ಬ್ರೇಕಿಂಗ್ ನ್ಯೂಸ್
05-04-21 06:23 pm Headline Karnataka News Network ಡಿಜಿಟಲ್ ಟೆಕ್
53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿರೋದು ಕಳೆದ ಶನಿವಾರ ಬಯಲಾಗಿದೆ. ಈ ಬೃಹತ್ ಮಟ್ಟದ ಸೋರಿಕೆಯಲ್ಲಿ ಹ್ಯಾಕರ್ಗಳು ಸ್ವತಃ ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಅವರ ಖಾಸಗಿ ಮೊಬೈಲ್ ಫೋನ್ ನಂಬರ್ ಕೂಡ ಲೀಕ್ ಮಾಡಿದ್ದು, ಸಾರ್ವಜನಿಕವಾಗಿ ಸುಲಭವಾಗಿ ನಂಬರ್ ಸಿಗುವಂತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕಳೆದ ಜನವರಿಯಲ್ಲಿ ಫೇಸ್ಬುಕ್ ಅಕೌಂಟ್ಗಳ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಹ್ಯಾಕರ್ಗಳು ಫೇಸ್ಬುಕ್ ಅಕೌಂಟ್ಗಳಿಗೆ ಲಿಂಕ್ ಆಗಿರೋ 53 ಕೋಟಿ ಫೋನ್ ನಂಬರ್ಗಳನ್ನ ಕದ್ದು, ದೊಡ್ಡ ಡೇಟಾಬೇಸ್ ರಚಿಸಿ ಅದನ್ನ ಹ್ಯಾಕರ್ಸ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕನಿಷ್ಟ ಕಂಪ್ಯೂಟರ್ ಜ್ಞಾನವುಳ್ಳ ಯಾರು ಬೇಕಾದ್ರೂ ಈ ಫೋನ್ ನಂಬರ್ಗಳನ್ನ ಪಡೆಯಬಹುದಾಗಿದೆ ಎಂದು ವರದಿಯೊಂದು ದೃಢಪಡಿಸಿದೆ.

ಸ್ವತಃ ಮಾರ್ಕ್ ಝಕರ್ಬರ್ಗ್ ಅವರ ಪರ್ಸನಲ್ ಫೋನ್ ನಂಬರ್ ಸೋರಿಕೆಯಾಗಿರೋದು ಈ ಹ್ಯಾಕಿಂಗ್ನ ಗಂಭೀರತೆ ಬಗ್ಗೆ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಫೇಸ್ಬುಕ್ನಿಂದ ಸ್ಪಷ್ಟನೆ ಬೇಕಾದ್ರೆ ಪತ್ರಕರ್ತರು ಈಗ ನೇರವಾಗಿ ಝಕರ್ಬರ್ಗ್ ಅವರಿಗೇ(ಲೀಕ್ ಆಗರೋ ನಂಬರ್ಗೆ) ಕರೆ ಮಾಡಿ ಅಂತ ಡೇಟಾ ಸೆಕ್ಯೂರಿಟಿ ತಜ್ಞ ಡೇವ್ ವಾಕರ್ ಎಂಬವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಹ್ಯಾಕರ್ಗಳು ಹಲವಾರು ಜನರ ಫೋನ್ ನಂಬರ್ಗಳನ್ನೊಳಗೊಂಡ ಸೂಕ್ಷ್ಮ ಮಾಹಿತಿಯನ್ನ ಆನ್ಲೈನ್ ಮೂಲಕ ಫ್ರೀಯಾಗಿ ನೀಡ್ತಿದ್ದರು ಎಂದು ವರದಿಯಾಗಿದೆ. ಅಲ್ಲದೆ ಹ್ಯಾಕರ್ಸ್ ಫೋರಂನಲ್ಲಿ ಕಳೆದ ಜನವರಿಯಿಂದ ಫೋನ್ ನಂಬರ್ಗಳು ಹರಿದಾಡ್ತಿವೆ ಅಂತ ತಿಳಿದುಬಂದಿದೆ.
In a major privacy breach, personal data of around 53.3 crores Facebook users from 106 countries have allegedly been posted online for free on low-level hacking forums.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
13-06-26 03:01 pm
HK News Staffer
4,399 ದಿನಗಳ ಸುದೀರ್ಘ ಆಡಳಿತ, ಭಾರತದ ಇತಿಹಾಸದಲ್ಲೇ...
10-06-26 06:42 pm
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
13-06-26 05:28 pm
HK News Staffer
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್ ಜೋಸೆ...
12-06-26 04:31 pm
ದ್ರಾವಿಡ ನಾಡಿನ ಸಿಎಂ ಜೋಸೆಫ್ ವಿಜಯ್ ದಿಢೀರ್ ಕೊಲ್ಲೂ...
12-06-26 02:56 pm
13-06-26 09:17 pm
HK News Staffer
ಬೆಂಗಳೂರಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಲ್ಲಿ ಅನ್...
13-06-26 08:43 pm
ಕಾಲೇಜು ಫೀಸ್ಗೆ ಕೊಟ್ಟ 10 ಸಾವಿರವೇ ಜೀವ ತೆಗೆಯಿತು!...
13-06-26 06:14 pm
ಪತ್ನಿ ಹತ್ಯೆಗೆ ಜೈಲಿನಿಂದಲೇ ಸುಪಾರಿ ; ಬುರ್ಖಾ ಧರಿಸ...
12-06-26 11:58 am
Manoj Kodikere Arrest: ಕೋಕಾ ಕಾಯ್ದೆ- ಕಿಡ್ನಾಪ್...
11-06-26 08:44 pm