ಬ್ರೇಕಿಂಗ್ ನ್ಯೂಸ್
30-07-22 09:48 pm Source: Vijayakarnataka ಡಿಜಿಟಲ್ ಟೆಕ್
ಬರೋಬ್ಬರಿ 44 ಬಿಲಿಯನ್ ಡಾಲರ್ (ಸುಮಾರು 3.5 ಲಕ್ಷ ಕೋಟಿ ರೂ.) ಮೊತ್ತಕ್ಕೆ ಟ್ವಿಟ್ಟರ್ ಅನ್ನು ಖರೀದಿಸುವ ಒಪ್ಪಂದವನ್ನು ಎಲಾನ್ ಮಸ್ಕ್ ಅವರು ಕೈಬಿಟ್ಟ ನಂತರ, ಟ್ವಿಟರ್ ಸಂಸ್ಥೆಯು ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಪ್ರತಿಯಾಗಿ ಎಲಾನ್ ಮಸ್ಕ್ ಅವರು ಸಹ ಪ್ರತಿ ದಾವೆಯನ್ನು ಹೂಡಿದ್ದಾರೆ. ಟ್ವಿಟರ್ ಕಂಪನಿಯು ತನ್ನ ನಕಲಿ ಮತ್ತು ಸ್ಪ್ಯಾಮ್ ಖಾತೆಗಳ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ತಿಳಿಸಿ ಜುಲೈ ತಿಂಗಳ ಮೊದಲ ವಾರದಲ್ಲಿ ಟ್ವಿಟ್ಟರ್ ಕಂಪೆನಿಯನ್ನು ಖರೀದಿಸುವುದಿಲ್ಲ ಎಂದು ಎಲಾನ್ ಮಸ್ಕ್ ಅವರು ತಿಳಿಸಿದ್ದರು. ಈ ಬೆಳವಣಿಗೆಯ ನಂತರ ಬಗ್ಗೆ ಟ್ವಿಟ್ಟರ್ ಸಂಸ್ಥೆ ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಇದೀಗ ಈ ದೂರಿಗೆ ಪ್ರತಿಯಾಗಿ ಎಲಾನ್ ಮಸ್ಕ್ ಅವರು ಸಹ ದಾವೆ ಹೂಡಿದ್ದಾರೆ ಎಂದು ತಿಳಿದುಬಂದಿದೆ.
ಶಕ್ರವಾರದಂದು ಎಲಾನ್ ಮಸ್ಕ್ ಅವರು ನ್ಯಾಯಾಲಯದಲ್ಲಿ ಟ್ವಿಟರ್ ವಿರುದ್ಧದ ತಮ್ಮ ಹಕ್ಕುಗಳನ್ನು ಸಲ್ಲಿಸಿದ್ದು, 164 ಪುಟಗಳ ದಾವೆಯ ಫೈಲಿಂಗ್ ಅನ್ನು "ಗೌಪ್ಯ" ಎಂದು ಸಲ್ಲಿಸಲಾಗಿದೆ, ಅಂದರೆ, ಈ ದಾಖಲೆಗಳನ್ನು ಸಾರ್ವಜನಿಕರಿಂದ ಪ್ರವೇಶಿಸಲಾಗುವುದಿಲ್ಲ ಎಂದು ಸೂಚಿಸಲಾಗಿದೆ. ಆದಾಗ್ಯೂ, ನ್ಯಾಯಾಲಯದ ನಿಯಮಗಳು, ವ್ಯಾಪಾರದ ರಹಸ್ಯಗಳು ಅಥವಾ ಇತರ ಸೂಕ್ಷ್ಮ ಮಾಹಿತಿಯೊಂದಿಗೆ ಫೈಲಿಂಗ್ನ ಸಾರ್ವಜನಿಕ ಆವೃತ್ತಿಯನ್ನು ಸಲ್ಲಿಸಲು ಮಸ್ಕ್ಗೆ ಅಗತ್ಯವಿರುತ್ತದೆ ಎಂದು ತಿಳಿದುಬಂದಿದೆ. ಇನ್ನು ಮಸ್ಕ್ ವಿರುದ್ಧ ಟ್ವಿಟರ್ನ ಮೊಕದ್ದಮೆಯ ಕುರಿತು ನ್ಯಾಯಾಧೀಶರು ಐದು ದಿನಗಳ ವಿಚಾರಣೆಯನ್ನು ಅಕ್ಟೋಬರ್ 17 ರಂದು ಪ್ರಾರಂಭಿವುದಾಗಿ ದೂರು ದಾಖಲಾಗಿರುವ ಡೆಲವೇರ್ ರಾಜ್ಯದ ಚಾನ್ಸೆರಿ ನ್ಯಾಯಾಧೀಶರು ತಿಳಿಸಿದ್ದಾರೆ

ಕಳೆದ ಏಪ್ರಿಲ್ನಲ್ಲಿ, ಮಸ್ಕ್ ಪ್ರತಿ ಷೇರಿಗೆ US$54.20 ರಂತೆ ಸರಿಸುಮಾರು US$44 ಶತಕೋಟಿಗೆ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಎಲಾನ್ ಮಸ್ಕ್ ಅವರು ಸಹಿ ಹಾಕಿದ್ದರು. ಅದಾದ ನಂತರ ಟ್ವಿಟ್ಟರ್ ಪ್ಲಾಟ್ಫಾರ್ಮ್ನಲ್ಲಿ ಶೇಕಡಾ 5 ಕ್ಕಿಂತ ಕಡಿಮೆ ಖಾತೆಗಳು ಬಾಟ್ಗಳು ಅಥವಾ ಸ್ಪ್ಯಾಮ್ಗಳಾಗಿವೆ ಎಂಬ ಟ್ವಿಟರ್ನ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಮ್ಮ ತಂಡಕ್ಕೆ ಅವಕಾಶ ಮಾಡಿಕೊಡಲು ಮಸ್ಕ್ ಒಪ್ಪಂದವನ್ನು ಮೇ ತಿಂಗಳಲ್ಲಿ ನಿಲ್ಲಿಸಿದರು. ಈ ಬೆಳವಣಿಗೆಯಲ್ಲಿ ಟ್ವಿಟರ್ ಅಗತ್ಯ ಮಾಹಿತಿಗಳ ಬಗ್ಗೆ ಎರಡು ತಿಂಗಳ ಕಾಲ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಕೆಲವೊಮ್ಮೆ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯೆಗಳು ಟ್ವಿಟರ್ ಅನ್ನು ನಿರಾಕರಿಸಲಾಗಿದೆ ಅಥವಾ ಮಾಹಿತಿಯನ್ನು ಒದಗಿಸಲಾಗಿಲ್ಲ ಎಂದು ಖರೀದಿಯ ಒಪ್ಪಂದವನ್ನು ಮುರಿದಿದ್ದರು.
Twitter's Battle With Elon Musk Over Dollar 44 Billion Deal Heads To Oct 17 Trial.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm