ಬ್ರೇಕಿಂಗ್ ನ್ಯೂಸ್
12-03-25 03:51 pm HK News Desk ಕರ್ನಾಟಕ
ಶಿವಮೊಗ್ಗ, ಮಾ.12 : ನನಗೆ ಫೆ. 28 ರಂದು ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ತಡೆ ಒಡ್ಡಲಾಯಿತು. ಇಲ್ಲಿನ ಎಸ್ಪಿ ನನಗೆ ಶಿವಮೊಗ್ಗ ಬರದಂತೆ ತಡೆ ಒಡ್ಡಿದರು. ಆದರೆ ಹೈಕೋರ್ಟ್ ಅನುಮತಿ ಪಡೆದು ಬಂದಿದ್ದೇನೆ. ಲವ್ ಜಿಹಾದ್ ಜನಸಂಖ್ಯೆ ಹೆಚ್ಚಾಗಿಸುವ ಒಂದು ಭಾಗ. ಈ ಮೂಲಕ ಷಡ್ಯಂತ್ರ, ಕುತಂತ್ರ, ಜಾಲ ನಡೆಯುತ್ತಿದೆ. ಇದರಲ್ಲಿ ನಿಜವಾದ ಪ್ರೀತಿ ಇಲ್ಲ ಎಂಬುದನ್ನು ಹೇಳುವುದಕ್ಕಾಗಿ ಎಲ್ಲ ಕಡೆಯೂ ಈ ಪುಸ್ತಕ ಬಿಡುಗಡೆ ಮಾಡುತ್ತಿದ್ದೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮುಸ್ಲಿಂ ಹುಡುಗರು ತಮ್ಮ ಹೆಸರೇಕೆ ಬದಲಾವಣೆ ಮಾಡಿಕೊಂಡು ಪ್ರೀತಿ ಮಾಡ್ತಿರಾ. ಇಸ್ಲಾಮಿಗೆ ಮತಾಂತರ ಮಾಡೋದು ಇಸ್ಲಾಮೀಕರಣಕ್ಕೆ ಪುಷ್ಟಿ ನೀಡುವ ಯೋಜನೆಯಾಗಿದೆ. ಶೇ. 88 ರಷ್ಟು ಪ್ರಕರಣಗಳಲ್ಲಿ ಹೆಸರು ಬದಲಾವಣೆ ಮಾಡಿ ಪ್ರೀತಿಸಿ ವಂಚನೆ ಮಾಡಿರುವುದು ಕಂಡುಬಂದಿದೆ. ಇವೆಲ್ಲವೂ ದಾಖಲೆ ಸಹಿತ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಹೆಣ್ಣು ಮಕ್ಕಳನ್ನು ಈ ಮೂಲಕ ಶೋಷಣೆ ಮಾಡಲಾಗುತ್ತಿದೆ.
ಹಿಂದುಗಳ ನೈತಿಕತೆ ಕುಸಿಯಲು ಇಸ್ಲಾಂಗೆ ಮತಾಂತರಿಸಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳಿಗೆ ಏನು ಬೇಕಾದರೂ ಮಾಡಬಹುದೆಂದು ತಿಳಿದಿದ್ದಾರೆ. ವೇಶ್ಯಾವಾಟಿಕೆ, ಭಯೋತ್ಪಾದನೆ, ಕಳ್ಳತನಕ್ಕಾಗಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ಎಚ್ಚರಿಸುವ ಕೆಲಸ ಈ ಪುಸ್ತಕದ ಮೂಲಕ ಮಾಡಲಾಗುತ್ತಿದೆ. ಕಳೆದೆರೆಡು ವರ್ಷದಲ್ಲಿ ದೇಶದಲ್ಲಿ 13 ಲಕ್ಷ ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಹಂಪಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ಆದರೆ ಹುಬ್ಬಳ್ಳಿಯ ನೇಹಾ ಹಿರೇಮಠ್ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಮುಸಲ್ಮಾನ್ ಪರವಾಗಿ ಈ ರಾಜ್ಯ ಸರ್ಕಾರ ನಿಂತಿದೆ. ಮುಸ್ಲಿಂ ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಾತೊರೆಯುತ್ತಿದೆ. ಮುಸಲ್ಮಾನರ ಪರ ಮಾತನಾಡುತ್ತ ನಮ್ಮ ಬ್ರದರ್ಸ್ ಎನ್ನುತ್ತಿದ್ದಾರೆ. ಹೀಗಾಗಿ ಹಿಂದುಗಳಿಗೆ ಸ್ವಯಂ ರಕ್ಷಣೆಗಾಗಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಮಾಡಲಿದ್ದೇವೆ. ರಾಜ್ಯದ ನೂರು ಸ್ಥಳಗಳಲ್ಲಿ ತ್ರಿಶೂಲ್ ದೀಕ್ಷಾ ಸಮಾರಂಭ ಮಾಡುತ್ತಿದ್ದೆವೆ. ಹೆಣ್ಣುಮಕ್ಕಳಿಗೆ ಧೈರ್ಯದಿಂದ ಮಾರುಕಟ್ಟೆಯಲ್ಲಿ ಓಡಾಡಲು ತ್ರಿಶೂಲ ಕೊಡಿಸುತ್ತಿದ್ದೇವೆ. ನಮ್ಮ ಪುಸ್ತಕವನ್ನೇ ನೋಡದ ಡಿಸಿ, ಎಸ್.ಪಿ. ನನ್ನನ್ನು ಶಿವಮೊಗ್ಗಕ್ಕೆ ಬರಲು ತಡೆದರು.
ಹೀಗಾಗಿ,ನೀವು ಯಾರ ಪರವಾಗಿ ಇಲ್ಲಿ ಅಧಿಕಾರ ಮಾಡುತ್ತಿದ್ದಿರಾ ? ಯಾರ ಬಾಲ ಬಡುಕರಾಗಿ ಕೆಲಸ ಮಾಡುತ್ತಿದ್ದಿರಾ. ಅಲ್ಲಿ ಯಾರೂ ಇಲ್ಲದ ಸಮಯದಲ್ಲಿ ನನಗೆ ಪೊಲೀಸರು ಹೆದರಿಸಿಬಿಟ್ಟರು. ನಾನೇನು ರೇಪಿಸ್ಟಾ !?ದರೋಡೆಕೋರನಾ !? ಡಿಸಿ, ಎಸ್.ಪಿ. ಯವರೇ ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಇದನ್ನು ಪೊಲೀಸರು ನೆನಪಿನಲ್ಲಿಟ್ಟುಕೊಳ್ಳಬೇಕು. ನನಗೆ ತಡೆಯುವ ಉದ್ದೇಶವಾದರೂ ಏನಿತ್ತು ಎಂದು ಸಮಾಜಕ್ಕೆ ಹೇಳಬೇಕು ಎಂದು ಹೇಳಿದರು.
ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರಿಗೆ ಪ್ರೀತಿ ಮಾಡಿದರೆ ತಪ್ಪಿಲ್ಲ. ನಮ್ಮ ಹುಡುಗರು ದೇಶದ್ರೋಹ ಮಾಡಲ್ಲ. ಎಲ್ಲಿಯೂ ಆ ಹೆಣ್ಣು ಮಕ್ಕಳಿಗೆ ಸೂಟ್ ಕೇಸ್ ನಲ್ಲಿ ತುಂಬಲ್ಲ. ನಮ್ಮ ಹಿಂದೂ ಹುಡುಗರು ನಿಜವಾದ ಪ್ರೀತಿ ಮಾಡುತ್ತಾರೆ. ಹೀಗಾಗಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಸೂಲಿಬೆಲೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿದರು.
Hindu Girls at Risk, Pramod Muthalik Highlights Trafficking Concerns Amid Alarming Love jihad Marriage Statistics.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
18-04-26 11:31 pm
HK News Desk
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
18-04-26 10:37 pm
HK News Staffer
180 ಅಪ್ರಾಪ್ತ ಬಾಲಕಿಯರ 350 ಅಶ್ಲೀಲ ವಿಡಿಯೋ ವೈರಲ್...
18-04-26 03:50 pm
ಟಿಸಿಎಸ್ ಕಂಪನಿಯಲ್ಲಿ ಕಾರ್ಪೊರೇಟ್ ಜಿಹಾದ್ ; ತಲೆಮರೆ...
17-04-26 06:48 pm
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm