ಬ್ರೇಕಿಂಗ್ ನ್ಯೂಸ್
23-09-21 12:49 pm Headline Karnataka News Network ಕರ್ನಾಟಕ
ಬೆಂಗಳೂರು, ಸೆ.23: ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಯುವತಿಯನ್ನು ಪುಸಲಾಯಿಸಿ ನಗ್ನಚಿತ್ರ ತೆಗೆದು ಬ್ಲಾಕ್ ಮೇಲ್ ಮಾಡಿ, 28 ಲಕ್ಷ ರೂಪಾಯಿ ಹಣ ಪೀಕಿಸಿ ವಂಚಿಸಿದ ಮಂಗಳೂರಿನ ಯುವಕನ ಪ್ರಕರಣ ಅಸೆಂಬ್ಲಿಯಲ್ಲಿ ಪ್ರತಿಧ್ವನಿಸಿದೆ. ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಂಗಳೂರಿನ ಮುಡಿಪು ನಿವಾಸಿ ಯುವಕನೊಬ್ಬ ಮದುವೆಯಾಗುವುದಾಗಿ ಹೇಳಿ, ನಂಜನಗೂಡಿನ ಯುವತಿಯನ್ನು ಬ್ಲಾಕ್ ಮೇಲ್ ಮಾಡಿ, 28 ಲಕ್ಷ ರೂಪಾಯಿ ಹಣ ಪೀಕಿಸಿಕೊಂಡಿದ್ದಾನೆ. ಆತನಿಗೆ ಈಗಾಗ್ಲೇ ಬೇರೆ ಮದುವೆಯಾಗಿತ್ತು. ಆದರೆ, ಯುವತಿ ತನ್ನ ತಾಯಿಗೆ ಹುಷಾರಿಲ್ಲ. ತಂದೆ ಇಲ್ಲ. ಅಣ್ಣನಿಗೂ ಹುಷಾರಿಲ್ಲ. ಹಣ ಕೊಡುವಂತೆ ಹೇಳಿ ಯುವತಿ ಅಂಗಲಾಚಿದ್ದಾಳೆ.
ಸೆ.21ರಂದು ಯುವಕ ಮುಡಿಪಿನ ತನ್ನ ಮನೆಗೆ ಬರುವಂತೆ ಹೇಳಿದ್ದರಿಂದ ಆಕೆ ಅಲ್ಲಿಗೆ ತೆರಳಿದ್ದಳು. ಆದರೆ, ಅಲ್ಲಿ ಹೋದ ಯುವತಿಗೆ ಮನೆಯವರು ಸೇರಿ ಹಲ್ಲೆ ನಡೆಸಿದ್ದಾರೆ. ಹಣವನ್ನು ಕೊಡದೆ ಪೀಡಿಸಿದ್ದಾರೆ. ಈ ಬಗ್ಗೆ ಅಲ್ಲಿನ ಕೋಣಾಜೆ ಠಾಣೆಗೆ ಹೋದರೆ ಪೊಲೀಸರು ರಾಕ್ಷಸರ ರೀತಿ ವರ್ತಿಸಿದ್ದಾರೆ. ಠಾಣೆಯ ಪೊಲೀಸರು ತೀರಾ ದುರ್ವರ್ತನೆ ತೋರಿದ್ದಾರೆ. ಈ ಬಗ್ಗೆ ಕೇಸು ದಾಖಲಿಸುವುದು ಬಿಟ್ಟು ಯುವತಿಗೆ ಬುದ್ಧಿವಾದ ಹೇಳಿ, ಆಕೆಯನ್ನು ಮರಳಿ ನಂಜನಗೂಡಿಗೆ ಮರಳಿ ಬಿಡಲು ಮಂಗಳೂರಿನ ಬಸ್ ನಿಲ್ದಾಣಕ್ಕೆ ತಂದು ಬಿಟ್ಟಿದ್ದಾರೆ. ಪೊಲೀಸ್ ವಾಹನದಲ್ಲಿ ಬಿಜೈ ಬಸ್ ನಿಲ್ದಾಣಕ್ಕೆ ತಂದು ಬಿಡಲು ಯತ್ನಿಸಿದ್ದಾರೆ.
ಆನಂತರ ಮಾಧ್ಯಮದವರು ಮತ್ತು ಹಿಂದು ಸಂಘಟನೆಯವರು ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ. ಪೊಲೀಸರು ಆಬಳಿಕ ಮಹಿಳಾ ಠಾಣೆಗೆ ಒಯ್ಯುವುದಾಗಿ ಹೇಳಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಬಳಿ ಕೇಳಿದರೆ, ಭಾಸ್ಕರ ಅನ್ನುವ ಒಬ್ಬ ಪೊಲೀಸನ ಹೆಸರು ಹೇಳಿದ್ದಾರೆ. ಭಾಸ್ಕರ ಈ ರೀತಿ ಮಾಡಿದ್ದಾಗಿ ಉನ್ನತ ಅಧಿಕಾರಿಯೊಬ್ಬರು ಹೇಳುತ್ತಾರೆ. ಗೃಹ ಸಚಿವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಒಳಪಡಿಸಬೇಕು. ಭಾಸ್ಕರ ಎನ್ನುವ ವ್ಯಕ್ತಿಯ ಚರಿತ್ರೆಯ ಬಗ್ಗೆ ತನಿಖೆ ನಡೆಸಬೇಕು. ಈ ವಿಚಾರದ ಬಗ್ಗೆ ಇಡೀ ಸದನ ಬೆಂಬಲವನ್ನು ನಾನು ಕೇಳುತ್ತೇನೆ. ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಸಂವೇದನಾಶೀಲ ರಹಿತ ವರ್ತನೆ ಮುಂದೆಂದೂ ಆಗಬಾರದು. ಇದೇ ಮಾದರಿಯ ಕೃತ್ಯ, ಯುವತಿಯರನ್ನು ಶೋಷಣೆ ಮಾಡುವ ಘಟನೆಗಳು ಬಹಳಷ್ಟು ನಡೆದಿದ್ದು, ಈ ಬಗ್ಗೆ ಪ್ರಬಲ ಕಾನೂನು ತರಬೇಕಾಗಿದೆ ಎಂದು ತೇಜಸ್ವಿನಿ ಗೌಡ ಒತ್ತಾಯ ಮಾಡಿದ್ದಾರೆ.
Mangalore Muslim youth cheats Mysuru girl of marriage blackmails her of nude images konaje police slammed by MLC Tejashwani Gowda in Counil session in Bangalore. Also the guy has taken almost 25 lakhs from girl yet no police action has been taken by police says MLC.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm