ಬ್ರೇಕಿಂಗ್ ನ್ಯೂಸ್
02-01-21 11:33 am Source: GIZBOT ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರ ಆಡಳಿತದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಕೆಲವು ವರ್ಷಗಳ ಹಿಂದೆ, ಬಹುತೇಕ ಎಲ್ಲದಕ್ಕೂ ಒಂದು ವೆಬ್ಸೈಟ್ ಇತ್ತು. ಈಗ, ಬಹುತೇಕ ಎಲ್ಲದಕ್ಕೂ ಒಂದು ಅಪ್ಲಿಕೇಶನ್ ಇದೆ. ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಭಾರತ ಸರ್ಕಾರ ಮತ್ತು ಸಂಬಂಧಿತ ಏಜೆನ್ಸಿಗಳು ಹಲವಾರು ಆಪ್ಗಳನ್ನು ಪರಿಚಯಿಸಿವೆ. ಈ ಆಪ್ಗಳು ಭಾರತ ಸರ್ಕಾರ ಪರಿಚಯಿಸಿ ಹಲವು ದಿನಗಳೇ ಕಳೆದರು ಕೊರೊನಾ ಸಮಯದಲ್ಲಿ ಈ ಆಪ್ಗಳು ಸಾಕಷ್ಟು ಉಪಯೋಗವನ್ನು ಮಾಡಿವೆ. ಅಲ್ಲದೆ ಭಾರತ ಸರ್ಕಾರ ಕೊರೊನಾ ಸಮಯದಲ್ಲಿಯೂ ಹಲವು ಆಪ್ಗಳನ್ನ ಬಿಡುಗಡೆ ಮಾಡಿದೆ.
ಹೌದು, ಪ್ರಸಕ್ತ ವರ್ಷ ಲಾಕ್ಡೌನ್ ಅವಧಿಯಲ್ಲಿ, ಸಾಮಾಜಿಕ ಅಂತರ ಮತ್ತು ಮನೆಯಲ್ಲಿಯೇ ಜನತೆ ಉಳಿಯುವಂತೆ ಆದಾಗ ಸರ್ಕಾರ ಪರಿಚಯಿಸಿದ್ದ ಹಲವು ಆಪ್ಗಳು ಜನರ ಬಳಿಗೆ ಆಡಳಿತದ ಸೌಲಭ್ಯಗಳು ಲಭ್ಯವಾಗುವಂತೆ ಮಾಡಿವೆ. ಭಾರತೀಯ ಸರ್ಕಾರವು ಪ್ರಾರಂಭಿಸಿದ ಹೊಸ ಅಪ್ಲಿಕೇಶನ್ಗಳು ಸೇರಿದಂತೆ ಅನೇಕ ಅಪ್ಲಿಕೇಶನ್ಗಳ ಮೂಲಕ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಬದಲು ನೀವು ಅಪ್ಲಿಕೇಶನ್ ಅನ್ನು ಬಳಸಬಹುದು.

ಆರೋಗ್ಯಾ ಸೇತು ಅಪ್ಲಿಕೇಶನ್
COVID-19 ಶುರುವಾದ ತಕ್ಷಣ ಜನರಿಗೆ ಕೊರೊನಾ ಮಾಹಿತಿ ನೀಡುವ ಹಾಗೂ ಅಗತ್ಯ ಮಾಗದರ್ಶನ ನೀಡುವ ಸಲುವಾಗಿ ಭಾರತ ಸರ್ಕಾರ ತನ್ನ ಆರೋಗ್ಯಾ ಸೇತು ಆಪ್ ಅನ್ನು ಪರಿಚಯಿಸಿತ್ತು. ಇದು ಭಾರತೀಯ ನಾಗರಿಕರಿಗೆ ಕೊರೊನಾ ಸಂಬಂದಿತ ಮಾಹಿತಿ, ಕೊರೊನಾ ಸೊಂಕಿತರು ಇರುವ ಸ್ಥಳ, ಕೊರೊನಾ ಪಾಸಿಟವ್ ಲೊಕೇಶನ್ ಟ್ರಾಕಿಂಗ್ ಸೇರಿದಂತೆ ಹಲವು ಉಪಯುಕ್ತ ಸಲಹೆಗಳನ್ನ ನೀಡುತ್ತಿದೆ. ಇದರಿಮದ ಭಾರತದಲ್ಲಿ ಕೊರನಾ ಕುರಿತು ಅಗತ್ಯ ಎಚ್ಚರಿಕೆ ವಹಿಸಲು ಜನರಿಗೆ ಸಾಕಷ್ಟು ಸಹಾಯ ಮಾಡಿದೆ. ಕೊರೊನಾ ಕುರಿತ ಮಾಹಿತಿ ನೀಡಲು ಆರೋಗ್ಯ ಇಲಾಖೆಗೆ ಸಹಾಯ ಮಾಡಲು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಆಯ್ಕರ್ ಸೇತು ಅಪ್ಲಿಕೇಶನ್
ಭಾರತ ಸರ್ಕಾರ ಪರಿಚಯಿಸಿರುವ ಪ್ರಮುಖ ಆಪ್ಗಳಲ್ಲಿ ಆಯ್ಕರ್ ಸೇತು ಆಪ್ ಕುಡ ಒಂದಾಗಿದೆ. ಈ ಆಪ್ ಮೂಲಕ ಆದಾಯ ತೆರಿಗೆ ಇಲಾಖೆಯು ನಿಮ್ಮ ಬಳಿಗೆ ತಂದಿದೆ. ಇದು ಇಲಾಖೆಯು ನೀಡುವ ವಿವಿಧ ಸೇವೆಗಳಿಗೆ ಪ್ರವೇಶ ಬಿಂದು ನೀಡುತ್ತದೆ. ನೀವು ಆನ್ಲೈನ್ನಲ್ಲಿ ತೆರಿಗೆ ಪಾವತಿಸಲು ಬಯಸುತ್ತಿದ್ದರೆ ಅಥವಾ ನಿಮ್ಮ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ಗೆ ಅರ್ಜಿ ಸಲ್ಲಿಸುವ ಮಾರ್ಗವನ್ನು ಹುಡುಕುತ್ತಿದ್ದರೆ ಈ ಅಪ್ಲಿಕೇಶನ್ ಸಹಕಾರಿಯಾಗಿದೆ.

ಡಿಜಿಲಾಕರ್ ಅಪ್ಲಿಕೇಶನ್
ಹೆಸರೇ ಸೂಚಿಸುವಂತೆ, ಈ ಅಪ್ಲಿಕೇಶನ್ ಡಿಜಿಟಲ್ ಲಾಕರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಡಿಜಿಟಲ್ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಲು ನೀವು ಇದನ್ನು ಬಳಸಬಹುದು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEIT) ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಭೌತಿಕ ದಾಖಲೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಡಿಜಿಲಾಕರ್ ಅನ್ನು ನಿರ್ದೇಶಿಸಲಾಗಿದೆ. ಇದು ಕಾಗದರಹಿತ ಆಡಳಿತದ ಕಲ್ಪನೆಯನ್ನು ಪ್ರಚಾರ ಮಾಡುತ್ತದೆ. ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲು ಮತ್ತು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ಬಳಸಬಹುದು.

ಇಪಾತ್ಶಾಲಾ ಅಪ್ಲಿಕೇಶನ್
ಈ ಅಪ್ಲಿಕೇಶನ್ ಪ್ರಯಾಣದಲ್ಲಿರುವಾಗ ಕಲಿಯಲು ಅನುಕೂಲವಾಗುತ್ತದೆ. ಈ ಅಪ್ಲಿಕೇಶನ್ ಮೂಲಕ ನೀವು ಪಠ್ಯಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ಪ್ರವೇಶಿಸಬಹುದು. ಇದು ಮೊಬೈಲ್ ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು ಲ್ಯಾಪ್ಟಾಪ್ಗಳಂತಹ ವಿಭಿನ್ನ ಡಿವೈಸ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪಠ್ಯವನ್ನು ಹೈಲೈಟ್ ಮಾಡಲು ಮತ್ತು ಟಿಪ್ಪಣಿಗಳನ್ನು ಮಾಡಲು ನೀವು ಇಪಾತ್ಶಾಲಾ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ಈ ಶೈಕ್ಷಣಿಕ ಅಪ್ಲಿಕೇಶನ್ ಅನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪರಿಚಯಿಸಿದೆ.

ಜಿಎಸ್ಟಿ ರೇಟ್ ಫೈಂಡರ್ ಅಪ್ಲಿಕೇಶನ್
ಸರಕು ಮತ್ತು ಸೇವಾ ತೆರಿಗೆ (GST) ಸಂಬಂದಿತ ಮಾಹಿತಿಯನ್ನು ನೀಡುವುದಕ್ಕಾಗಿ ಈ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಈ ಅಪ್ಲಿಕೇಶನ್ನ ಇಂಟರ್ಫೇಸ್ ಸರಳವಾಗಿದೆ ಮತ್ತು ಆದ್ದರಿಂದ ಅರ್ಥಮಾಡಿಕೊಳ್ಳುವುದು ಸುಲಭ. ನಿರ್ದಿಷ್ಟ ಸರಕು ಮತ್ತು ಸೇವೆಗಳಿಗೆ ಅನ್ವಯವಾಗುವ ಜಿಎಸ್ಟಿಯನ್ನು ಕಂಡುಹಿಡಿಯಲು ನೀವು ಅಪ್ಲಿಕೇಶನ್ ಅನ್ನು ಬಳಸಬಹುದು. ಈ ಅಪ್ಲಿಕೇಶನ್ ಅನ್ನು ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ ನೀಡುತ್ತದೆ.
This News Article is a Copy of GIZBOT
14-03-26 10:14 pm
HK News Staffer
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿ...
13-03-26 09:44 am
ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯ...
12-03-26 02:48 pm
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
15-03-26 01:08 pm
HK News Desk
ಗಲ್ಫ್ ಯುದ್ಧ ನಡುವಲ್ಲೇ ಮಿಸೈಲ್ ಉಡಾಯಿಸಿದ ಉತ್ತರ ಕೊ...
14-03-26 10:31 pm
ವಿಮಾನ ಪ್ರಯಾಣಿಕರಿಗೂ ತಟ್ಟಿದ ಇರಾನ್–ಇಸ್ರೇಲ್ ಯುದ್ಧ...
14-03-26 07:38 pm
ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಅಲಿ ಖಮೇನಿ ಬಗ್ಗೆ...
14-03-26 12:51 pm
ಅಮೆರಿಕಾ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿಗೂ ಪೆಟ...
13-03-26 04:18 pm
14-03-26 09:26 pm
HK News Desk
ಕಂದಾಯ- ಅರಣ್ಯ ಭೂಮಿ ಗುರುತಿಸಲು ಜಿಲ್ಲಾ ಮಟ್ಟದಲ್ಲಿ...
14-03-26 08:31 pm
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಟ್ವಾಳದ ಯುವ ಛಾಯಾ...
14-03-26 06:07 pm
‘ಕ್ರಿಶ್ಚಿಯನ್ ಯುವಕ’ನಿಂದ ದೈವ ನರ್ತನ ಸೇವೆ ; ಪಂಬದ...
14-03-26 05:19 pm
ಮಾರ್ಚ್ 16ರಿಂದ 28ರ ವರೆಗೆ ಮಂಗಳೂರಿನಿಂದ ಶಾರ್ಜಾಕ್ಕ...
13-03-26 10:04 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am