ಬ್ರೇಕಿಂಗ್ ನ್ಯೂಸ್

Pahalgam terror attack, Pakistani terrorists: ಭಯೋತ್ಪಾದಕ ದಾಳಿ ; ಕೆಲವು ದಿನಗಳ ಹಿಂದೆಯೇ ಸಿಕ್ಕಿತ್ತೇ ಗುಪ್ತಚರ ಸುಳಿವು, ಭದ್ರತಾ ನಿರ್ಲಕ್ಷ್ಯದ ಬಗ್ಗೆ ಆರೋಪ, ಹೆಲ್ಮೆಟ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಉಗ್ರರು, ಮೂವರ ಗುರುತು ಪತ್ತೆ     |    Bearys Group, Bearys Turning Point mall, Deralakatte, Mangalore: ಎ.26ರಂದು ದೇರಳಕಟ್ಟೆಯಲ್ಲಿ 'ಬ್ಯಾರೀಸ್ ಟರ್ನಿಂಗ್ ಪಾಯಿಂಟ್' ಮಾಲ್ ಲೋಕಾರ್ಪಣೆ ; ಶಾಪಿಂಗ್‌ ಮಾಲ್‌, 4 ಪರದೆಗಳ ಮಲ್ಟಿಫ್ಲೆಕ್ಸ್ ಥಿಯೇಟರ್‌, ಫುಡ್‌ ಕೋರ್ಟ್‌ ಆಕರ್ಷಣೆ, ಆರಂಭಿಕ ದಿನದಂದು ಗೇಮ್ಸ್‌ ಉಚಿತ     |    Cm Siddaramaiah, Pahalgam Attack: ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಸಿದ್ದರಾಮಯ್ಯ ; ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ ವ್ಯವಸ್ಥೆ, ಕೇಂದ್ರ ಗುಪ್ತಚರ ಇಲಾಖೆ ವಿರುದ್ಧ ಸಿದ್ದು ಗರಂ    |   

ಧರ್ಮಸ್ಥಳ ; ಬಿಎಡ್ ಆಮೇಲೆ ಮಾಡು, ಈಗಲೇ ಏನು ಅರ್ಜೆಂಟ್ ಎಂದಿದ್ದಕ್ಕೇ ದುರಂತ ತಂದುಕೊಂಡ ಪತ್ನಿ !

05-08-22 02:12 pm       HK News Desk   ಕರ್ನಾಟಕ

ಗಂಡನ ಮನೆಯವರು ಶಿಕ್ಷಣವನ್ನು ಸ್ವಲ್ಪ ಮುಂದಕ್ಕೆ ಹಾಕುವಂತೆ ಸಲಹೆ ನೀಡಿದ್ದನ್ನೇ ನೆಪವಾಗಿಟ್ಟು ಮಹಿಳೆಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ಧರ್ಮಸ್ಥಳ ಬಳಿಯ ಮುಂಡ್ರುಪ್ಪಾಡಿ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ, ಆಗಸ್ಟ್ 5: ಗಂಡನ ಮನೆಯವರು ಶಿಕ್ಷಣವನ್ನು ಸ್ವಲ್ಪ ಮುಂದಕ್ಕೆ ಹಾಕುವಂತೆ ಸಲಹೆ ನೀಡಿದ್ದನ್ನೇ ನೆಪವಾಗಿಟ್ಟು ಮಹಿಳೆಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ಧರ್ಮಸ್ಥಳ ಬಳಿಯ ಮುಂಡ್ರುಪ್ಪಾಡಿ ಎಂಬಲ್ಲಿ ನಡೆದಿದೆ.

ಮುಂಡ್ರುಪ್ಪಾಡಿ ನಿವಾಸಿ ದೀಪಕ್ ಎಂಬವರ ಪತ್ನಿ ಚೈತ್ರಾ ಅಡಿಗ (25) ಆಗಸ್ಟ್ 4ರಂದು ತನ್ನ ಮನೆಯಲ್ಲೇ ಸಾವಿಗೆ ಶರಣಾಗಿದ್ದಾರೆ. ಚೈತ್ರಾ ಮತ್ತು ದೀಪಕ್ 2018ರ ಡಿಸೆಂಬರ್ ನಲ್ಲಿ ಮದುವೆಯಾಗಿದ್ದರು. ಇವರಿಗೆ ಒಂದೂವರೆ ವರ್ಷದ ಮಗುವಿತ್ತು. ಈ ನಡುವೆ, ಚೈತ್ರಾ ಉಜಿರೆಯ ಶಾಲೆಯೊಂದಕ್ಕೆ ಟೀಟರ್ ಆಗಿ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ಶಿಕ್ಷಕಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಇದ್ದರು.

ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿದ್ದ ಚೈತ್ರಾ ಎಂಎ ಪೂರೈಸಿದ್ದು, ಬಿಎಡ್ ಮಾಡಬೇಕೆಂಬ ಆಸೆ ಹೊಂದಿದ್ದಳು. ಆದರೆ ಪತಿ ದೀಪಕ್ ಬಿಎಡ್ ಮುಂದಿನ ವರ್ಷ ಮಾಡು, ಈ ಬಾರಿ ಬೇಡ ಎಂದು ಸಲಹೆ ನೀಡಿದ್ದರಂತೆ. ಇದನ್ನೇ ನೆಪವಾಗಿಟ್ಟು ಚೈತ್ರಾ ದುರಂತ ತಂದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ವಿಚಾರವನ್ನು ಆಕೆಯ ತಾಯಿ ಧರ್ಮಸ್ಥಳ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಗಂಡನ ಮನೆಯವರು ಶಿಕ್ಷಣವನ್ನು ಮುಂದೆ ಹಾಕುವಂತೆ ಹೇಳಿದ್ದಕ್ಕೇ ಈ ರೀತಿ ಮಾಡಿರಬೇಕೆಂಬ ಸಂಶಯ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಚೈತ್ರಾ ತಾಯಿ ದೂರಿನಲ್ಲಿ ಹೇಳಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chaithra was very much involved in literature and cultural activities. She had completed her MA and wanted to do BEd. However, her husband’s family asked her to join MA next year. It is suspected, that Chaithra, who was distraught by the decision of her husband’s family to defer her BEd by a year, must have killed herself. This was mentioned by the mother of deceased Chaithra in the complaint filed with Dharmasthala police station.