ಬ್ರೇಕಿಂಗ್ ನ್ಯೂಸ್
27-10-20 03:15 pm Headline Karnataka News Network ಡಿಜಿಟಲ್ ಟೆಕ್
ಅಮೇರಿಕಾ, ಅಕ್ಟೋಬರ್ .27 : ಸರ್ಚ್ ಇಂಜಿನ್ ದೈತ್ಯ ಗೂಗಲ್ ಭದ್ರತೆಯ ಹಿತದೃಷ್ಟಿಯಿಂದ ತನ್ನ ಪ್ಲೇ ಸ್ಟೋರ್ನಿಂದ ಮೂರು ಆಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ. ತನ್ನ ಡೇಟಾ ಸಂಗ್ರಹ ನೀತಿಗಳನ್ನು ಉಲ್ಲಂಘಿಸಿರುವುದಕ್ಕಾಗಿ ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ಎಂಬ ಮೂರು ಮಕ್ಕಳ ಅಪ್ಲಿಕೇಶನ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ.

ಈ ಮೂರು ಅಪ್ಲಿಕೇಶನ್ಗಳು ಯೂನಿಟಿ, ಉಮೆಂಗ್ ಮತ್ತು ಅಪೋಡಿಯಲ್ನಿಂದ ಎಸ್ಡಿಕೆಗಳನ್ನು ಬಳಸಿಕೊಂಡಿವೆ. ಈ ಡೆವಲಪರ್ ಕಿಟ್ಗಳಲ್ಲಿ ಸಮಸ್ಯೆಗಳನ್ನು ಗುರುತಿಸಲಾಗಿದೆ. ಡೇಟಾ ಸಂಗ್ರಹಣೆ ಉಲ್ಲಂಘನೆಯನ್ನು ಇಂಟರ್ನ್ಯಾಷನಲ್ ಡಿಜಿಟಲ್ ಅಕೌಂಟೆಬಿಲಿಟಿ ಕೌನ್ಸಿಲ್ (ಐಡಿಎಸಿ) ಗಮನಸೆಳೆದ ನಂತರ ಗೂಗಲ್ ಈ ಮೂರು ಅಪ್ಲಿಕೇಶನ್ಗಳಿಗೆ ಗೇಟ್ಪಾಸ್ ನೀಡಿದೆ.
ಈ ಎಸ್ಡಿಕೆಗಳ ಕೆಲವು ಆವೃತ್ತಿಗಳು ಡೇಟಾ ಸಂಗ್ರಹಣೆಯ ಸುತ್ತ ವಿಸ್ತಾರವಾದ ಗೂಗಲ್ ಪ್ಲೇ ನೀತಿಗಳಿಗೆ ಅನುಗುಣವಾಗಿರಲಿಲ್ಲ. 'ಇತರ ಸಂಗತಿಗಳ ಪೈಕಿ, ಐಡಿಎಸಿಯ ಪರೀಕ್ಷೆಗಳು ಯುನಿಟಿಯ ಎಸ್ಡಿಕೆಯ ಕೆಲವು ಆವೃತ್ತಿಗಳು ಬಳಕೆದಾರರ ಎಎಐಡಿ ಮತ್ತು ಆಂಡ್ರಾಯ್ಡ್ ಐಡಿ ಎರಡನ್ನೂ ಏಕಕಾಲದಲ್ಲಿ ಸಂಗ್ರಹಿಸುತ್ತಿದ್ದವು. ಇದು ಗೌಪ್ಯತೆ ನಿಯಂತ್ರಣಗಳನ್ನು ಬೈಪಾಸ್ ಮಾಡಲು, ಬಳಕೆದಾರರನ್ನು ಕಾಲಾಂತರದಲ್ಲಿ ಮತ್ತು ಸಾಧನಗಳಾದ್ಯಂತ ಟ್ರ್ಯಾಕ್ ಮಾಡಲು ಯುನಿಟಿಗೆ ಅನುಮತಿಸಿರಬಹುದು ಎಂದು ಐಡಿಎಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಎಲ್ಲಾ ಕಾರಣದಿಂದಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಮಕ್ಕಳ ಜನಪ್ರಿಯ ಮೂರು ಆಪ್ ಗಳಾದಂತ ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ತೆಗೆದು ಹಾಕಿದೆ.
14-12-25 11:37 pm
HK News Desk
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
Earthqake, Davangere, Vijayanagara: ದಾವಣಗೆರೆ,...
13-12-25 10:47 pm
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
14-12-25 11:10 pm
Mangalore Correspondent
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm
ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ವಂಚನೆ ;...
14-12-25 05:33 pm
Shivamogga Double Murder: ಶಿವಮೊಗ್ಗದಲ್ಲಿ ಡಬಲ್...
13-12-25 12:51 pm