ಬ್ರೇಕಿಂಗ್ ನ್ಯೂಸ್
30-11-20 12:47 pm Headline Karnataka News Network ಕರ್ನಾಟಕ
ಕಾರವಾರ, ನ.30 : ಸದ್ಯಕ್ಕೆ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಸಾಧ್ಯವಿಲ್ಲ. ಯಡಿಯೂರಪ್ಪನವರನ್ನ ತೆಗೆದರೆ ಸರ್ಕಾರವೇ ಇರುವುದಿಲ್ಲ... ಹೀಗೆಂದು ಹೇಳಿದ್ದು ಜೆಡಿಎಸ್ ಹಿರಿಯ ಮುಖಂಡ, ಎಂಎಲ್ಸಿ ಬಸವರಾಜ ಹೊರಟ್ಟಿ.
ಕಾರವಾರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದರು.. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಂದ್ರೆ ಜೇನುಗೂಡಿಗೆ ಕೈಇಟ್ಟಂತೆ. ಅದನ್ನು ಮಾಡಲು ಹೋಗುತ್ತಾರೆಯೇ ? ಅಪಾಯ ಮೈಮೇಲೆಳೆದುಕೊಳ್ಳಲು ತಯಾರಿದ್ದಾರೆಯೇ ಎಂದು ಮರು ಪ್ರಶ್ನೆ ಹಾಕಿದರು.
ಸಿಎಂ ಬದಲಾವಣೆಗೆ ಸ್ವಾಮೀಜಿಗಳ ಒತ್ತಡ ಹಾಕಿದ್ದಾರಂತೆ ಎಂಬ ಪ್ರಶ್ನೆಗೆ, ಈ ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು ? ರಾಜಕೀಯ ಬೇಕೆಂದರೆ ನಮ್ಮಂತೆ ಸಕ್ರಿಯ ರಾಜಕಾರಣಕ್ಕೇ ಬರಲಿ. ಹಿಂದೆ ನಿಂತು ಗುಂಡು ತೂರುವುದು ಸರಿಯಲ್ಲ. ಸ್ವಾಮೀಜಿಗಳು ಮಾಡುತ್ತಿರುವುದು ಎಳ್ಳಷ್ಟೂ ಸರಿಯಿಲ್ಲ. ಇವರೇ ಜಾತಿ ರಾಜಕಾರಣ ಹಬ್ಬಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಲಿಂಗಾಯತ ಪರ ಹೋರಾಟ ಮಾಡಿ ಎಂದಿದ್ದರು. ಈಗ ಪಂಚಮಸಾಲಿ ಎನ್ನುತ್ತಿದ್ದಾರೆ, ಸ್ವಾಮೀಜಿಗಳು ಮಠದಲ್ಲಿ ಕುಳಿತು ಜನರಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡಲಿ. ಇನ್ನೂ ಕೆಲವು ದಿನ ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ. ಯಡಿಯೂರಪ್ಪನವರನ್ನ ತೆಗೆದರೆ ಸರ್ಕಾರವೇ ಇರುವುದಿಲ್ಲ.
ಅವರನ್ನು ಬದಲಾಯಿಸುವುದು ಜೇನುಗೂಡಿಗೆ ಕೈಇಟ್ಟಂತೆ ಎಂದು ಹೇಳುವ ಮೂಲಕ ಹೊರಟ್ಟಿ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ, ಸಿಎಂ ಬದಲಿಸಬೇಕೆಂದು ವದಂತಿ ಹಬ್ಬಿಸುತ್ತಿರುವ ವಿಚಾರದಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದ್ರು.
If we eliminate B.S Yediyurappa from the seat there won't be BJP government in Karnataka slammed MLC Basavaraj Horatti in Karwar
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
20-06-25 10:19 pm
HK News Desk
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
20-06-25 11:04 pm
Mangalore Correspondent
Mangalore Forest Guard, Someshwara Beach, U T...
20-06-25 09:54 pm
Tulu, Panchayat, Mangalore, Taranath Gatti K...
20-06-25 09:02 pm
Jeppinamogaru, Accident, Mangalore: ಕುಡಿದ ನಶೆ...
20-06-25 07:10 pm
Chakravarthy Sulibele: ಕುಂದಾಪುರದಲ್ಲಿ ಅಖಂಡ ಭಾರ...
20-06-25 03:54 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm