ಬ್ರೇಕಿಂಗ್ ನ್ಯೂಸ್
02-02-21 04:00 pm Source: GIZBOT Mutthuraju H M ಡಿಜಿಟಲ್ ಟೆಕ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್ ಮ್ಯಾಪ್ ಸಾಕಷ್ಟು ಉಪಯುಕ್ತವಾಗಿದ್ದು, ಚಾಲಕರಿಗೆ ಮಾರ್ಗಗಳ ಬಗ್ಗೆ ಗೈಡ್ ಮಾಡಲಿದೆ. ಸದ್ಯ ಇದೀಗ ಗೂಗಲ್ ಮ್ಯಾಪ್ ಹೊಸ ಮಾದರಿಯ ಫೀಚರ್ಸ್ ಅನ್ನು ಪರಿಚಯಿಸಿದೆ. ಇದನ್ನು ಸ್ಪ್ಲಿಟ್-ಸ್ಕ್ರೀನ್ ಸ್ಟ್ರೀಟ್ ವ್ಯೂ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಹೆಸರೇ ಸೂಚಿಸುವಂತೆ, ಬಳಕೆದಾರರಿಗೆ ಮಾರ್ಗವನ್ನು ನೋಡುವ ಸಾಮರ್ಥ್ಯವನ್ನು ನೀಡುತ್ತದೆ ಮತ್ತು ಸಿಂಗಲ್ ಸ್ಕ್ರೀನ್ನಲ್ಲಿ ಸ್ಪ್ಲಿಟ್ ಸ್ಕ್ರೀನ್ ವೀಕ್ಷಣೆಯನ್ನು ನೀಡುತ್ತದೆ.
ಹೌದು, ಗೂಗಲ್ ಮ್ಯಾಪ್ ಇದೀಗ ಇನ್ನಷ್ಟು ಅಪ್ಡೇಟ್ ಆಗಿದೆ. ಈಗಾಗಲೇ ಅನೇಕ ಹೊಸ ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸಿರುವ ಗೂಗಲ್ ಮ್ಯಾಪ್ ಇದೀಗ ಸ್ಪ್ಲಿಟ್-ಸ್ಕ್ರೀನ್ ವ್ಯೂ ಫೀಚರ್ಸ್ ಪರಿಚಯಿಸಿದೆ. ಇನ್ನು ಈ ಫೀಚರ್ಸ್ ಸಾಮರ್ಥ್ಯವು ಆಂಡ್ರಾಯ್ಡ್ 10.59.1 ಗಾಗಿ ಗೂಗಲ್ ಮ್ಯಾಪ್ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಇದು ಇದೀಗ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಗೂಗಲ್ ಮ್ಯಾಪ್ಗಳಲ್ಲಿ ಸ್ಪ್ಲಿಟ್-ಸ್ಕ್ರೀನ್ ಸ್ಟ್ರೀಟ್ ವ್ಯೂ ಫೀಚರ್ಸ್ ಇತ್ತೀಚಿನ ಅಪ್ಡೇಟ್ನಲ್ಲಿ ಬಳಕೆದಾರರಿಗಾಗಿ ಕಾರ್ಯನಿರ್ವಹಿಸುತ್ತಿದೆ, ಎಂದು ವರದಿಯಾಗಿದೆ. ಅಂದರೆ, ಆಂಡ್ರಾಯ್ಡ್ಗಾಗಿ v10.59.1 ಆವೃತ್ತಿಯಲ್ಲಿ ಈ ಫೀಚರ್ಸ್ ಲಭ್ಯವಿದೆ. ಆದಾಗ್ಯೂ, ಎಲ್ಲಾ ಬಳಕೆದಾರರು ಇದನ್ನು ಶೀಘ್ರದಲ್ಲೇ ಪಡೆಯುವ ಸಾದ್ಯತೆ ಇದೆ. ಆದರೆ ಭಾರತದಲ್ಲಿ ಬಳಕೆದಾರರು ಇದನ್ನು ಬಳಸಲು ಸಾಧ್ಯವಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ಸರ್ಕಾರದ ಅನುಮೋದನೆಗಳನ್ನು ತಿರಸ್ಕರಿಸಿದ್ದರಿಂದ ಗೂಗಲ್ ಮ್ಯಾಪ್ಗಳ ಸ್ಟ್ರೀಟ್ ವ್ಯೂ ಇನ್ನೂ ಭಾರತೀಯ ಬಳಕೆದಾರರಿಗೆ ಲಭ್ಯವಿಲ್ಲ.
ಇನ್ನು ಈ ಫೀಚರ್ಸ್ ಅನ್ನು ಬಳಸಲು, ನೀವು ನ್ಯಾವಿಗೇಷನ್ ಪ್ರಾರಂಭಿಸಿದಾಗ ಸ್ಟ್ರೀಟ್ ವ್ಯೂಗೆ ಬದಲಿಸಿ ಮತ್ತು ನಂತರ ಸ್ಟ್ರೀಟ್ ವ್ಯೂನ ಕೆಳಗಿನ ಬಲಭಾಗದಲ್ಲಿ ತೋರಿಸುವ ವೃತ್ತಾಕಾರದ ವಿಸ್ತರಣೆ / ಮಂದಗೊಳಿಸುವ ಬಟನ್ ಅನ್ನು ಟ್ಯಾಪ್ ಮಾಡಿ. ಈ ಸ್ಪ್ಲಿಟ್-ಸ್ಕ್ರೀನ್ ಸ್ಟ್ರೀಟ್ ವ್ಯೂ ಮೋಡ್ನಲ್ಲಿ ಒಮ್ಮೆ, ಬಳಕೆದಾರರು ಮ್ಯಾಪ್ನಲ್ಲಿ ಅವರು ಎಲ್ಲಿದ್ದಾರೆ ಮತ್ತು ಅವರು ಎದುರಿಸುತ್ತಿರುವ ದಿಕ್ಕನ್ನು ಏಕಕಾಲದಲ್ಲಿ ನೋಡಬಹುದು. ಇದು ಬಳಕೆದಾರರು ತಮ್ಮ ಸ್ಥಳವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಫೀಚರ್ಸ್ ಲ್ಯಾಂಡ್ಸ್ಕೇಪ್ ಮೋಡ್ನಲ್ಲಿ ಮತ್ತು ಪೋರ್ಟ್ರೇಟ್ ಮೋಡ್ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಆದರೆ ಭಾವಚಿತ್ರ ದೃಷ್ಟಿಕೋನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಟ್ರೀಟ್ ವ್ಯೂ ಸ್ಥಳ ಸೂಚಕಗಳನ್ನು ಸಹ ನೀಡುತ್ತದೆ, ಇದು ನಿಮ್ಮ ಸುತ್ತಲಿನ ಸ್ಥಳಗಳ ಹೆಸರುಗಳನ್ನು ನೀಡುತ್ತದೆ. ಇದಲ್ಲದೆ ಈ ಫೀಚರ್ಸ್ ಬಳಸಲು ಬಳಕೆದಾರರು ಗೂಗಲ್ ಮ್ಯಾಪ್ v10.59.1 ನಲ್ಲಿ ಇರಬೇಕಾಗುತ್ತದೆ.
This News Article is a Copy of GIZBOT
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 04:36 pm
Mangalore Correspondent
11 ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ಸಿಕ್ಕಿಬಿದ್ದಿದ್...
26-10-25 04:42 pm
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm