ಬ್ರೇಕಿಂಗ್ ನ್ಯೂಸ್
20-04-24 02:30 pm HK News Desk ಕರ್ನಾಟಕ
ಹುಬ್ಬಳ್ಳಿ, ಏ 20: ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ನೇಹಾಳ ತಂದೆ - ತಾಯಿಗೂ ನಾನು ಕ್ಷಮೆ ಕೇಳುತ್ತೇನೆ. ನೇಹಾ ಕೂಡ ನನ್ನ ಮಗಳು ಇದ್ದಂಗೆ, ನನ್ನ ಮಗ ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಫಯಾಜ್ ತಾಯಿ ಮುಮ್ತಾಜ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೇಹಾಳ ತಂದೆ-ತಾಯಿಗೆ ಆಗಿರುವಷ್ಟೇ ದುಃಖ ನನಗೂ ಆಗಿದೆ. ಯಾರು ಮಾಡಿದ್ರೂ ತಪ್ಪೇ ತಪ್ಪು, ನನ್ನ ಮಗ ಮಾಡಿರೋದು ತಪ್ಪೇ. ಈ ನೆಲದ ಕಾನೂನು ಏನು ಶಿಕ್ಷೆ ಕೊಡುತ್ತೋ ಅದನ್ನು ಕೊಡಬೇಕು. ನಾನು ನೂರಾರು ಮಕ್ಕಳಿಗೆ ತಪ್ಪು ಮಾಡಿದ್ರೆ ಶಿಕ್ಷೆ ಕೊಡ್ತೀನಿ, ಅದೇ ರೀತಿ ಅವನಿಗೂ ಶಿಕ್ಷೆಯಾಗಬೇಕು. ಅವನು ಮಾಡಿರೋ ಕೆಲಸದಿಂದ ನಾನು ಎಲ್ಲರ ಮುಂದೆ ತಲೆ ತಗ್ಗಿಸುವ ರೀತಿ ಆಗಿದೆ. ನಾನು ಇಡೀ ರಾಜ್ಯದ ಜನತೆಗೆ ಕ್ಷಮೆ ಕೇಳ್ತೀನಿ ಎಂದು ಹೇಳಿದರು.
ನನ್ನ ಮಗ ಹಾಗೂ ನೇಹಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನನಗೆ ಒಂದು ವರ್ಷದ ಹಿಂದೆಯೇ ಈ ವಿಷಯ ಗೊತ್ತಾಗಿತ್ತು. ಫಯಾಜ್ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಬ್ಲೂ ಆದಾಗ ನೇಹಾ ಪರಿಚಯ ಆಗಿ, ಅದು ಪ್ರೀತಿಗೆ ತಿರುಗಿತ್ತು. ಅದನ್ನು ನನಗೆ ಹೇಳಿದ್ದ. ಆಗ ನಾನು ಈ ಪ್ರೀತಿ, ಗೀತಿ ಬೇಡ ಎಂದು ಹೇಳಿದ್ದೆ. ಆದರೆ, ಈ ರೀತಿ ಆಯ್ತು ಎಂದು ತಿಳಿಸಿದರು.
ಫಯಾಜ್ ಬುದ್ಧಿವಂತ ಹುಡುಗ ಇದ್ದ, ಅವನನ್ನು ಐಎಎಸ್ ಆಫೀಸರ್ ಮಾಡ್ಬೇಕು ಅನ್ಕೊಂಡಿದ್ದೆ. ಆದರೆ, ಈ ಪ್ರೀತಿಯಲ್ಲಿ ಬಿದ್ದು ಜೀವನವನ್ನು ಹಾಳು ಮಾಡಿಕೊಂಡ ಎಂದ ಅವರು, ನೇಹಾಳೇ ಫಯಾಜ್ಗೆ ಮೊದಲು ಪ್ರಪೋಸ್ ಮಾಡಿದ್ದಳು. ಅವರಿಬ್ಬರ ನಡುವೆ ಪ್ರೀತಿ ಇತ್ತು, ಅದು ಒನ್ ಸೈಡ್ ಲವ್ ಅಲ್ಲ, ಇಬ್ಬರ ಕಡೆಯಿಂದಲೂ ಪ್ರೀತಿ ಇತ್ತು. ಆ ಹುಡುಗಿನೂ ಒಳ್ಳೆ ಹುಡುಗಿ, ಇಬ್ಬರು ಕೂಡ ಮದುವೆ ಆಗ್ತೀವಿ ಅಂದಿದ್ರು ಎಂದು ಹೇಳಿದರು.
Hubballi Murder, Neha was the one who proposed my son says accused son Fayaz mother Mamtaz. Speaking to mediapersons in Dharwad on April 20, Fayaz’s mother, Mamtaz, a teacher, has demanded strict punishment as per the law of the land. She was deeply shocked by the developments that had led to Neha’s murder. “It is great injustice to Neha and her family..
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
10-09-25 11:02 am
Mangalore Correspondent
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm