ಬ್ರೇಕಿಂಗ್ ನ್ಯೂಸ್
15-04-24 06:47 pm HK News Desk ಕರ್ನಾಟಕ
ಬೆಳಗಾವಿ, ಏ.15: ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ. ನನ್ನ ಆಸ್ತಿ ಬಗ್ಗೆ ಮಾತಾಡ್ತೀಯಾ? ನಿಂದು ಎಷ್ಟಿತ್ತು, ನಿಮ್ಮ ಅಣ್ಣಂದು ಎಷ್ಟಿತ್ತು, ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ. ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಎಚ್ಡಿ ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಮಕ್ಳೆಲ್ಲಾ ತಿರುಗಿ ಬಿದ್ದಮೇಲೆ ಎಚ್ಡಿ ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ. ನನ್ನ ಮೇಲೂ ಹರಿಹಾಯ್ದಿದ್ದಾರೆ, ಇರಲಿ ಅವರಿಗೂ ನನಗೂ ಇದ್ದಿದ್ದೆ. ನಾನು ಅವರಿಗೆ ಈ ಹಿಂದೆನೆ ಹೇಳಿದ್ದೇನೆ, ನೀನು ಹೇಗಿದ್ರು ಎಂಪಿಯಾಗಿ ಹೋಗೋದಿಲ್ಲ, ಅದು ಬೇರೆ ಮಾತು ಬಿಡಿ. ಈ ಹಿಂದೆಯೇ ನನ್ನ ಬಗ್ಗೆ ಚರ್ಚೆ ಮಾಡೋಕೆ ಟಿವಿಗೆ ಕರೀರಿ ಬರ್ತಿನಿ, ಇಲ್ಲ ವಿಧಾನಸಭೆಯಲ್ಲೇ ಮಾತಾಡೋಣ ಎಂದಿದ್ದೆ. ಯಾಕಂದ್ರೆ ಆಸ್ತಿ ಬಗ್ಗೆ ಮಾತನಾಡುವಾಗ ದಾಖಲೆ ಇರಬೇಕಲ್ಲ ಎಂದರು.
ನಾನ್ಯಾವುದೋ ಹೆಣ್ಮಗಳನ್ನು ಕರ್ಕೊಂಡು ಹೋಗಿ ಆಸ್ತಿ ಬರೆಸಿಕೊಂಡಿದ್ದೇನೆ ಅಂತೆ. ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ. ಹೆದರಿಕೊಂಡು ನಿನ್ನ ಕ್ಷೇತ್ರ ಬಿಟ್ಟು, ಪಕ್ಕದ ಕ್ಷೇತ್ರಕ್ಕೆ ಹೋಗಿದೀಯಾ ಹೋಗು. ನಿಂಗೆ ಹೋಗೋಕೆ ಹಕ್ಕಿದೆ, ಹೋಗಿದೀಯಾ. ಇದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಬನ್ನಿ. ಯಾಕೆಂದ್ರೆ ನಮ್ಮ ಜನರೇಷನ್ ನೀನೆಂಥ ಸುಳ್ಳುಗಾರ, ನೀನೆಂಥ ಮೋಸಗಾರ ಎಂಬುದನ್ನು ನೋಡಬೇಕು. ನಿಂದು ಎಷ್ಟಿತ್ತು, ನಿಮ್ಮ ಅಣ್ಣಂದು ಎಷ್ಟಿತ್ತು, ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ. ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಬಹಿರಂಗ ಸವಾಲು ಹಾಕಿದ ಅವರು, ನಾನು ಕಲ್ಲು ಮಾರಿದ್ನೋ, ಕಳ್ಳತನ ಮಾಡಿದ್ನೋ ಎಂಬುದು ಅಸೆಂಬ್ಲಿಯಲ್ಲೇ ತೀರ್ಮಾನ ಆಗಲಿ ಎಂದು ಹೇಳಿದರು.
ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಉಚಿತ ಬಸ್ ಹಾಗೂ 2 ಸಾವಿರ ರೂ. ಕೊಡುತ್ತಿದ್ದೇವೆ. ಅದನ್ನು ನೀನು ಹೋಗಿ ಹೆಣ್ಮಕ್ಳು ದಾರಿ ತಪ್ತಿದ್ದಾರೆ ಅಂದ್ರೇ ಏನರ್ಥ. ನಮ್ಮ ಹೆಣ್ಮಕ್ಳೇನು ದಡ್ಡರು ಅನ್ಕೊಂಡಿದೀರಾ ಎಂದು ಪ್ರಶ್ನಿಸಿದರು.
DK Shivakumar slams Kumaraswamy says he wont win, we will discuss how much money you and your brother did, lets discuss that in the assembly he added.
11-04-25 11:10 pm
Bangalore Correspondent
Sameer MD, Vidoe Deleted, Dharmasthala: ಸೌಜನ್...
11-04-25 10:27 pm
Bangalore High court, Birthday, suspend: ಬೆಂಗ...
11-04-25 03:45 pm
Yatnal, Muslim, Prophet Muhammad Paigambar: ಪ...
11-04-25 03:28 pm
G Category Land, Nalin Kateel: ನಳಿನ್ ಕುಮಾರ್ ಗ...
10-04-25 04:40 pm
10-04-25 09:10 pm
HK News Desk
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
11-04-25 02:49 pm
Mangalore Correspondent
Mangalore, Kolya, accident: ತೆಂಗಿನ ಮರದಿಂದ ಕೆಳ...
11-04-25 10:35 am
Mangalore Airport, MP Brijesh Chowta: ಮಂಗಳೂರು...
10-04-25 10:41 pm
Mangalore, Netravati Bridge Repair, Traffic b...
10-04-25 09:48 pm
Mangalore Accident, Padil: ಪಡೀಲ್ ; ಚಾಲಕನ ನಿಯಂ...
09-04-25 10:57 pm
11-04-25 04:38 pm
Bangalore Correspondent
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am
Davanagere, Alcohol, Murder: ದಾವಣಗೆರೆ ; ಮದ್ಯ...
10-04-25 08:41 pm
Puttur crime, Sword, Mangalore: ಪುತ್ತೂರಿನಲ್ಲಿ...
10-04-25 02:57 pm