ಬ್ರೇಕಿಂಗ್ ನ್ಯೂಸ್
15-09-22 03:23 pm Bengalore Correspondnet ಕರ್ನಾಟಕ
ಬೆಂಗಳೂರು, ಸೆ.15: ಖ್ಯಾತ ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಅವರ ತಾಯಿ ಡಾ.ಸ್ವರ್ಣಲತಾ ರಾಜಕಾರಣಿಗಳ ಜೊತೆ ಸೇರಿ ಆನೇಕಲ್ ಬಳಿಯ ಅಲಯನ್ಸ್ ವಿವಿಯನ್ನು ಮಾರಾಟಕ್ಕೆ ಯತ್ನಿಸಿ, ನೂರಾರು ಕೋಟಿ ಡೀಲ್ ಕುದುರಿಸಲು ಹೋಗಿ ತಗ್ಲಾಕ್ಕೊಂಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಉದ್ಯಮಿ ಮಧುಕರ್ ಅಂಗೂರ್ ಜೊತೆಗೆ ವಿವಿಯ ಆವರಣಕ್ಕೆ ಬಂದಿದ್ದ ಸ್ವರ್ಣಲತಾ, ಗುಂಪು ಕಟ್ಟಿಕೊಂಡು ರಂಪಾಟ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ವಿವಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಗಲಾಟೆ, ರಂಪಾಟ ಮಾಡಿದ್ದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಇದರಿಂದ ನಟಿ ಶ್ರೀಲೀಲಾ ಅವರ ತಾಯಿಗೆ ಬಂಧನದ ಭೀತಿ ಎದುರಾಗಿದೆ.
ಹಿಂದೆ ಸುಧೀರ್ ಅಂಗೂರ್ ಮತ್ತು ಮಧುಕರ್ ಅಂಗೂರ್ ಜೊತೆಯಾಗಿಯೇ ಖಾಸಗಿ ಅಲಯನ್ಸ್ ವಿವಿ ನಡೆಸುತ್ತಿದ್ದರು. ಆನಂತರ, ಕೋರ್ಟ್ ಜಟಾಪಟಿ ಬಳಿಕ ಮಧುಕರ್ ಅಂಗೂರ್ ಅವರನ್ನು ವಿವಿಯಿಂದ ಹೊರಕ್ಕೆ ಹಾಕಲಾಗಿತ್ತು. ಇದೀಗ ಸ್ವರ್ಣಲತಾ ಮತ್ತು ತಂಡ ಮಧುಕರ್ ಅಂಗೂರ್ ಜೊತೆಗೆ ವಿವಿಯ ಆವರಣಕ್ಕೆ ನುಗ್ಗಿದ್ದು ರಂಪ ಮಾಡಿದ್ದಾರೆ. ಗನ್ ಹಿಡಿದು ವಿವಿಯ ಸಿಬಂದಿಯನ್ನು ಹೆದರಿಸಿದ್ದಾರೆ.
ನಾನೇ ಚಾನ್ಸಲರ್ ಆಗ್ಬೇಕು ಎಂದು ಪಟ್ಟು
ಸ್ಥಳಕ್ಕೆ ಪೊಲೀಸರು ಬಂದರೂ, ತಾನೇ ಯೂನಿವರ್ಸಿಟಿ ಚಾನ್ಸಲರ್ ಎಂದು ಪಟ್ಟು ಹಿಡಿದಿದ್ದ ಸ್ವರ್ಣಲತಾ ಅವರ ರಂಪಾಟ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಕೊನೆಗೆ ಹರಸಾಹಸಪಟ್ಟು ಅವರನ್ನು ಅಲ್ಲಿಂದ ಪೊಲೀಸರು ಹೊರ ಹಾಕಿದ್ದರು. 50ಕ್ಕೂ ಹೆಚ್ಚು ಜನರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸೇರಿ ಹಲವು ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ವಿವಿ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ನೀಡಿದ ದೂರಿನನ್ವಯ ಆನೇಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪದ್ಮನಾಭ್, ಮೋಹನ್, ಪೂಣಚ್ಚ ಸೇರಿ 50 ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ. ಮಧುಕರ್ ಅಂಗೂರ್ ಸೇರಿ 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮಾಡುತ್ತಿದ್ದಾರೆ. ಸ್ವರ್ಣಲತಾ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಸೆ.10 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
An FIR has been registered against Sandalwood star actress Srileela's mother Swarnalatha for allegedly trying to sell the disputed property of Alliance University to a prominent politician and creating a ruckus in the university. Swarnalatha, who went on to do business worth hundreds of crores of rupees, is now stuck in a police case. Swarnalatha offered to sell Alliance VV to a famous politician.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 02:22 pm
Bangalore Correspondent
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm