ಬ್ರೇಕಿಂಗ್ ನ್ಯೂಸ್
27-02-24 01:14 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.27: ಕರ್ನಾಟಕ ಸಿವಿಲ್ ಜಡ್ಜ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ರಾಜ್ಯದ ವಿವಿಧೆಡೆಯ 33 ಮಂದಿ ಜಡ್ಜ್ ಹುದ್ದೆಗೆ ನೇಮಕ ಆಗಿರುವ ಬಗ್ಗೆ ಫೆ.23ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆ ಪೈಕಿ ಮಂಗಳೂರಿನ ಅನಿಲ್ ಜಾನ್ ಸಿಕ್ವೇರಾ 25ರ ಹರೆಯದಲ್ಲಿ ಜಡ್ಜ್ ಹುದ್ದೆಗೇರಿದ ಕರ್ನಾಟಕದ ಅತಿ ಕಿರಿಯ ವ್ಯಕ್ತಿಯೆಂದು ಹೆಗ್ಗಳಿಕೆ ತೋರಲಾಗಿತ್ತು. ಆದರೆ, ಅದೇ ಪಟ್ಟಿಯಲ್ಲಿರುವ ಬೆಂಗಳೂರಿನ ನಮ್ರತಾ ಎಸ್. ಹೊಸ್ಮಠ್ ಎಂಬ ಯುವತಿ 24 ವರ್ಷದಲ್ಲೇ ಜಡ್ಜ್ ಪರೀಕ್ಷೆ ಪಾಸ್ ಮಾಡಿದ್ದು, ರಾಜ್ಯದ ಅತಿ ಕಿರಿಯ ಜಡ್ಜ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.
ಶ್ರೀರಾಮಪುರದ ನಿವಾಸಿ ವಕೀಲ ಸ್ವಾಮಿ ಶಿವಪ್ರಕಾಶ್ ಅವರ ಪುತ್ರಿಯಾಗಿರುವ ನಮ್ರತಾ ಅವರು ಮಲ್ಲೇಶ್ವರಂನಲ್ಲಿ ವಿದ್ಯಾಮಂದಿರ ಎಜುಕೇಶನ್ ಸೊಸೈಟಿಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪೂರೈಸಿದ್ದರು. ಪಿಯುಸಿಯಲ್ಲಿ ಸೈನ್ಸ್ ಓದಿದ್ದ ಅವರು, ಬಳಿಕ ಬೆಂಗಳೂರು ಯುನಿವರ್ಸಿಟಿಯ ಕಾನೂನು ಕಾಲೇಜಿನಲ್ಲಿ 2022ನೇ ವರ್ಷದಲ್ಲಿ ಬಿಎ –ಎಲ್ಎಲ್ ಬಿ ಪೂರೈಸಿದ್ದರು. ಸದ್ಯ ಕರ್ನಾಟಕ ಹೈಕೋರ್ಟಿನಲ್ಲಿ ಜಡ್ಜ್ ಡಾ.ಪ್ರಭಾಕರ ಶಾಸ್ತ್ರೀ ಅವರಲ್ಲಿ ಲಾ ಕ್ಲರ್ಕ್ ಮತ್ತು ರೀಸರ್ಚ್ ಅಸಿಸ್ಟೆಂಟ್ ಆಗಿದ್ದಾರೆ. 24 ವರ್ಷ ಎಂಟು ತಿಂಗಳ ಹರೆಯದಲ್ಲಿರುವ ನಮ್ರತಾ ತನ್ನ ಮೊದಲ ಪ್ರಯತ್ನದಲ್ಲಿಯೇ ಜಡ್ಜ್ ಹುದ್ದೆಯ ಪರೀಕ್ಷೆಯನ್ನು ಪಾಸ್ ಮಾಡಿದ್ದು ಅತಿ ಕಿರಿಯ ಜಡ್ಜ್ ಎಂಬ ಶ್ರೇಯಸ್ಸು ತನಗೆ ಸೇರಬೇಕೆಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಅನಿಲ್ ಜಾನ್ ಸಿಕ್ವೇರಾ 25 ವರ್ಷ ಪೂರೈಸಿದ್ದು, ಜಡ್ಜ್ ಹುದ್ದೆಗೇರಿದ ರಾಜ್ಯದ ಅತಿ ಕಿರಿಯ ವ್ಯಕ್ತಿಯೆಂದು ಈ ಮೊದಲು ಹೇಳಲಾಗಿತ್ತು. ನಮ್ರತಾ ಮತ್ತು ಅನಿಲ್ ಸಿಕ್ವೇರಾ ಅವರು ಬೆಂಗಳೂರಿನಲ್ಲಿ ಒಂದೇ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಅನಿಲ್ ಸಿಕ್ವೇರಾ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿದ್ದರೆ, ನಮ್ರತಾ ಮೊದಲ ಪ್ರಯತ್ನದಲ್ಲಿಯೇ ಸಾಧನೆ ಮಾಡಿದ್ದಲ್ಲದೆ, ರಾಜ್ಯದ ಅತಿ ಕಿರಿಯ ಮಹಿಳಾ ಜಡ್ಜ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
2023ರ ನವೆಂಬರ್ ತಿಂಗಳಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ 33 ಮಂದಿ ತೇರ್ಗಡೆಯಾಗಿರುವ ಬಗ್ಗೆ ಫೆ.23ರಂದು ಹೈಕೋರ್ಟ್ ರಿಜಿಸ್ಟ್ರಾರ್ ಅಧಿಸೂಚನೆ ಪ್ರಕಟಿಸಿದ್ದರು. ಅವರು ಪಡೆದ ಅಂಕದ ಆಧಾರದಲ್ಲಿ ಒಂದರಿಂದ 33ರ ಕ್ರಮಾಂಕದಲ್ಲಿ ಜಡ್ಜ್ ಹುದ್ದೆಗೆ ಆಯ್ಕೆಗೆ ಲಿಸ್ಟ್ ಮಾಡಲಾಗಿತ್ತು. ಅದರ ಪ್ರಕಾರ, ಹರ್ಷಿತಾ ಜಿಎಂ(1), ಝಹೀರಾ ಅತಾನೂರ್(2), ನಮ್ರತಾ ಹೊಸ್ಮಠ್(3), ಭುವನೇಶ್ವರಿ ಡಿ(4), ವರ್ಣಿಕಾ ಆರ್(5), ಪುಷ್ಪಾ ಡಿ(6), ಪೂಜಾ ಎಸ್. ಕುಮಾರ್(7), ಸುನಿಲ್ ಎಚ್.ಸಿ(8), ಕೃಷ್ಣಪ್ಪ ಪಮ್ಮಾರ್ (9), ಗೀತಾ ಡಿ.(10), ಪುನೀತ್ ಬಿಆರ್ (11), ರಂಜಿತ್ ಕುಮಾರ್ (12), ಸುರಕ್ಷಾ ಕೆಕೆ (13), ಶರ್ಮಿಳಾ ಇಜೆ (14), ಶ್ರುತಿ ತೇಲಿ(15), ಪ್ರಹಾನ್ ಸಿಂಗ್ (16), ಮೇಘಾ ಸೋಮನ್ನವರ್(17), ಮಧುಶ್ರೀ ಆರ್.ಎಂ.(18), ವಿಕಾಸ್ ದಲವಾಯಿ (19), ರಂಜಿತಾ ಎಸ್.(20), ಶ್ರೇಯಾ ಎಚ್.ಜೆ(21), ಧನಂಜಯ್ ಹೆಗ್ಡೆ (22), ತುಷಾರ್ ಸಂಜಯ್ ಸದಾಲಗಿ(23), ಐಶ್ವರ್ಯಾ ಗುಡಾದಿನ್ನಿ(24), ಶ್ರೀದೇವಿ (25), ರಮೇಶ್ ಕೆ.(26), ವಿಜಯಕುಮಾರ್ ಎನ್(27), ಅನಿಲ್ ಜಾನ್ ಸಿಕ್ವೇರಾ(28), ದಾನಪ್ಪ (29), ಕೃತಿಕಾ ಪಿ. ಪವಾರ್ (30), ಮಹಾಂತೇಶ್ ಮಠದ್(31), ಭಾಗ್ಯಶ್ರೀ ಮಾದಾರ್(32), ಸುಮಾ ಟಿ(33) ಇದ್ದಾರೆ.
At just 24 years old, Namrata S Hosmath from Bangalore has achieved the distinction of becoming Karnataka's youngest civil judge.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am