ಬ್ರೇಕಿಂಗ್ ನ್ಯೂಸ್
15-10-21 03:22 pm Mangaluru Correspondent ಕರ್ನಾಟಕ
ಮಂಡ್ಯ, ಅ.15: ಈವರೆಗಿನ ಸರ್ಕಾರಗಳಲ್ಲಿ ಇವರಂಥ ಬೋಗಸ್ ಸರ್ಕಾರವನ್ನ ನಾನು ನೋಡಿಲ್ಲ. ಮೈಸೂರಿನಲ್ಲಿ ಲೈಟ್ಸ್ ಹಾಕ್ತಾರೆ, ಜನ ಬರಲಿ ನೋಡಲಿ ಅಂತಾರೆ. ಮೆರವಣಿಗೆ ಮಾತ್ರ ಕೋಟೆ ಒಳಗೆ. ಕೊರೊನಾ ಬರುತ್ತೆ ಅಂತಾ ಹೇಳಾರೆ.. ಹೀಗೆಂದು ರಾಜ್ಯ ಸರ್ಕಾರದ ವಿರುದ್ಧ ಖ್ಯಾತ ಇತಿಹಾಸ ತಜ್ಞ ನಂಜೇರಾಜು ಅರಸ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಲೈಟ್ಸ್ ಹಾಕ್ತಾರೆ, ಜನ ಬರಲಿ ನೋಡಲಿ ಅಂತಾರೆ. ಲಕ್ಷಾಂತರ ಜನರೂ ಸೇರ್ತಾರೆ. ಮೆರವಣಿಗೆ ಮಾತ್ರ ಕೋಟೆ ಒಳಗೆ ಮಾಡ್ತಾರೆ. ಕೊರೊನಾ ಬರುತ್ತೆ ಅಂತಾ ಮೆರವಣಿಗೆ ನಿಷೇಧ ಮಾಡ್ತಾರೆ.
ಇವರು ಸಭೆ ಸಮಾರಂಭ ಮಾಡಿದ್ರೆ ಕೊರೊನಾ ಬರೋದಿಲ್ಲ.. ಜನರು ದಸರಾಗೆ ಬಂದ್ರೆ ಮಾತ್ರ ಕೊರೊನಾ ಅಂತೆ..! ಇದೆಲ್ಲಾ ಸರ್ಕಾರದ ನಾಟಕ, ಸರ್ಕಾರ ಜಾತ್ಯಾತೀತ ಸರ್ಕಾರ ಅಂತ ಸಂವಿಧಾನದಲ್ಲೇ ಹೇಳಿಕೊಳ್ತೀವಿ. ಆದರೆ ಇವರು ಒಂದು ಧರ್ಮದ ಧಾರ್ಮಿಕ ಆಚರಣೆಯನ್ನು ಸರಕಾರದವ್ರೇ ಮಾಡುತ್ತಾರೆ.

ಕಾನೂನು ಪ್ರಕಾರ ಮಾಡುವಂತಿಲ್ಲ, ಚಾಮುಂಡಿಯನ್ನ ಹಿಂದು ದೇವರು ಅಂತ ನೀವೇ ಕರಿಯುತ್ತೀರಿ.. ಧಾರ್ಮಿಕ ಉತ್ಸವ ಮಾಡುವುದಕ್ಕೆ ಸರ್ಕಾರಕ್ಕೆ ಹಕ್ಕಿಲ್ಲ. ಆದರೂ ಮಾಡ್ತಿದ್ದಾರೆ, ಇದು ತಪ್ಪು, ಸರಳ ದಸರಾ ಅಂದ್ರೆ ಇದಲ್ಲ.
ಅರಮನೆಯಲ್ಲಿ ಕೊರೊನಾ ಬರಲ್ಲ, ಹೊರಗೆ ಕೊರೊನಾ ಬರುತ್ತೆ ಎನ್ನುವುದು ಮೂರ್ಖತನ. ಸಾವಿರಾರು ಜನ ಲೈಟಿಂಗ್ ನೋಡೋಕೆ ಹೋಗ್ತಿದ್ದಾರೆ. ಲೈಟ್ ಹಾಕಿದ್ದಿವಿ ನೋಡಿ ಬನ್ನಿಯಂತ ಸರ್ಕಾರವೇ ಕರೀತಿದ್ದಾರೆ. ಹೀಗೆ ಜನರು ಒಂದೇ ಕಡೆ ಸೇರಿದ್ರೆ ಕೊರೊನಾ ಬರಲ್ವಾ..? ಮೆರವಣಿಗೆ ಮಾಡಿದ್ರೆ ಮಾತ್ರನಾ ಕೊರೊನಾ ಬರೋದು ಅಂತ ನಂಜೇರಾಜ್ ಅರಸ್ ಕಿಡಿಕಾರಿದ್ದಾರೆ.
ಸರ್ಕಾರಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ. ಯಾರು ಏನೋ ಹೇಳ್ತಾರೆ, ಹಾಗೆ ನಿರ್ಧಾರವನ್ನು ತೆಗೆದುಕೊಳ್ತಾರೆ. ದಸರಾ ಆಚರಣೆ ಮಾಡೋವಾಗಿದ್ರೆ, ಬನ್ನಿ ಮಂಟಪದ ವರೆಗೆ ಮೆರವಣಿಗೆಯಲ್ಲಿ ಆನೆ ತೆಗೆದುಕೊಂಡು ಹೋಗಬೇಕಿತ್ತು. ಎಲ್ಲದಕ್ಕೂ ವ್ಯವಸ್ಥೆ ಮಾಡಿ, ಎಲ್ಲದಕ್ಕೂ ಅವಕಾಶ ಮಾಡಿ ಇದು ಮಾತ್ರ ಯಾಕೆ ಮಾಡ್ತಿಲ್ಲ, ಇಷ್ಟಕ್ಕೆ ಮಾತ್ರ ಯಾಕೆ ಸೀಮಿತ ಮಾಡುದ್ರಿ. ಸರ್ಕಾರದ ಈ ಧೋರಣೆಯನ್ನು ನಾನು ಒಪ್ಪುವುದಿಲ್ಲ ಎಂದು ಮೈಸೂರಿನ ಇತಿಹಾಸದ ಬಗ್ಗೆ ನಿರರ್ಗಳವಾಗಿ ಮಾತನಾಡುವ, ಅದರ ಬಗ್ಗೆ ಅಧ್ಯಯನ ಮಾಡಿ ಖ್ಯಾತಿ ಗಳಿಸಿರುವ ನಂಜೇರಾಜ ಅರಸ್ ಸರಕಾರ ನಿರ್ಧಾರವನ್ನು ಟೀಕಿಸಿದ್ದಾರೆ.
Dasara 2021 Prof P V Nanjaraj Urs slams BJP Govt says is there no Corona in Procession
02-03-26 09:19 pm
HK News Staffer
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
03-03-26 12:26 pm
HK News Staffer
ಗಲ್ಫ್ ಯುದ್ಧ ಹೊಡೆತ ; 80 ಡಾಲರ್ ದಾಟಿದ ಕಚ್ಚಾ ತೈಲದ...
02-03-26 09:23 pm
ಇರಾನ್ ಸಂಘರ್ಷ ; ಸುಪ್ರೀಂ ಲೀಡರ್ ಆಗಿ ನೇಮಿಸಲ್ಪಟ್ಟ...
02-03-26 06:51 pm
ಖಮೇನಿ ಹತ್ಯೆಗೆ ಕಾಶ್ಮೀರದಲ್ಲಿ ಬೀದಿಗಿಳಿದ ಶಿಯಾಗಳು...
02-03-26 03:10 pm
ಇರಾನ್ ಸಂಘರ್ಷ; ಭಾರತದಲ್ಲಿ ಹಿಂಸಾಚಾರ ಸಾಧ್ಯತೆ, ತುರ...
02-03-26 02:26 pm
03-03-26 10:37 am
HK News Staffer
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ರಸ್ತೆ ಚತುಷ್ಪಥ ಅಭ...
02-03-26 10:06 pm
ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಪ್ರಚ...
02-03-26 07:57 pm
'ಬೊಲ್ಪು’ ಯೋಜನೆಯಡಿ 11 ಸ್ಟಾರ್ಟಪ್ಗಳ ಆಯ್ಕೆ ; ಭಾವ...
01-03-26 08:37 pm
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm