ಬ್ರೇಕಿಂಗ್ ನ್ಯೂಸ್
10-06-25 06:10 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 10 : ರಾಜ್ಯ ಸರ್ಕಾರವು ಮೇಲ್ಮನೆಗೆ ನಾಮನಿರ್ದೇಶನ ಮಾಡಲು ನಾಲ್ವರ ಹೆಸರನ್ನು ಅಂತಿಮಗೊಳಿಸಿದ್ದರೂ, ತೆರೆಮರೆಯಲ್ಲಿ ಇದರಲ್ಲಿ ಬದಲಾವಣೆ ಮಾಡಲು ಕಸರತ್ತು ನಡೆದಿದೆ. ಹೀಗಾಗಿ ಈ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸದೆ ಸರ್ಕಾರ ಮತ್ತು ಕೆಪಿಸಿಸಿ ಅಂಗಳದಲ್ಲಿಯೇ ಉಳಿಸಿಕೊಂಡು ಆಕಾಂಕ್ಷಿಗಳು ಎಡತಾಕಲು ಅವಕಾಶ ನೀಡಲಾಗಿದೆ.
ಮೇಲ್ಮನೆ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಹಾಕಿದ ಹೊರತಾಗಿಯೂ, ಮುಖ್ಯಮಂತ್ರಿ ಕಚೇರಿಯಲ್ಲಿಯೇ ಸಿಲುಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವು ಹೆಸರುಗಳ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಆಕ್ಷೇಪ ಇರುವುದರಿಂದ ಡಿಕೆಶಿ ಒಪ್ಪಿಗೆ ಸಿಕ್ಕದೆ ಪಟ್ಟಿ ಅಂತಿಮಗೊಂಡಿಲ್ಲ ಎನ್ನಲಾಗಿದೆ. ಜೆಡಿಎಸ್ ನಿಂದ ಕಾಂಗ್ರೆಸ್ ಬಂದಿದ್ದ ರಮೇಶ್ ಬಾಬು, ಮಾಜಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಅನಿವಾಸಿ ಭಾರತೀಯ ಘಟಕದ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಮತ್ತು ದಲಿತ ಮುಖಂಡ ಡಿ.ಜಿ. ಸಾಗರ್ ಅವರ ಹೆಸರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಪಕ್ಷ ಮತ್ತು ಸರ್ಕಾರದ ಕಡೆಯಿಂದ ಅನುಮೋದನೆ ನೀಡಲಾಗಿತ್ತು.
ಜನತಾದಳ (ಜಾತ್ಯತೀತ) ಹಿನ್ನೆಲೆ ಹೊಂದಿರುವ ರಮೇಶ್ ಬಾಬು ಅವರನ್ನು ನಾಮನಿರ್ದೇಶನ ಮಾಡಲು ಪಕ್ಷದಲ್ಲಿ ಕೆಲವು ನಾಯಕರ ಆಕ್ಷೇಪಣೆ ಇದೆ ಎಂದು ಮೂಲಗಳು ಹೇಳುತ್ತಿವೆ. ಹೀಗಾಗಿ ಪಟ್ಟಿಗೆ ಬ್ರೇಕ್ ಸಿಕ್ಕಿದೆ ಎನ್ನುವ ಮಾಹಿತಿ ಇದೆ. ಬಾಬು ಈ ಹಿಂದೆ ಜೆಡಿಎಸ್ ನಾಮನಿರ್ದೇಶನದ ಮೇಲೆ ಎಂಎಲ್ಸಿ ಆಗಿದ್ದವರು. 2020 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇವರ ಹೆಸರನ್ನು ಬದಲಾಯಿಸುವ ಬಗ್ಗೆ ಕೆಲವು ನಾಯಕರು ಒತ್ತಡ ಹಾಕಿದ್ದಾರೆ. ಈ ಹೆಸರಗಳಲ್ಲಿಯೂ ಸಿದ್ದರಾಮಯ್ಯ ಬಣ, ಡಿಕೆಶಿ ಬಣ ಎಂಬ ಗುಂಪು ಇರುವುದರಿಂದ ಈ ಬಗ್ಗೆಯೂ ಪಕ್ಷದೊಳಗೆ ಚರ್ಚೆ ನಡೆದಿದೆ.
ನಾಲ್ಕು ಸ್ಥಾನಗಳಲ್ಲಿ, ಮೂರು ಎಂಎಲ್ಸಿಗಳ ಅವಧಿ ಆರು ವರ್ಷಗಳ ವರೆಗೆ ಮತ್ತು ಉಳಿದ ಒಂದು ಸ್ಥಾನ (ಸಿಪಿ ಯೋಗೇಶ್ವರ ರಾಜೀನಾಮೆ ನೀಡಿದ ನಂತರ ಖಾಲಿಯಾಗಿದೆ) ಒಂದು ವರ್ಷದ ಅವಧಿಗೆ ಖಾಲಿ ಇದೆ. ಯಾರಿಗೆ ಯಾವುದನ್ನು ನೀಡಬೇಕೆಂಬ ಬಗ್ಗೆಯೂ ಗೊಂದಲವಿದೆ. ಒಂದು ವರ್ಷದ ಅವಧಿಯ ಎಂಎಲ್ಸಿ ಸ್ಥಾನವನ್ನು ತೆಗೆದುಕೊಳ್ಳಲು ಯಾರೂ ಸಿದ್ಧರಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿದ್ದು, ಅಂತಿಮಗೊಂಡ ಹೆಸರುಗಳನ್ನು ಬದಲಾಯಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಕೆಲವರು ತಮ್ಮ ಹೆಸರುಗಳನ್ನು ಪರಿಗಣಿಸುವಂತೆ ಸಿಎಂ ಮತ್ತು ಡಿಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಾಲ್ಕು ಸ್ಥಾನ ಭರ್ತಿಯಾದರೆ, ಕಾಂಗ್ರೆಸ್ ಪರಿಷತ್ತಿನಲ್ಲಿ ಸರಳ ಬಹುಮತ ಪಡೆಯುವ ನಿರೀಕ್ಷೆಯಿದೆ.
Four Names Finalized for MLC Nominations Including Dinesh Amin Mattu, Ramesh Babu.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am