ಬ್ರೇಕಿಂಗ್ ನ್ಯೂಸ್
19-04-24 07:58 pm HK News Desk ಕರ್ನಾಟಕ
ಹುಬ್ಬಳ್ಳಿ , ಏ.19: ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈಗಾಗಲೇ ನೇಹಾ ಸಾವಿಗೆ ನ್ಯಾಯ ಬೇಕು, ನಾಡಿನ ಮಕ್ಕಳಿಗೆ ರಕ್ಷಣೆ ಬೇಕು ಅಂತ ಹೋರಾಟ ಮಾಡಲಾಗುತ್ತಿದೆ. ಈಗ ನಟಿ ಪ್ರಿಯಾ ಸವದಿ ಅವರು ಈ ಬಗ್ಗೆ ಮಾಧ್ಯಮದ ಜೊತೆ ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ.
ಪ್ರತಿಷ್ಠಿತ ಬಿವಿಬಿ ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ನೇಹಾ ಹಿರೇಮಠ ಹೊರಗಡೆ ಬರುತ್ತಿದ್ದಂತೆ ಅವರಿಗೆ ಚಾಕುವಿನಿಂದ 9 ಸಲ ಚುಚ್ಚಿ ಕೊಲೆ ಮಾಡಲಾಗಿದೆ. ಈ ಬಗ್ಗೆ ನಟಿ ಪ್ರಿಯಾ ಸವದಿ ದುಃಖ ಹೊರಹಾಕಿದ್ದಾರೆ. ನೇಹಾ ಎಂಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದರು.
ಕೊಲೆ ಮಾಡಿದವನಿಗೆ ಯಾರು ಶಿಕ್ಷೆ ಕೊಡ್ತಾರೆ? ಜೈಲಿಗೆ ಹೋಗಿ 10-15 ವರ್ಷಕ್ಕೆ ಅವನು ಹೊರಗಡೆ ಬರುತ್ತಾನೆ? ಅವನಿಗೆ ಮನೆಯಲ್ಲಿ ಯಾರೂ ಇಲ್ಲವಾ? ಮುಸ್ಲಿಂ ಹೆಣ್ಣು ಮಕ್ಕಳನ್ನು ಬೀದಿಗೆ ಬಿಡ್ತಾರಾ? ಅವರಿಗೆ ಚೆನ್ನಾಗಿರೋ ಹುಡುಗೀರು ಬೇಕು. ಅವರ ಮನೆ ಹೆಣ್ಣು ಮಕ್ಕಳನ್ನು ಮುಚ್ಚಿಟ್ಟು, ನಮ್ಮ ಹತ್ತಿರ ಬರ್ತಾರೆ. ಈಗ ಎಲ್ಲರೂ ಬಂದು ನೇಹಾ ಮನೆಗೆ ಸಾಂತ್ವನ ಹೇಳ್ತಾರೆ, ಆದರೆ ನೇಹಾ ಬರುತ್ತಾಳಾ? ಅವನಿಗೆ ಧಮ್ ಇದ್ದಿದ್ರೆ ನೇಹಾ ಮನೆಗೆ ಹೋಗಿ ಮದುವೆ ಮಾಡಿಕೊಡಿ ಅಂತ ಕೇಳಬೇಕಿತ್ತು” ಎಂದು ನಟಿ ಪ್ರಿಯಾ ಸವದಿ ಆಕ್ರೋಶ ಹೊರಹಾಕಿದ್ದಾರೆ.
ಆಕೆ ನನಗೆ ಸಂಬಂಧನೇ ಆಗಬೇಕಂದಿಲ್ಲ. ಇಲ್ಲಿ ಎಲ್ಲಾರೂ ನಮಗೆ ಅಕ್ಕಾ ತಂಗಿಯರೇ. ನನ್ನ ಅಕ್ಕ-ತಂಗಿನೇ ಬೇಕಾಗಿತ್ತಾ ಇವನಿಗೆ. ಅವಳು ನಮಗೆ ಏನೂ ಆಗಬೇಕಂದಿಲ್ಲ. ಇಲ್ಲಿ ಬಂದಿರುವ ಪ್ರತಿಯೊಬ್ಬರಿಗೂ ಆಕೆ ತಂಗಿ, ಅಕ್ಕ, ಮಗಳೇ.. ಆ ಆರೋಪಿಯನ್ನು ನಮಗೆ ಕೈಗೆ ಕೊಡಿ. ಅವನಿಗೆ ಶಿಕ್ಷೆ ಯಾರು ಕೊಡುತ್ತಾರೆ. ಹತ್ತು, ಇಪ್ಪತ್ತು ವರ್ಷ ಅವನಿಗೆ ಶಿಕ್ಷೆ ಕೊಡಬಹುದು. ಆದರೆ ಆಕೆಗೆ ಜೀವ ಕೊಡಲಾಗುತ್ತದೆಯೇ..? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದವರು ಐದು, ಹತ್ತು ವರ್ಷ ಇರುತ್ತಾರೆ ಹೋಗುತ್ತಾರೆ. ಅವರಿಗೆ ಇದರ ನೆನಪು ಸಹ ಇರುವುದಿಲ್ಲ. ಎಲ್ಲಾ ಮುಚ್ಚಿ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಈಕೆ ಒಬ್ಬಳಿಗೋಸ್ಕರ ಇಷ್ಟೊಂದು ಜನ ಸೇರಿದ್ದೇವೆ. ನಾಳೆ ನನಗೂ ಈ ರೀತಿ ಆಗಬಹುದು, ಇವರಿಗೂ ಆಗಬಹುದು, ಎಷ್ಟು ಮಂದಿಗೋಸ್ಕರ ನಾವು ಅಳುತ್ತ ಕೂರುವುದು. ಎಷ್ಟು ಮಂದಿಗಂತ ಅಳಬೇಕು. ನಾವು ಹೀಗೆ ಅಳುತ್ತಾ ಕುಳಿತರೆ ನಮಗೆಲ್ಲಿದೆ ರಕ್ಷಣೆ. ಬುರ್ಖಾ ಹಾಕಿಕೊಂಡು ತಿರುಗಾಬೇಕು ನಾವು? ಎಂದು ಕಠಿಣವಾಗಿ ಪ್ರಶ್ನಿಸಿದ್ದಾರೆ.
Hubballi Neha Murder | ನಮ್ ಅಕ್ಕನೇ ಬೇಕಾಗಿತ್ತಾ ಇವ್ರಿಗೆ...
— PublicTV (@publictvnews) April 19, 2024
Artist Priya Savadi Expresses Ire Against #Hubballi Case Accused #Fayaz #NehaHiremath #Police #Karnataka pic.twitter.com/UXY9Z29SNt
Actress Priya Savadi removes frustration over murder of Neha in Hubballi. Says I will cut him into pieces surender him into my hands. They are closing thier muslim girls and coming to Hindu girls for love she added.
06-04-25 11:56 am
Bangalore Correspondent
Suicide, Chamarajanagar: ಮಾನಸಿಕ ಖಿನ್ನತೆ ; 14...
05-04-25 10:17 pm
HD Kumaraswamy, Congress, D K Shivakumar: ಮಹಮ...
05-04-25 09:43 pm
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಕಾಂ...
05-04-25 08:12 pm
BJP Yatnal; ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗ...
05-04-25 02:47 pm
06-04-25 09:23 pm
HK News Desk
Waqf land in India: ದೇಶದಲ್ಲಿ ಒಟ್ಟು ಎಷ್ಟು ವಕ್ಫ...
06-04-25 06:39 pm
Annamalai, Bjp: ತಮಿಳಿನಾಡಿನಲ್ಲಿ ಅಣ್ಣಾಮಲೈ ಇಳಿಸಲ...
04-04-25 09:29 pm
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
07-04-25 03:03 pm
Mangalore Correspondent
Kundapura Fire accident, Death: ಕುಂದಾಪುರ ; ಗದ...
05-04-25 07:49 pm
Mangalore Jail, Jammer, Vedavyas Kamath; ಜೈಲಿ...
05-04-25 01:16 pm
Mangalore, Thokkottu: ತೊಕ್ಕೊಟ್ಟು ಫ್ಲೈಓವರ್ ಕೆಳ...
04-04-25 11:07 pm
Mangalore Hotel Moti Mahal closed, Milagres:...
04-04-25 11:00 pm
07-04-25 11:23 am
Mangalore Correspondent
Mangalore news, Crime, Youth thrashed Kanyara...
06-04-25 03:32 pm
Bangalore Murder, Crime: ಅಕ್ರಮ ಸಂಬಂಧ ಶಂಕೆ ; ನ...
05-04-25 08:53 pm
Cyber Fraud Bangalore, Plusmarts; ಫೇಸ್ಬುಕ್ ಮಹ...
05-04-25 04:27 pm
Anwar Manippady threat, Mangalore crime: ವಕ್ಪ...
04-04-25 03:03 pm