumar and Parvathamma Rajkumar at Kantheerava Studio on October 31 in the presence of family, friends, colleagues from the film industry and dignitaries. The sombre ceremony concluded by 8 a.m.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm