ಬ್ರೇಕಿಂಗ್ ನ್ಯೂಸ್
19-03-24 12:09 pm HK News Desk ಕರ್ನಾಟಕ
ಹುಬ್ಬಳ್ಳಿ , ಮಾ 18: ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇತ್ತೀಚೆಗೆ ಪ್ರಬಲ ಮೋದಿ ಟೀಕಾಕಾರನಾಗಿ ಬದಲಾಗಿದ್ದಾರೆ. ತುಂಬ ಅಧ್ಯಯನ ಮಾಡಿ, ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚರ್ಚೆಗಳಲ್ಲಿ, ಸಭೆಗಳಲ್ಲಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಹಾಗಿದ್ದರೆ ಸಂತೋಷ್ ಲಾಡ್ ಒಮ್ಮಿಂದೊಮ್ಮೆಗೆ ಹೀಗೆ ಪ್ರಖರ ಟೀಕಾಕಾರನಾಗಿ ಬದಲಾಗಿದ್ದು ಹೇಗೆ? ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸ್ಪಷ್ಟ ಉತ್ತರ ಸಿಕ್ಕಿದೆಯಂತೆ !
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ್ ಜೋಶಿ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಂತೋಷ್ ಲಾಡ್ ಬೈಗುಳದ ರಹಸ್ಯ ತೆರೆದಿಟ್ಟಿದ್ದಾರೆ.
ಸಂತೋಷ್ ಲಾಡ್ ಅವರು ಇತ್ತೀಚೆಗೆ ನನ್ನನ್ನು ಮತ್ತು ಮೋದಿಯವರನ್ನು ನಿರಂತರವಾಗಿ ಬಯ್ಯುತ್ತಿದ್ದಾರೆ, ಟೀಕೆ ಮಾಡುತ್ತಿದ್ದಾರೆ. ಅವರು ಈ ರೀತಿಯ ಟೀಕೆ ಮಾಡುತ್ತಿರುವುದು ತಮ್ಮ ಸಚಿವ ಪದವಿ ಉಳಿಸಿಕೊಳ್ಳಲು. ಇದನ್ನು ಸ್ವತಃ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಜೋಶಿ ಹೇಳಿದರು.
ನಾನು ಮತ್ತು ಲಾಡ್ ಆಗಾಗ ಫ್ಲೈಟ್ನಲ್ಲಿ ಸಿಗ್ತಾ ಇರುತ್ತೇವೆ. ದಿಲ್ಲಿಯಿಂದ ಬರುವಾಗ, ಬೆಂಗಳೂರಿನಿಂದ ಬರುವಾಗ ಸಿಗುತ್ತೇವೆ. ಮಾತಾಡಿಕೊಳ್ತೇವೆ. ಒಂದು ದಿನ ನಾನು ಕೇಳಿದೆ. ನೀವು ನನ್ನ ಮೇಲೆ ನಿರಂತರವಾಗಿ ಟೀಕೆ ಮಾಡ್ತಾ ಇರ್ತೀರಿ. ಅದೇನೂ ತೊಂದರೆ ಇಲ್ಲ. ನಾನು ಸಣ್ಣವನು. ಆದರೆ, ಮೋದಿ ಅವರ ಮೇಲೂ ದಾಳಿ ಮಾಡ್ತೀರಲ್ಲಾ, ನಿಮ್ಮ ಪರಿಸ್ಥಿತಿ ಏನು? ಎಂದು ಕೇಳಿದೆ.
ನಾನು ಮತ್ತು ಸಂತೋಷ್ ಲಾಡ್ ಹಿಂದಿಯಲ್ಲಿ ಮಾತಾಡೋದು ಜಾಸ್ತಿ. ಅವರು ಹಿಂದಿಯಲ್ಲಿ ಹೇಳಿದರು: ಕ್ಯಾ ಕರೂ ಸಾಬ್, ಊಪರ್ ಸೇ ಇನ್ಸ್ಟ್ರಕ್ಷನ್ ಹೈ, ಮೈ ಡೈಲಿ ಗಾಲಿ ನಹೀ ದಿಯಾ ತೋ ನೌಕರಿ ಚಲೀ ಜಾತೀ ಹೈ! (ಏನು ಮಾಡಲಿ ಸಾಹೇಬ್ರೆ.. ಮೇಲಿನಿಂದ ನನಗೆ ಸೂಚನೆ ಇದೆ. ದಿನಾ ಬಯ್ಯದೆ ಹೋದರೆ ನನ್ನ ಕೆಲಸವೇ ಹೋಗಿ ಬಿಡ್ತದೆ) ಎಂದು ಹೇಳಿದೆ.
ಆಗಿಂದ ನಾನು ತಲೆ ಕೆಡಿಸಿಕೊಂಡಿಲ್ಲ, ನೀವು ತಲೆ ಕೆಡಿಸಿಕೊಳ್ಳಬೇಡಿ. ಉತ್ತರ ಕೊಡುವಾಗ ಕೊಡ್ತೀನಿ ಎಂದು ಜೋಶಿಯವರು ಸಭೆಯಲ್ಲಿ ಹೇಳುವ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.
Santosh lad says no option need to shout at Modi always have instructions, Pralhad Joshi reveals flight conversation.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
18-01-26 11:47 am
HK News Desk
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm