ಬ್ರೇಕಿಂಗ್ ನ್ಯೂಸ್
18-12-20 04:19 pm Source: GIZBOT Mutthuraju H M ಡಿಜಿಟಲ್ ಟೆಕ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ಹಾಗೂ ಸೊಶೀಯಲ್ ಮೀಡಿಯಾ ದೈತ್ಯ ಫೇಸ್ಬುಕ್ ವಿರುದ್ದ ಅಮೆರಿಕದ 10 ರಾಜ್ಯಗಳು ದಾವೆ ಹೂಡಿವೆ. ಮಾರುಕಟ್ಟೆಯಲ್ಲಿ ಪ್ರತಿಸ್ಫರ್ದಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ಗೂಗಲ್ ಹಾಗೂ ಫೇಸ್ಬುಕ್ ಅಕ್ರಮ ಒಪ್ಪಂದ ಮಾಡಿಕೊಂಡಿವೆ ಎಂದು ದೂರಲಾಗಿದೆ.
ಹೌದು, ಕೆಲ ದಿನಗಳ ಹಿಂದೆಯಷ್ಟೇ ಏಕಸ್ವಾಮ್ಯ ನೀತಿ ದುರುಪಯೋಗ ಮಾಡಿಕೊಂಡಿದೆ ಎಂದು ಫೇಸ್ಬುಕ್ ವಿರುದ್ದ ದೂರು ದಾಖಲಿಸಿದ್ದ ಅಮೆರಿಕದ ರಾಜ್ಯಗಳು, ಇದೀಗ ಗೂಗಲ್ ವಿರುದ್ದ ಕೂಡ ದಾವೆ ಹೂಡಿವೆ. ಜಾಹಿರಾತು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ತೊಡೆದುಹಾಕಲು ಗೂಗಲ್ ಫೇಸ್ಬುಕ್ ಜೊತೆಗೆ ಅಕ್ರಮ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿ ಯುಎಸ್ ರಾಜ್ಯಗಳು ಮೂರನೇ ಆಂಟಿಟ್ರಸ್ಟ್ ಮೊಕದ್ದಮೆಯನ್ನು ಹೂಡಿವೆ.
ಗೂಗಲ್ನ ಕೆಲವು ನಿರೀಕ್ಷಿತ ಕ್ರಮಗಳು ಅದರ ಸಾಮಾನ್ಯ ಹುಡುಕಾಟ ಏಕಸ್ವಾಮ್ಯವನ್ನು ರಕ್ಷಿಸಿವೆ ಮತ್ತು ಪ್ರತಿಸ್ಪರ್ಧಿಗಳನ್ನು ಹೊರಗಿಟ್ಟಿವೆ. ಸ್ಪರ್ಧಾತ್ಮಕ ಆಯ್ಕೆಗಳ ಪ್ರಯೋಜನಗಳನ್ನು ಗ್ರಾಹಕರಿಂದ ಕಸಿದುಕೊಳ್ಳುತ್ತಿದೆ. ಇದರಿಂದ ಗ್ರಾಹಕರಿಗೆ ಹೊಸತನವನ್ನು ಅನುಭವಿಸಲು ಸಾಧ್ಯವನ್ನು ನೀಡುತ್ತಿಲ್ಲ. ಹೊಸ ಪ್ರವೇಶ ಅಥವಾ ವಿಸ್ತರಣೆಯನ್ನು ದುರ್ಬಲಗೊಳಿಸುತ್ತವೆ ಎಂದು ದೂರನ್ನು ನೀಡಲಾಗಿದೆ. ಇನ್ನು ಟೆಕ್ಸಾಸ್ ರಾಜ್ಯ ಈ ಮೊಕದ್ದಮೆಯ ನೇತೃತ್ವವನ್ನು ವಹಿಸಿದ್ದು, ಗೂಗಲ್ ವಿರುದ್ಧದ ಫೆಡರಲ್ ಪ್ರಕರಣದೊಂದಿಗೆ ಏಕೀಕರಿಸುವಂತೆ ಕೇಳಿದೆ.
ಗ್ರಾಹಕ ವ್ಯಾಪಾರ ಹಿತಾಸಕ್ತಿಗಳನ್ನು ಪರಿಗಣಿಸದೆ ಗೂಗಲ್ ತನ್ನ ಸರ್ಚ್ ಎಂಜಿನ್ ಅನ್ನು ಮರುವಿನ್ಯಾಸಗೊಳಿಸುವಂತೆ ಒತ್ತಾಯಿಸಲು ಈ ದೂರಿನಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ ಗೂಗಲ್ ಸ್ಪರ್ಧಿಗಳನ್ನು ಮಟ್ಟಹಾಕಲು ಒಪ್ಪಂದಗಳನ್ನು ಮಾಡಿಕೊಂಡಿದೆ. ಅದರ ಹುಡುಕಾಟ ಮತ್ತು ಜಾಹೀರಾತು ವ್ಯವಸ್ಥೆಗಳನ್ನು ಸ್ಮಾರ್ಟ್ ಸ್ಪೀಕರ್ಗಳು, ಕಾರುಗಳು, ಸ್ಮಾರ್ಟ್ಫೋನ್ಗಳು ಮತ್ತು ಹೆಚ್ಚಿನವುಗಳಲ್ಲಿ ಪಡೆಯುವಾಗ ಪ್ರತಿಸ್ಪರ್ಧಿಗಳನ್ನು ಲಾಕ್ ಔಟ್ ಮಾಡಲು ಪ್ರಯತ್ನಿಸಿದೆ ಎಂದು ಹೇಳಲಾಗಿದೆ.
ಇನ್ನು ಗೂಗಲ್ ಜಾಹೀರಾತು ಆದಾಯವು ನಿರಂತರವಾಗಿ ಬೆಳೆಯುತ್ತಲೇ ಇದ್ದರೂ, ಯುಎಸ್ ಆನ್ಲೈನ್ ಜಾಹೀರಾತು ಮಾರುಕಟ್ಟೆಯಲ್ಲಿ ಅದರ ಪಾಲು ಫೇಸ್ಬುಕ್, ಅಮೆಜಾನ್ ಮತ್ತು ಇತರ ಸ್ಪರ್ಧಿಗಳ ಒತ್ತಡಕ್ಕೆ ಮಣಿಯುತ್ತಿದೆ ಎಂದು ಇಮಾರ್ಕೆಟರ್ ಹೇಳಿದೆ. ಯುಎಸ್ ಜಾಹೀರಾತು ಮಾರುಕಟ್ಟೆಯ ಒಟ್ಟು ಶೇಕಡಾ 42.4 ಬಿಲಿಯನ್ (ಸರಿಸುಮಾರು 3,11,700 ಕೋಟಿ ರೂ.) ಗೆ ಈ ವರ್ಷ ಗೂಗಲ್ ಕೇವಲ 30 ಪ್ರತಿಶತದಷ್ಟು ಪಡೆದುಕೊಂಡಿದೆ ಎಂದು ಮಾರುಕಟ್ಟೆ ಟ್ರ್ಯಾಕರ್ ನಿರೀಕ್ಷಿಸಿದ್ದಾರೆ.
This News Article is a Copy of GIZBOT
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm