ಬ್ರೇಕಿಂಗ್ ನ್ಯೂಸ್
03-03-25 12:33 pm HK News Desk ಕರ್ನಾಟಕ
ಮೈಸೂರು, ಮಾ 03: "ನಟ-ನಟಿಯರು ಕನ್ನಡಿಗರಿಂದಲೇ ಕನ್ನಡ ನೆಲದಲ್ಲಿ ಸ್ಟಾರ್ ಆಗಿರುವುದು. ನಿಮಗೆ ಸಿನಿಮಾಗಳಿಗೆ ಸಬ್ಸಿಡಿ ಬೇಕು ಅಂದಾಗ, ನಮ್ಮ ಬಳಿ ಬರ್ತೀರ, ಆದ್ರೆ ಕನ್ನಡದ ನೆಲ, ಜಲ, ಭಾಷೆ ಬೇಡವೇ? ನಟ್ಟು, ಬೋಲ್ಟ್ ನಾಳೆ ಅಲ್ಲ, ಇವತ್ತೇ ಟೈಟ್ ಮಾಡ್ಬೇಕು" ಎಂದು ಡಿಕೆಶಿ ಹೇಳಿಕೆಯನ್ನ ಶಾಸಕ ಶಾಸಕ ರವಿಕುಮಾರ್ ಗಣಿಗ ಸಮರ್ಥಿಸಿಕೊಂಡರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಿ ನಟ್ ಬೋಲ್ಟ್ ಟೈಟ್ ಮಾಡಿ ರಿಪೇರಿ ಮಾಡಬೇಕೋ ಮಾಡುತ್ತೇವೆ ಎಂಬ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ ಮಾಡಿರುವ ರೀತಿಯಲ್ಲೇ ನಾವೂ ಮಾಡಬೇಕು. ಕನ್ನಡದ ಕಾರ್ಯಕ್ರಮ ಎಂದರೆ ಕನ್ನಡದ ನಟರಿಗೆ ಏಕೆ ಅಸಡ್ಡೆ?. ವಿಧಾನಸೌಧದ ಮುಂದೆ ನಿಮಗಾಗಿ ಕಾರ್ಯಕ್ರಮ ಮಾಡಿದ್ದೇವೆ. ಮರ್ಯಾದೆಯಿಂದ ಆಹ್ವಾನ ಕಳುಹಿಸಿದ್ದರೆ ಏಕೆ ಬರುವುದಿಲ್ಲ?. ಕ್ಯಾನ್ಸರ್ ಕಾಯಿಲೆಗೆ ಶಸ್ತ್ರಚಿಕಿತ್ಸೆ ಆಗಿದ್ದರೂ ಶಿವರಾಜ್ ಕುಮಾರ್ ಬಂದಿದ್ದಾರೆ. ಇನ್ನುಳಿದವರಿಗೆ ಏನಾಗಿದೆ. ನಮ್ಮ ಸರ್ಕಾರ ಪ್ರಶಸ್ತಿ ಕೊಟ್ಟರೆ ಬೇಡ ಎನ್ನುತ್ತೀರಿ. ಅದೇ ಬಾಲಿವುಡ್ನವರು ಪ್ರಶಸ್ತಿ ಕೊಟ್ಟರೆ ಓಡಿ ಹೋಗಿ ತಗೆದುಕೊಳ್ಳುತ್ತೀರಿ" ಎಂದು ಕಿಡಿಕಾರಿದರು.
ಡಾ.ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರೆಲ್ಲ ರಾಜ್ಯೋತ್ಸವಕ್ಕೂ ಬರುತ್ತಿದ್ದರು. ಅಭಿಮಾನಿಗಳು ಅವರನ್ನು ಹೊತ್ತು ಮೆರೆಸಿದ್ದಕ್ಕೆ ಅವರು ಸ್ಟಾರ್ಗಳಾಗಿದ್ದು. ಈಗಿನ ನಟರಲ್ಲಿ ದರ್ಶನ್ ಹೊರತುಪಡಿಸಿ ಎಷ್ಟು ಜನ ರಾಜ್ಯೋತ್ಸವ ಸಮಾರಂಭಕ್ಕೆ ಬರುತ್ತಾರೆ?. ಇದೆಲ್ಲವನ್ನೂ ನಾವು ಪ್ರಶ್ನೆ ಮಾಡಬಾರದೇ?. ಕಾರ್ಯಕ್ರಮಕ್ಕೆ ಬರುವುದು ನಿಮ್ಮ ವಿವೇಚನೆಯಾದರೆ. ನಿಮ್ಮ ಸಿನಿಮಾ ನೋಡಬೇಕೇ ಬೇಡವೇ ಅನ್ನುವುದು ನಮ್ಮ ವಿವೇಚನೆ ಎಂದು ಶಾಸಕ ಗಣಿಕ ಎಚ್ಚರಿಕೆ ರವಾನಿಸಿದರು.
Mysuru Mla Ravi Kumar ganiga supports DK remarks on Kannada film industry. ‘I Know Where to Tighten the Nuts and Bolts’: DK Shivakumar Explodes Over Low Celebrity Turnout at Film Festival
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am